Wednesday, April 1, 2026
spot_img
More
    spot_img
    HomeLatest newsಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿವಾಸದ ಹತ್ತಿರ ಐಷಾರಾಮಿ ಕಾರು ಪತ್ತೆ

    ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿವಾಸದ ಹತ್ತಿರ ಐಷಾರಾಮಿ ಕಾರು ಪತ್ತೆ

    ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸದ ಸಮೀಪ ಅನುಮಾನಾಸ್ಪದವಾಗಿ ನಿಲ್ಲಿಸಿದ್ದ ಟೊಯೋಟಾ ಫಾರ್ಚೂನರ್ ಕಾರೊಂದನ್ನು ಸಂಚಾರ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಕಾರಿಗೆ ಎರಡು ನಂಬರ್ ಪ್ಲೇಟ್‌ಗಳನ್ನು ಅಳವಡಿಸಿರುವುದು ಬಯಲಾಗಿದ್ದು, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಸೆಪ್ಟೆಂಬರ್ 7ರಂದು ಡಿಸಿಎಂ ನಿವಾಸದ ಬಳಿ ಬಿಳಿ ಬಣ್ಣದ ಫಾರ್ಚೂನರ್ ಕಾರು ದೀರ್ಘಕಾಲದವರೆಗೆ ನಿಂತಿತ್ತು. ಸಂಚಾರಿ ಪೊಲೀಸರು ಅದನ್ನು ಗಮನಿಸಿ, ಅದರ ಚಾಲಕನನ್ನು ಹುಡುಕಿದರೂ ಯಾರೂ ಇರಲಿಲ್ಲ. ಕಾರನ್ನು ಟೋಯಿಂಗ್ ಮಾಡುವ ಸಂದರ್ಭದಲ್ಲಿ, ಅದರ ಮುಂಭಾಗದಲ್ಲಿ KA 51 MW 6814 ಎಂಬ ನಕಲಿ ನಂಬರ್ ಪ್ಲೇಟ್ ಅಂಟಿಸಿರುವುದು ಕಂಡುಬಂದಿತು.

    ಈ ನಂಬರ್ ಪ್ಲೇಟ್‌ನ ಮಾಲೀಕ ದೀಪಕ್‌ಗೆ ಕರೆ ಮಾಡಿದಾಗ, ಅವರ ಕಾರು ಮನೆಯಲ್ಲೇ ಇದೆ ಎಂದು ತಿಳಿಸಿದ್ದು ಪೊಲೀಸರಿಗೆ ಗೊಂದಲ ಮೂಡಿಸಿತು.ಪೊಲೀಸರು ಕಾರಿನ ಹಿಂಭಾಗವನ್ನು ಪರಿಶೀಲಿಸಿದಾಗ, ನಕಲಿ ನಂಬರ್ ಪ್ಲೇಟ್‌ನ ಕೆಳಗೆ KA 42 P 6606 ಎಂಬ ಅಸಲಿ ನಂಬರ್ ಪ್ಲೇಟ್ ಇರುವುದು ಪತ್ತೆಯಾಯಿತು.

    ಕಾರಿನ ಮೂಲ ನಂಬರ್ ಪ್ಲೇಟ್ ರಾಮನಗರದ ಆರ್‌ಟಿಒ(RTO) ಕಚೇರಿಯಲ್ಲಿ ಮಂಜುನಾಥ್ ಎಂಬುವವರ ಹೆಸರಿನಲ್ಲಿ ನೋಂದಣಿಯಾಗಿದೆ.ಎಂಎನ್‌ಐ ಕಟ್ಟದಿರುವ ಕಾರಣ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಕಳ್ಳಾಟ ನಡೆಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

    ಈ ಹಿನ್ನೆಲೆಯಲ್ಲಿ ಪೊಲೀಸರು ಮಂಜುನಾಥ್ ವಿರುದ್ಧ ಪ್ರಕರಣ ದಾಖಲಿಸಿ ನೋಟಿಸ್ ಜಾರಿ ಮಾಡಿದ್ದಾರೆ.ಕಾರನ್ನು ಜಪ್ತಿ ಮಾಡಿ ಐದು ದಿನಗಳು ಕಳೆದರೂ ಮಾಲೀಕ ಮಂಜುನಾಥ್ ಇದುವರೆಗೂ ಕಾರನ್ನು ಬಿಡಿಸಿಕೊಳ್ಳಲು ಬಂದಿಲ್ಲ. ಒಂದೇ ಕಾರಿಗೆ ಎರಡು ನಂಬರ್ ಪ್ಲೇಟ್‌ಗಳನ್ನು ಬಳಸಿದ್ದರ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬಿಗ್ ನ್ಯೂಸ್! ಧೋನಿ ಹೊಸ ಇನ್ವೆಸ್ಟ್‌ಮೆಂಟ್… ‘ಕುಕು’ ಜೊತೆ ಕೈಜೋಡನೆ!

    ಕ್ರಿಕೆಟ್ ಲೆಜೆಂಡ್ ಮಹೇಂದ್ರ ಸಿಂಗ್ ಧೋನಿ ಈಗ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದ್ದಾರೆ! ‘ಕುಕು ಟಿವಿ’ ಹೂಡಿಕೆ ವಿಚಾರ ಈಗ ಸಕತ್ ಟ್ರೆಂಡ್ ಆಗಿದೆ. ಕ್ರೀಡಾಂಗಣದಲ್ಲಿ ಸಾಧನೆ ಮಾಡಿದ ಧೋನಿ, ಇದೀಗ ಡಿಜಿಟಲ್...

    ಬಿಗ್ ನ್ಯೂಸ್! ಬೆಂಗಳೂರು ಕರಗ ಉತ್ಸವಕ್ಕೆ ಸಜ್ಜು—1000ಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆ, ₹1.70 ಕೋಟಿ ವೆಚ್ಚ!

    “ಬೆಂಗಳೂರು ಕರಗ ಉತ್ಸವ 2026” ಮತ್ತೆ ನಗರಕ್ಕೆ ಸಾಂಸ್ಕೃತಿಕ ಸಂಭ್ರಮ ತರಲು ಸಜ್ಜಾಗಿದೆ! ಏಪ್ರಿಲ್ 1ರಂದು ನಡೆಯಲಿರುವ ಈ ಐತಿಹಾಸಿಕ ಉತ್ಸವಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ಭದ್ರತೆ ಮತ್ತು ವ್ಯವಸ್ಥೆಗಾಗಿ ಸರ್ಕಾರದಿಂದ ವಿಶೇಷ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading