ಧರ್ಮಸ್ಥಳ ಬುರುಡೆ ಪ್ರಕರಣ ಕರ್ನಾಟಕ ಮಾತ್ರವಲ್ಲದೆ ಕೇರಳಕ್ಕೂ ವ್ಯಾಪಿಸಿತ್ತು. ಎಸ್ಐಟಿ ಅಧಿಕಾರಿಗಳು ಕೇರಳದ ಯೂಟ್ಯೂಬರ್ ಮನಾಫ್ರಿಗೂ ನೋಟಿಸ್ ಕೊಟ್ಟಿದ್ದರು.ಅಲಿಯಾಸ್ ಚಿನ್ನಯ್ಯ ನ್ಯಾಯಾಧೀಶರಿಗೆ ಕೊಟ್ಟ ಬುರುಡೆ ವಿಡಿಯೋ ಹಾಗೂ ಕೇರಳದ ಯೂಟ್ಯೂಬರ್ ಆದ ಮನಾಫ್ ಅವರು ಹಾಕಿದ್ದ ವಿಡಿಯೋ ಒಂದೇ ಮಾದರಿಯಲ್ಲಿದೆ ಎಂದು ಎಸ್ಐಟಿ ಮನಾಫ್ರಿಗೆ ನೋಟಿಸ್ ಕೊಟ್ಟಿದೆ.
ಧರ್ಮಸ್ಥಳ ಪರಿಸರದಲ್ಲಿ ಮಾಡಿದ ವಿಡಿಯೋ ಜುಲೈ 11 ರಂದು ಮನಾಫ್ ಅಪ್ಲೋಡ್ ಮಾಡಿದ್ದರು. ಇದೀಗ ಸುಜಾತ ಭಟ್ ಪರ ನಿಂತಿದ್ದಕ್ಕೆ ತಮಗಾದ ಅನುಭವದ ಬಗ್ಗೆ ಮನಫ್ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ತಮಗಾದ ಅವಮಾನದ ಬಗ್ಗೆ ಮಾತಾನಾಡಿದ್ದಾರೆ ಮನಾಫ್.
ಕೇರಳದಲ್ಲಿ ನಾನೊಬ್ಬನೆ ಧರ್ಮಸ್ಥಳ ಹೋರಾಟದಲ್ಲಿ ನಿಂತಿರುವುದು.ಎಷ್ಟೊಂದು ಜನ ಇವರಿಂದ ನನಗೆ ಅವಮಾನಿಸಿದ್ದಾರೆ ಆದರೆ ಸುಜಾತ ಭಟ್ ನನ್ನ ಅಮ್ಮನಂತೆ ಎಂದು ಭಾವಿಸಿದ್ದ ಹೀಗಾಗಿ ಅವರ ಪರ ನಿಂತೆ. ಆದ್ರೆ ಅವರು ಅನನ್ಯಾ ಭಟ್ ನನ್ನ ಮಗಳೇ ಅಲ್ಲ ಎಂದು ಉಲ್ಟಾ ಹೊಡೆದಿರುವುದು ನನ್ನ ಮರ್ಯಾದೆ ತೆಗೆಯುವಂತೆ ಮಾಡಿದೆ. ಸುಜಾತಾ ಭಟ್ ಮೇಲೆ ಒಂದು ವಿಶ್ವಾಸವಿತ್ತು ಅದೀಗ ಇಲ್ಲ.
ಸುಜಾತಾ ಭಟ್ ದಿನಕ್ಕೆ ಒಂದೊಂದು ಹೇಳಿಕೆ ಕೊಡ್ತಿದ್ದಾರೆ. ಇಂತವರಿಗೆ ನಾವು ಪ್ರಾಮುಖ್ಯತೆ ಕೊಡಲೇ ಬಾರದು. ಸುಜಾತಾ ಭಟ್ ಅವರಿಂದ ನನಗೆ ಅವಮಾನ ಆಗಿದೆ. ಇವರಿಂದ ನನಗೆ ಬೇಜಾರಾಗುತ್ತಿದೆ ಜೊತೆಗೆ ಟೆನ್ಶನ್ ಆಗುತ್ತಿದೆ. ಎಂದು ಆಡಿಯೋದಲ್ಲಿ ಹೇಳಿಕೆ ಕೊಟ್ಟಿದ್ದಾರೆ.
ಮನಾಫ್ ಕಳೆದ ವರ್ಷ ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ನದಿಪಾಲಾಗಿದ್ದ ಲಾರಿ ಮತ್ತು ಚಾಲಕನ ಮಾಲೀಕ ಈತ ಎಂದು ಬಲ್ಲ ಮೂಲಗಳು ತಿಳಿಸಿವೆ. ಯೂಟ್ಯೂಬರ್ ಆಗಿ ಪ್ರಸಿದ್ಧಿ ಪಡೆದಿರುವ ಮನಾಫ್, ಎರಡು ತಿಂಗಳ ಹಿಂದೆ ಧರ್ಮಸ್ಥಳಕ್ಕೆ ಬಂದು ನೇತ್ರಾವತಿ ಸ್ನಾನಘಟ್ಟದ ಪಕ್ಕದ ಬಂಗ್ಲೆಗುಡ್ಡೆ ಪರಿಸರದಲ್ಲಿ ಚಿತ್ರೀಕರಣ ಮಾಡಿ ಯೂಟ್ಯೂಬ್ಗೆ ಜುಲೈ 11 ರಂದು ಅಪ್ಲೋಡ್ ಮಾಡಿದ್ದ ಎನ್ನಲಾಗಿದೆ.
ಇದು ಚಿನ್ನಯ್ಯ ಅಲಿಯಾಸ್ ಅನಾಮಿಕ ದೂರುದಾರನ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಥಮ ವಿಡಿಯೋ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊಚ್ಚಿಕೊಡು ಮೂಲದ ಮನಾಫ್ರ ವಿಚಾರಣೆ ಮಾಡಲು ಎಸ್ಐಟಿ ಮುಂದಾಗಿತ್ತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


