ಪಾಟ್ನಾ: ಜಿದ್ದಾಜಿದ್ದಿನ ರಣರಂಗವಾಗಿರುವ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ರಾಜಕೀಯ ಪಕ್ಷಗಳಲ್ಲಿನ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ.
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರಮೋದಿ ಅವರ ತಾಯಿ ದಿವಂಗತ ಹೀರಾಬೆನ್ ಕುರಿತು ಟೀಕೆ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದ ಕಾಂಗ್ರೆಸ್ ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.
ಮೋದಿಯವರ ತಾಯಿಯನ್ನು ಗುರಿಯಾಗಿಟ್ಟುಕೊಂಡು ಕೃತಕಬುದ್ದಿಮತೆ(ಎಐ) ಮೂಲಕ ಎರಡು ಪಾತ್ರಗಳನ್ನು ಸೃಷ್ಟಿಸಿ ವಿಡಿಯೋ ಹರಿಬಿಟ್ಟಿರುವುದು ಪ್ರಕರಣಕ್ಕೆ ಕಾರಣವಾಗಿದೆ.
ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ಲಾಗಿದ್ದು, ಬಿಜೆಪಿ ಮತ್ತು ಮತ್ತಿತರ ಪಕ್ಷಗಳ ಮುಖಂಡರು ಕಾಂಗ್ರೆಸ್ನ ಅಸಲಿ ಬಣ್ಣ ಕೊನೆಗೂ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದರ ಬಗ್ಗೆ ತನಿಖೆಗೆ ಸ್ಥಳೀಯ ಕಾಂಗ್ರೆಸ್ ಘಟಕ ಸೂಚನೆ ಕೊಟ್ಟಿದೆ.
ಕಾಂಗ್ರೆಸ್ ಬಿಡುಗಡೆ ಮಾಡಿರುವ ಎಐ ವಿಡಿಯೋ ವಿರುದ್ಧ ಕೆಂಡಕಾರಿರುವ ಬಿಜೆಪಿ, ಇದು ಜೀವಂತವಾಗಿಲ್ಲದ ವ್ಯಕ್ತಿಯನ್ನು ಗುರಿಯಾಗಿಸುವ ಅಸಹ್ಯಕರ ಪ್ರಯತ್ನ ಎಂದು ಕರೆದಿದೆ. ಅಲ್ಲದೇ, ಪಶ್ಚಾತ್ತಾಪಪಡುವ ಬದಲು ಪ್ರಧಾನಿಯವರ ತಾಯಿಯ ವಿರುದ್ಧದ ತನ್ನ ಹಿಂದಿನ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದೆ.
ಪ್ರಧಾನಿ ತಾಯಿಯವರನ್ನು ನಿಂದಿಸಿದ್ದಕ್ಕಾಗಿ ಪಶ್ಚಾತ್ತಾಪ ಪಡುವ ಬದಲು ಕಾಂಗ್ರೆಸ್ ಸಮರ್ಥನೆ ನೀಡಿತು, ಮಾತ್ರವಲ್ಲದೆ ಆರೋಪಿಗಳನ್ನು ಸುಳ್ಳುಗಳಿಂದ ಸಮರ್ಥಿಸಿತು. ತಾರಿಕ್ ಅನ್ವರ್ ಕೂಡ ಸಮರ್ಥಿಸಿಕೊಂಡರು ಮತ್ತು ಈಗ ಬಿಹಾರ ಕಾಂಗ್ರೆಸ್ ಅಸಹ್ಯಕರ ವೀಡಿಯೊದೊಂದಿಗೆ ಎಲ್ಲಾ ಮಿತಿಗಳನ್ನು ಮೀರಿದೆ.
ಈ ಪಕ್ಷವು ಗಾಂಧಿವಾದಿ ಮಹಿಳಾ ಔರ್ ಮಾತ್ರು ಶಕ್ತಿ ಕಾ ಅಪಾನ್ (ಮಹಿಳೆಯರಿಗೆ ಅವಮಾನ) ಮಾಡುತ್ತಿದೆ. ಕಾಂಗ್ರೆಸ್ ಕಿ ಪೆಹಚಾನ್ ಬಿಹಾರವನ್ನು ಬೀಡಿ ಎಂದು ನಿಂದಿಸುವುದು, ನಮೊಂದಿಗೆ ಇಲ್ಲದ ವ್ಯಕ್ತಿಯನ್ನು ನಿಂದಿಸುವುದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಲ್ಲ ಹೇಳಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಕೂಡ ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು, ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಗೆ ಅವಮಾನ ಮಾಡುವುದನ್ನು ಮುಂದುವರೆಸಿದೆ. ಬಿಹಾರದ ತಾಯಂದಿರು ಮತ್ತು ಸಹೋದರಿಯರನ್ನು ಅಪಹಾಸ್ಯ ಮಾಡುವ ಆರ್ಜೆಡಿ ಮತ್ತು ಕಾಂಗ್ರೆಸ್ಗೆ ಬಿಹಾರದ ಜನರು ಸೂಕ್ತ ಉತ್ತರ ನೀಡುತ್ತಾರೆ ಎಂದು ಅವರು ಹೇಳಿದ್ದಾರೆ.
ಅಲ್ಲದೇ ಕಾಂಗ್ರೆಸ್ ನ ರಾಹುಲ್ ಗಾಂಧಿಯವರ ಆಜ್ಞೆಯ ಮೇರೆಗೆ ಇದೆಲ್ಲವೂ ನಡೆಯುತ್ತಿದೆ ಎಂದು ಭಂಡಾರಿ ಆರೋಪಿಸಿದ್ದು, ಈ ಹಿಂದೆ ಪೋಸ್ಟ್ ಮಾಡಿದ ವೀಡಿಯೊ ಹೇಳಿಕೆಯಲ್ಲಿ, ಕಾಂಗ್ರೆಸ್ ನ ಶಾಹಿ ಪರಿವಾರ್ ಭಾರತದ ತಾಯಂದಿರು ಮತ್ತು ಸಹೋದರಿಯರನ್ನು ಅವಮಾನಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ತಾಯಿಯ ವಿರುದ್ಧದ ಎಐ ವಿಡಿಯೋ ಸಂದೇಶವನ್ನು ಮಂಗಳವಾರ ಖಂಡಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಇದು ಕೀಳು ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಮದ್ದೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಮಾನತು
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


