Monday, March 30, 2026
spot_img
More
    spot_img
    HomeLatest newsಇನ್ನು ಕೆ.ಆರ್.ಮಾರುಕಟ್ಟೆಯಲ್ಲಿ ಹೂವು ಸಿಗುವುದಿಲ್ಲ: ಮತ್ತೆಲ್ಲಿ ?

    ಇನ್ನು ಕೆ.ಆರ್.ಮಾರುಕಟ್ಟೆಯಲ್ಲಿ ಹೂವು ಸಿಗುವುದಿಲ್ಲ: ಮತ್ತೆಲ್ಲಿ ?

    ಕೆ.ಆರ್. ಮಾರುಕಟ್ಟೆಯಿಂದ ಹೂವಿನ ಮಾರುಕಟ್ಟೆ ಸ್ಥಳಾಂತರ ಮಾಡಲಾಗಿದೆ. ಹೂವಿನ ಮಾರುಕಟ್ಟೆಯನ್ನು ಸದ್ಯದಲ್ಲೇ ಬೇರೆ ಸ್ಥಳಕ್ಕೆ ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿದೆ.

    ಆರ್. ಮಾರುಕಟ್ಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗಿನ ಜಾವ 3 ಗಂಟೆಯಿಂದಲೇ ಹೂವಿನ ವ್ಯಾಪಾರ ಆರಂಭವಾಗುತ್ತದೆ. ಇದರಿಂದಾಗಿ ಈ ರಸ್ತೆಗಳಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು.ಮಾರುಕಟ್ಟೆಯಲ್ಲಿ ಸರಿಯಾದ ಸಂಸ್ಕರಣಾ ಘಟಕದ  ಕೊರತೆ ಇತ್ತು. ಇದರಿಂದ ರೈತರು ತಂದ ಹೂಗಳು ಸರಿಯಾದ ನಿರ್ವಹಣೆ ಇಲ್ಲದೆ ಹಾಳಾಗಿ, ಅವರಿಗೆ ನಷ್ಟ ಉಂಟಾಗುತ್ತಿತ್ತು. ಈ ಸಮಸ್ಯೆಗಳನ್ನು ಪರಿಹರಿಸಲು, ಸರ್ಕಾರವು ಹೂವಿನ ಮಾರುಕಟ್ಟೆಯನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲು ನಿರ್ಧರಿಸಿದೆ.

    ಹೊಸ ಹೂವಿನ ಮಾರುಕಟ್ಟೆಯು ಹೆಬ್ಬಾಳ ಬಳಿಯ ಜಿ.ಕೆ.ವಿ.ಕೆ  ಆವರಣಕ್ಕೆ ಸ್ಥಳಾಂತರವಾಗಲಿದೆ. ಸುಮಾರು 5 ಎಕರೆ ವಿಸ್ತೀರ್ಣದಲ್ಲಿ ಈ ಹೊಸ ಮಾರುಕಟ್ಟೆ ನಿರ್ಮಾಣವಾಗಲಿದ್ದು, ಇಲ್ಲಿ 400 ರಿಂದ 500 ಮಳಿಗೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.ಅಂತರರಾಷ್ಟ್ರೀಯ ಪುಷ್ಪ ಮಾರುಕಟ್ಟೆ ನಿರ್ಮಿಸಲು ತೋಟಗಾರಿಕೆ ಇಲಾಖೆ ಸಿದ್ಧತೆ ನಡೆಸಿದೆ. ಇದಕ್ಕಾಗಿ 942 ಮರಗಳನ್ನು ಕಡಿಯುವ ಸಾಧ್ಯತೆ ಇದೆ. ಈ ಮರಗಳಲ್ಲಿ ಐದು ವಿಧದ ಮಾವು (ಮಲ್ಲಿಕಾ, ಅಮ್ರಪಾಲಿ, ಬಂಗನ್‌ಪಲ್ಲಿ, ಕೇಸರ್ ಮತ್ತು ಬಾದಾಮಿ) ಸೇರಿವೆ, ಒಟ್ಟು 247 ಮರಗಳು, 120 ಸಿಲ್ವರ್ ಓಕ್ ಮರಗಳು, ಹಾಗೆಯೇ ಗೋಡಂಬಿ ಮತ್ತು ತೆಂಗಿನ ಮರಗಳು ಸೇರಿವೆ, ಇವೆಲ್ಲವೂ ಎಂಟು ರಿಂದ ಹತ್ತು ವರ್ಷ ವಯಸ್ಸಿನವು, ಯುಎಚ್‌ಎಸ್‌ಗೆ ವಾರ್ಷಿಕ ₹4.85 ಲಕ್ಷ ಆದಾಯವನ್ನು ತರುತ್ತವೆ.

    ಸ್ಥಳಾಂತರಕ್ಕಿಂತ ಈಗಿರುವ ಕೆಆರ್ ಮಾರುಕಟ್ಟೆಯಲ್ಲೇ ವ್ಯವಸ್ಥೆ ಸುಧಾರಿಸಲಿ, ಕೆಆರ್ ಮಾರುಕಟ್ಟೆಯ ಹೂವಿನ ಮಂಡಿಯನ್ನು ಹೆಬ್ಬಾಳಕ್ಕೆ ಸ್ಥಳಾಂತರಿಸುವ ಯೋಜನೆಗೆ ವ್ಯಾಪಾರಸ್ಥರಿಂದ ಹಿಡಿದು ಪರಿಸರವಾದಿಗಳವರೆಗೂ ಎಲ್ಲರೂ ವಿರೋಧ ವ್ಯಕ್ತಪಡಿಸಿದ್ದಾರೆ.

    ಹೂ ಖರೀದಿಸಲು ಪ್ರತಿದಿನ ಬರುವ ಸಾವಿರಾರು ಜನರು ಹೆಬ್ಬಾಳದತ್ತ ತೆರಳಬೇಕಾದರೆ, ಸಮಯ ಮತ್ತು ಪ್ರಯಾಣದ ತೊಂದರೆ ಹೆಚ್ಚುತ್ತದೆ. ಕೇಂದ್ರ ಭಾಗದಲ್ಲಿರುವ ಕೆಆರ್ ಮಾರುಕಟ್ಟೆ ಎಲ್ಲರಿಗೂ ತಲುಪಲು ಸುಲಭವಾಗಿದೆ. ಎಂದು ಜನರು ಪ್ರತಿಕ್ರಿಯೆ ನೀಡಿದ್ದಾರೆ.

    ‘₹40 ಕೋಟಿ ವೆಚ್ಚದಲ್ಲಿ ಅಂತರ ರಾಷ್ಟ್ರೀಯ ಪುಷ್ಪ ಮಾರುಕಟ್ಟೆ ನಿರ್ಮಿಸ ಲಾಗುತ್ತಿದೆ. ಇದರಲ್ಲಿ 250ರಿಂದ 300 ಮಳಿಗೆಗಳು, ಡಿಜಿಟಲ್‌ ಹರಾಜು ಸಭಾಂಗಣ, ಶೀತಲ ಗೃಹಗಳು, ವಾಹನ ನಿಲುಗಡೆ ವ್ಯವಸ್ಥೆ, ಪುಷ್ಪ ಬೆಳೆಗಳ ಕೊಯ್ಲೋತ್ತರ ನಿರ್ವಹಣೆ, ಹೂವು ಒಣಗಿಸುವ ತಂತ್ರಜ್ಞಾನ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ’ ಎಂದು ಕೃಷಿ ಮಾರಾಟ ಇಲಾಖೆ ತಿಳಿಸಿದೆ.

    ,


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬಿಗ್ ನ್ಯೂಸ್! ಬೆಂಗಳೂರು ಕರಗ ಉತ್ಸವಕ್ಕೆ ಸಜ್ಜು—1000ಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆ, ₹1.70 ಕೋಟಿ ವೆಚ್ಚ!

    “ಬೆಂಗಳೂರು ಕರಗ ಉತ್ಸವ 2026” ಮತ್ತೆ ನಗರಕ್ಕೆ ಸಾಂಸ್ಕೃತಿಕ ಸಂಭ್ರಮ ತರಲು ಸಜ್ಜಾಗಿದೆ! ಏಪ್ರಿಲ್ 1ರಂದು ನಡೆಯಲಿರುವ ಈ ಐತಿಹಾಸಿಕ ಉತ್ಸವಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ಭದ್ರತೆ ಮತ್ತು ವ್ಯವಸ್ಥೆಗಾಗಿ ಸರ್ಕಾರದಿಂದ ವಿಶೇಷ...

    ಬ್ರೇಕಿಂಗ್ರಾ! ಮನವಮಿ ಹಬ್ಬಕ್ಕೆ ಮಾರುಕಟ್ಟೆ ಬಂದ್ ಆಗುತ್ತಾ? ಹೂಡಿಕೆದಾರರಿಗೆ ಕ್ಲಿಯರ್ ಮಾಹಿತಿ!

    “ಸ್ಟಾಕ್ ಮಾರ್ಕೆಟ್ ಹಾಲಿಡೇ 2026” ಇದೀಗ ಹೂಡಿಕೆದಾರರಲ್ಲಿ ದೊಡ್ಡ ಗೊಂದಲ ಮೂಡಿಸಿದೆ. ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಅಥವಾ ಶುಕ್ರವಾರ ಷೇರು ಮಾರುಕಟ್ಟೆ ಬಂದ್ ಆಗುತ್ತದೆಯಾ? ಎಂಬ ಪ್ರಶ್ನೆ ಟ್ರೇಡರ್‌ಗಳ ನಡುವೆ ಭಾರೀ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading