Monday, July 6, 2026
spot_img
More
    spot_img
    HomeLatest newsMSME ವಲಯದಲ್ಲಿ ಭರ್ಜರಿ ಆಫ‌ರ್ ಘೋಷಣೆ;5 ಕೋಟಿಯಿಂದ 10 ಕೋಟಿವರೆಗೆ ಸಾಲ ಹೆಚ್ಚಳ

    MSME ವಲಯದಲ್ಲಿ ಭರ್ಜರಿ ಆಫ‌ರ್ ಘೋಷಣೆ;5 ಕೋಟಿಯಿಂದ 10 ಕೋಟಿವರೆಗೆ ಸಾಲ ಹೆಚ್ಚಳ

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಎಂಎಸ್ಎಂಇ(MSME) ಮತ್ತು ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಸಾಲದ ಪ್ರಮಾಣವನ್ನು ಹೆಚ್ಚಿಸಿದ್ದಾರೆ.ಎಸ್‌ಸಿ, ಎಸ್‌ಟಿ ಮಹಿಳಾ ಉದ್ಯಮಿಗಳಿಗಾಗಿ ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು, ಈ ಹಿಂದೆ ನೀಡಲಾಗುತ್ತಿದ್ದ 5 ಕೋಟಿ ರೂಪಾಯಿ ಸಾಲದ ಪ್ರಮಾಣವನ್ನು ಮುಂದಿನ 5 ವರ್ಷಗಳಲ್ಲಿ 2 ಕೋಟಿ ರೂ.ಗಳವರೆಗೆ ಅವಧಿ ಸಾಲ ನೀಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಸುಧಾರಣೆಗಳಿಗಾಗಿ ರಾಜ್ಯಗಳಿಗೆ 1.5 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ನಿಬಂಧನೆಯನ್ನು ನೀಡಲಾಗುತ್ತಿದೆ. ಇದು ಮೂಲಸೌಕರ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಹಂಚಿಕೆಯನ್ನು ರಾಜ್ಯಗಳಿಗೆ ಬಡ್ಡಿರಹಿತವಾಗಿ ಮಾಡಲಾಗುತ್ತದೆ ಎಂದಿದ್ದಾರೆ.ಸೂಕ್ಷ್ಮ, ಸಣ್ಣ & ಮಧ್ಯಮ ಉದ್ಯಮಗಳ ಸಂಖ್ಯೆ 5.7 ಕೋಟಿ,1 ಕೋಟಿ ರಿಜಿಸ್ಟರ್ ಆಗಿರುವ ಎಂಎಸ್​ಎಂಇಗಳಲ್ಲಿ ಸುಮಾರು 7.5 ಕೋಟಿ ಜನರು ಉದ್ಯೋಗಿಗಳಿದ್ದಾರೆ. ಇದು ಭಾರತವನ್ನು ವಿಶ್ವದಲ್ಲಿ ಉತ್ಪಾದನಾ ಕೇಂದ್ರವನ್ನಾಗಿ ಮಾಡುವಲ್ಲಿ ಸಹಾಯಕವಾಗಿದೆ. ಈ MSMEಗಳು ರಫ್ತನ ಶೇಕಡಾ 45 ರಷ್ಟನ್ನು ಹೊಂದಿವೆ.MSME ವರ್ಗೀಕರಣದ ಹೂಡಿಕೆ ಮಿತಿಯನ್ನು 2.5 ಪಟ್ಟು ಹೆಚ್ಚಿಸಲಾಗುವುದು. ವರ್ಗೀಕರಣದ ವಹಿವಾಟು ಮಿತಿಯನ್ನು ದ್ವಿಗುಣಗೊಳಿಸಲಾಗುವುದು,ಉತ್ತಮವಾಗಿ ನಡೆಸುವ ರಫ್ತುದಾರ ಎಂಎಸ್​ಎಂಇಗಳಿಗೆ 20 ಕೋಟಿ ರೂ.ಗಳ ಅವಧಿ ಸಾಲಗಳನ್ನು ನೀಡಲಾಗುವುದು . ಸಾಲದ ಪ್ರವೇಶವನ್ನು ಸುಧಾರಿಸಲು ಕ್ರೆಡಿಟ್ ವ್ಯಾಪ್ತಿಯನ್ನು ಹೆಚ್ಚಿಸಲಾಗುವುದು. ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಇದನ್ನು 5 ಕೋಟಿ ರೂ.ಗಳಿಂದ 10 ಕೋಟಿ ರೂ.ಗಳಿಗೆ ಹೆಚ್ಚಿಸಲಾಗುವುದು.ಉತ್ತಮವಾಗಿ ನಡೆಸುವ ರಫ್ತುದಾರ ಎಂಎಸ್​ಎಂಇಗಳಿಗೆ 20 ಕೋಟಿ ರೂ.ಗಳ ಅವಧಿ ಸಾಲಗಳನ್ನು ನೀಡಲಾಗುವುದು ಅವರು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ,

    Advertisement

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    ಬೆಂಗಳೂರು: ಡೇ ಕೇರ್‌ನಲ್ಲಿ ಮಕ್ಕಳಿಗೆ ಹಿಂಸೆ, ಐವರು ಮಹಿಳೆಯರ ವಿರುದ್ಧ ಎಫ್‌ಐಆರ್

    ಕ್ಯಾಪ್‌ಜೆಮಿನಿ ಕ್ಯಾಂಪಸ್‌ನ ಡೇ ಕೇರ್‌ನಲ್ಲಿ ಪುಟ್ಟ ಮಕ್ಕಳಿಗೆ ಹಿಂಸೆ ನೀಡಿದ ಆರೋಪದ ವಿಡಿಯೊ ವೈರಲ್; ಐವರು ಮಹಿಳಾ ಆರೈಕೆದಾರರ ವಿರುದ್ಧ ಪ್ರಕರಣ ದಾಖಲು.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading