ನೂರಾರು ಶವಗಳನ್ನು ತೋರಿಸುತ್ತೇನೆ ಎಂದು ಹೇಳುತ್ತಿದ್ದ ಚಿನ್ನಯ್ಯ ಒಟ್ಟು 17 ಕಡೆ ಅಗೆಸಿದ.ಕೇವಲ ಎರಡು ಕಡೆ ಮಾತ್ರ ಅಸ್ತಿಪಂಜರದ ಅವಶೇಷಗಳು ಪತ್ತೆಯಾಗಿವೆ. ಗಿರೀಶ್ ಮಟ್ಟೆಣ್ಣವರ್ ಹೊಸ ವಿಡಿಯೊವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಮೊದಲೆಲ್ಲ ನೂರಾರು ಶವಗಳನ್ನು ಹೂತಿದ್ದೆ ಎನ್ನುತ್ತಿದ್ದ ಚಿನ್ನಯ್ಯ ಸರಿಯಾದ ಜಾಗಗಳನ್ನು ತೋರಿಸಿಲ್ಲ ಎನ್ನುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.
ಗಿರೀಶ್ ಮಟ್ಟೆಣ್ಣವರ್ ಹೊಸ ವಿಡಿಯೊವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಮೊದಲೆಲ್ಲ ನೂರಾರು ಶವಗಳನ್ನು ಹೂತಿದ್ದೆ ಎನ್ನುತ್ತಿದ್ದ ಚಿನ್ನಯ್ಯ ಸರಿಯಾದ ಜಾಗಗಳನ್ನು ತೋರಿಸಿಲ್ಲ ಎನ್ನುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.
ಗಿರೀಶ್ ಮಟ್ಟೆಣ್ಣವರ್ ಚಿನ್ನಯ್ಯ ಯಾವಾಗ ದೂರು ಕೊಟ್ಟನೋ ಆಗ ನಕಲಿ ದೇವಮಾನವನ ಡಿ ಗ್ಯಾಂಗ್ ಹಾಗೂ ನಕಲಿ ಪತ್ರಕರ್ತನ ಸಿಂಡಿಕೇಟ್ ಉಜಿರೆಯಿಂದ ಆತನ ಊರಿಗೆ ಹೋಗಿ ಆತನ ಮನೆಯ ಮಾಲೀಕನಿಗೆ ಹಾಗೂ ಊರಿನ ಮುಖಂಡರಿಗೆ ಆಮಿಷ ಕೊಟ್ಟು ಆತನ ಕುಟುಂಬವನ್ನು ಮನೆಯಿಂದ ಹೊರಗೆ ಹಾಕಿಸುವ ಪ್ರಯತ್ನ ಮಾಡಿದೆ ಎಂದಿದ್ದಾರೆ.
ನಾನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಂದೇಶ ಕಳುಹಿಸಿ ಆತನ ಕುಟುಂಬಕ್ಕೆ ರಕ್ಷಣೆ ಕೊಡಿ ಎಂದಿದ್ದೆ. ಅದರ ಸಾಕ್ಷಿ ಸಹ ಇದೆ. ಈ ರೀತಿ ರಕ್ಷಣೆ ಕೊಡಿ ಎಂದರೆ ಯಾರೂ ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಅವತ್ತೇ ಆತನಿಗೆ ಮೊದಲ ಧಮ್ಕಿ ಹಾಕಿದರು. ಆ ಸಮಯದಲ್ಲಿ ಏನಾದರೂ ಸಂಬಂಧಪಟ್ಟ ಅಧಿಕಾರಿಗಳು ರಕ್ಷಣೆ ಕೊಟ್ಟಿದ್ದರೆ ಇಷ್ಟೊತ್ತಿಗೆ ನೂರಾರು ಶವಗಳು ಅಚೆ ಬಂದಿರುತ್ತಿದ್ದವು. ಆ ಹೆದರಿಕೆಯಿಂದಲೇ ಬಹುಶಃ ಆತ ತಪ್ಪು ತಪ್ಪು ಜಾಗಗಳನ್ನು ತೋರಿಸಿರಬಹುದು ಎಂಬ ಮಾಹಿತಿಗಳು ನಮಗೆ ಬರುತ್ತಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
,ಟ್ರಾಫಿಕ್ ಫೈನ್ಗೆ 50% ರಿಯಾಯಿತಿ: ನಾಲ್ಕು ದಿನಗಳಲ್ಲಿ ₹14.8 ಕೋಟಿ ಸಂಗ್ರಹಿಸಿ ದಾಖಲೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


