Thursday, March 26, 2026
spot_img
More
    spot_img
    HomeEntertainmentತೆರೆ ಮೇಲೆ ಒಂದು ನಿಜ ಜೀನವದಲ್ಲಿ ಒಂದು: ರಾಜ್‌ಕುಮಾರ್‌ ನೋಡಿ ಕಲಿಯಿರಿ; ದರ್ಶನ್‌ಗೆ ಸಿದ್ದರಾಮಯ್ಯ ಬುದ್ದಿವಾದ?

    ತೆರೆ ಮೇಲೆ ಒಂದು ನಿಜ ಜೀನವದಲ್ಲಿ ಒಂದು: ರಾಜ್‌ಕುಮಾರ್‌ ನೋಡಿ ಕಲಿಯಿರಿ; ದರ್ಶನ್‌ಗೆ ಸಿದ್ದರಾಮಯ್ಯ ಬುದ್ದಿವಾದ?

    ಮೈಸೂರು: ಸಾಂಸ್ಕೃತಿಕ ನಗರಿಯ ಘಟಿಕೋತ್ಸವ ಭವನದಲ್ಲಿ ನಡೆದ 2018 ಹಾಗೂ 2019ನೇ ಸಾಲಿನ ಕನ್ನಡ ಚಲನಚಿತ್ರಗಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

    ಈ ವೇಳೆ 2018 ಹಾಗೂ 2019ರಲ್ಲಿ ತೆರೆಗೆ ಬಂದ ಚಿತ್ರಗಳು ಹಾಗೂ ಆ ವರ್ಷಗಳಲ್ಲಿ ಸೆನ್ಸಾರ್‌ ಆದ ಚಿತ್ರಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

    ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ನಟರು ತೆರೆ ಮೇಲೆ ಹೇಗಿರುತ್ತಾರೋ ಅದೇ ರೀತಿ ನಿಜ ಜೀನವದಲ್ಲೂ ಸಹ ಬದುಕಬೇಕು ಎಂದು ಹೇಳಿಕೆಯನ್ನು ನೀಡಿದರು. ಈ ಹೇಳಿಕೆ ಸದ್ಯ ಭಾರೀ ಚರ್ಚೆಗಳನ್ನು ಹುಟ್ಟುಹಾಕಿದ್ದು, ತೆರೆ ಮೇಲೆ ಒಳ್ಳೆಯ ಪಾತ್ರಗಳನ್ನು ಮಾಡಿ ಯುವ ಜನತೆಗೆ ಸಂದೇಶ ಕೊಟ್ಟು ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರುವ ದರ್ಶನ್‌ಗೆ ಕೊಟ್ಟ ಕೌಂಟರ್‌ ಇರಬಹುದಾ ಎಂಬ ಪ್ರಶ್ನೆ ಎದ್ದಿದೆ.

    ʼಚಿತ್ರಗಳನ್ನು ಮಾಡಿದರೆ ಸಮಾಜದಲ್ಲಿ ಬದಲಾವಣೆಯಾಗುವಂತಹ ಚಿತ್ರಗಳನ್ನು ಮಾಡಬೇಕು. ಈ ಹಿಂದೆಯೂ ಸಹ ಚಿತ್ರಗಳಿಂದ ಸಮಾಜದಲ್ಲಿ ಬಹಳಷ್ಟು ಬದಲಾವಣೆಯಾಗಿರುವುದನ್ನು ಕಂಡಿದ್ದೇವೆ, ಸಿನಿಮಾ ನೋಡಿ ಪರಿವರ್ತನೆಯಾದ ಬಹಳಷ್ಟು ಜನರನ್ನು ನೋಡಿದ್ದೇವೆ. ಹೀರೊಗಳ ಹಾಗೆ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳುವವರನ್ನೂ ಸಹ ನೋಡಿದ್ದೇವೆ. ಈಗ ಚಿತ್ರ ನೋಡಿ ಬದಲಾವಣೆಯಾಗುವಂಥದ್ದು ಬಹಳ ಕಡಿಮೆಯಾಗಿದೆʼ ಎಂದು ಸಿದ್ದರಾಮಯ್ಯ ತಿಳಿಸಿದರು.

    ಮುಂದುವರಿದು ಮಾತನಾಡಿದ ಮುಖ್ಯಮಂತ್ರಿ ʼಸಿನಿಮಾ ತಾರೆಯರೆಂದರೆ ಜನರಿಗೆ ಬಹಳ ಗೌರವ. ಹಾಗೆಯೇ ಅವರನ್ನು ಅನುಸರಿಸುವುದೂ ಸಹ ಜಾಸ್ತಿ ಇರುತ್ತದೆ. ಹಾಗಾಗಿ ನೀವು ತೆರೆ ಮೇಲೆ ಹೇಗೆ ನಟಿಸುತ್ತೀರೋ ಹಾಗೆಯೇ ನಿಜ ಜೀವನದಲ್ಲಿಯೂ ಸಹ ಇದ್ದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯʼ ಎಂದು ಹೇಳಿದರು. ಇದು ದರ್ಶನ್‌ಗೆ ಪರೋಕ್ಷವಾಗಿ ಬುದ್ದಿವಾದ ಹೇಳಿದಂತಿತ್ತು.

    ಅಲ್ಲದೇ ʼರಾಜ್‌ಕುಮಾರ್‌ ಅವರು ಸಿನಿಮಾದಲ್ಲಿ ಹೇಗೆ ಇರುತ್ತಾ ಇದ್ದರೋ ಅದೇ ರೀತಿ ನಿಜ ಜೀವನದಲ್ಲೂ ಸಹ ಅಳವಡಿಸಿಕೊಳ್ಳುವ ಕೆಲಸವನ್ನು ಮಾಡುತ್ತಾ ಇದ್ದರು. ಅದಕ್ಕಾಗಿಯೇ ಅವರನ್ನು ಇಷ್ಟು ವರ್ಷಗಳಾದರೂ ಸಹ ನೆನಪಿಸಿಕೊಳ್ಳುವ ಕೆಲಸವನ್ನು ಜನರು ಮಾಡುತ್ತಾರೆ. ಅವರು ಮಾಡಿರುವ ಸಿನಿಮಾಗಳು ಸಮಾಜದಲ್ಲಿ ಬದಲಾವಣೆ ತರುವಂತಹ ಕೆಲಸ ಮಾಡಿವೆʼ ಎಂದರು.

    ಪ್ಯಾನ್ ಕಾರ್ಡ್ ಬಳಕೆದಾರರಿಗೆ ಅಲರ್ಟ್: ಆಧಾರ್ ಲಿಂಕ್ ಕಡ್ಡಾಯ; ಡಿಸೆಂಬರ್ 31 ರೊಳಗೆ ಮಾಡದಿದ್ದರೆ ಕಾರ್ಡ್ ರದ್ದು!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್ರಾ! ಮನವಮಿ ಹಬ್ಬಕ್ಕೆ ಮಾರುಕಟ್ಟೆ ಬಂದ್ ಆಗುತ್ತಾ? ಹೂಡಿಕೆದಾರರಿಗೆ ಕ್ಲಿಯರ್ ಮಾಹಿತಿ!

    “ಸ್ಟಾಕ್ ಮಾರ್ಕೆಟ್ ಹಾಲಿಡೇ 2026” ಇದೀಗ ಹೂಡಿಕೆದಾರರಲ್ಲಿ ದೊಡ್ಡ ಗೊಂದಲ ಮೂಡಿಸಿದೆ. ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಅಥವಾ ಶುಕ್ರವಾರ ಷೇರು ಮಾರುಕಟ್ಟೆ ಬಂದ್ ಆಗುತ್ತದೆಯಾ? ಎಂಬ ಪ್ರಶ್ನೆ ಟ್ರೇಡರ್‌ಗಳ ನಡುವೆ ಭಾರೀ...

    ಬ್ರೇಕಿಂಗ್! ಮಾರುಕಟ್ಟೆ ರಾಕೆಟ್—ಸೆನ್ಸೆಕ್ಸ್ 1300 ಪಾಯಿಂಟ್ ಜಿಗಿತ! ರೂಪಾಯಿ ಕುಸಿತ, ಚಿನ್ನ ಏರಿಕೆ… ಏನಿದು ಮಿಶ್ರ ಸಿಗ್ನಲ್?

    “ಸ್ಟಾಕ್ ಮಾರ್ಕೆಟ್ 24 ಮಾರ್ಚ್ 2026” ಹೂಡಿಕೆದಾರರಿಗೆ ಒಂದೇ ದಿನದಲ್ಲಿ ರೋಲರ್ ಕೋಸ್ಟರ್ ಅನುಭವ ನೀಡಿದೆ! ಒಂದೆಡೆ ಷೇರು ಮಾರುಕಟ್ಟೆ ಭರ್ಜರಿ ಏರಿಕೆ ಕಂಡಿದ್ದರೆ, ಇನ್ನೊಂದೆಡೆ ರೂಪಾಯಿ ಕುಸಿತ ಮತ್ತು ಚಿನ್ನದ ಬೆಲೆ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading