ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕನಸಿನ ಪ್ರಾಜೆಕ್ಟ್ ʻರಾಜ ವೀರ ಮದಕರಿ ನಾಯಕʼ ಚಿತ್ರದುರ್ಗದ ಐತಿಹಾಸಿಕ ವೀರ ಯೋಧ ಮದಕರಿ ನಾಯಕನ ಜೀವನವನ್ನು ಆಧರಿಸಿದ ಮಹತ್ವಾಕಾಂಕ್ಷೆಯ ಸಿನಿಮಾ.
ಈ ಸಿನಿಮಾ ದರ್ಶನ್ ಹಾಗೂ ಇತಿಹಾಸ ಪ್ರಿಯರಿಗೆ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮೈಲಿಗಲ್ಲಾಗಬೇಕಾಗಿದ್ದರೂ, ವಿವಿಧ ಕಾರಣಗಳಿಂದಾಗಿ ಚಿತ್ರರಂಗದಲ್ಲಿ ಅರ್ಧಕ್ಕೆ ನಿಂತಿದೆ.ಈ ಚಿತ್ರವನ್ನು ರಾಕ್ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದರೆ, ಹಿರಿಯ ನಿರ್ದೇಶಕ ಎಸ್ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡುತ್ತಿದ್ದಿದ್ದರು. ಶೂಟಿಂಗ್ ಆರಂಭಿಕ ಹಂತದಲ್ಲಿ ಕೆಲ ವರ್ಷಗಳ ಹಿಂದೆಯೇ ಆರಂಭವಾಗಿತ್ತು. ಆದರೆ, ಕೆಲವು ದಿನಗಳ ಬಳಿಕ ಸಿನಿಮಾ ನಿಂತಿದ್ದು, ದರ್ಶನ್ ಸ್ವತಃ ಈ ಚಿತ್ರವನ್ನು ಮುಂದುವರಿಸಲು ಇಚ್ಛಿಸಿರಲಿಲ್ಲ ಎಂದು ನಿರ್ದೇಶಕ ಹೇಳಿದ್ದಾರೆ. ದರ್ಶನ್ ಚಿತ್ರದ ಕಥೆ ಮತ್ತು ಗ್ರಿಪ್ ತಪ್ಪುತ್ತಿದೆ, ಹಾಗಾಗಿ ಮುಂದುವರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ,“ಕಥೆ ರಚಿಸುವುದರಲ್ಲಿ ನಾವು ಮೂರು ವರ್ಷಗಳನ್ನು ಹೂಡಿದ್ದೇವೆ ಮತ್ತು ದರ್ಶನ್ ಅವರಿಗೆ ಅದು ಬಹಳ ಇಷ್ಟವಾಯಿತು. ರಾಕ್ಲೈನ್ ವೆಂಕಟೇಶ್ ಅವರು ಈ ಮಹಾತ್ವಾಕಾಂಕ್ಷೆಯ ಚಿತ್ರವನ್ನು ನಿರ್ಮಿಸುತ್ತಿದ್ದರು. ಹನ್ನೆರಡು ವರ್ಷಗಳ ಕಾಲ ದರ್ಶನ್ ಪ್ರತಿ ಬಾರಿ ನಾವು ಹೇಳಿದಂತೆ ತಯಾರಾಗುತ್ತಿದ್ದರು. ಕೇರಳದಲ್ಲಿ 8 ರಿಂದ 9 ದಿನಗಳ ಶೂಟಿಂಗ್ ಕೂಡ ಮಾಡಿದ್ದೇವೆ. ಸಾಂಗ್ಸ್ ಕಂಪೋಸ್ ಆಗಿದ್ದು, ಕಾಸ್ಟ್ಯೂಮ್ಸ್ ಕೂಡ ಪೂರ್ಣಗೊಂಡಿದ್ದವು. ಆದರೆ ಕೊರೋನಾ ಮಹಾಮಾರಿ ಕಾರಣದಿಂದ ಚಿತ್ರತಯಾರಿ ಕೆಲಸ ಸ್ಥಗಿತಗೊಂಡಿತು” ಎಂದು ಅವರು ಹೇಳಿದ್ದಾರೆ. ಕೊರೋನಾದಿಂದ ಲಾಕ್ಡೌನ್ ಆಗಿ, ಓಪನ್ ಆದ ಮೇಲೆ ಚಿತ್ರಮಂದಿರಗಳಲ್ಲಿ ಕಲೆಕ್ಷನ್ಗಳು ಬಹಳ ಕಡಿಮೆಯಾಗಿತ್ತು. ಯಾರೂ ಕೂಡ ಥಿಯೇಟರ್ಗೆ ಬರ್ತಿರಲಿಲ್ಲ.
ಇಂತಹ ಸಂದರ್ಭದಲ್ಲಿ ನೂರು ಕೋಟಿ ರೂಪಾಯಿ ಹೂಡಿಕೆ ಮಾಡಿ ಈ ಸಿನಿಮಾ ಮಾಡುವುದು ಹೇಗೆ ಅನ್ನೋ ಗೊಂದಲ ಉಂಟಾಯಿತು. ಕಥೆ ಎಲ್ಲವೂ ಮಾಡಿ ಈಗಾಗಲೇ 6-7 ವರ್ಷಗಳಾಗಿವೆ” ಎಂದು ಅವರು ವಿವರಿಸಿದ್ದಾರೆ.ಹೀಗಾಗಿ, ರಾಜ ವೀರ ಮದಕರಿ ನಾಯಕʼ ಚಿತ್ರದ ಮುಹೂರ್ತ ಭಾಗ್ಯವಿದ್ದರೂ, ಬಿಡುಗಡೆಯ ಭಾಗ್ಯವನ್ನು ಕಾಣಲಿಲ್ಲ. ಚಿತ್ರ ಪೂರ್ಣವಾಗದೇ ಇರುವುದರಿಂದ ಜನರಲ್ಲಿ ಇದಕ್ಕೆ ಸಂಬಂಧಿಸಿದ ಕುತೂಹಲ ಹೆಚ್ಚಾಗಿದೆ. ನಿರ್ದೇಶಕ ಎಸ್ವಿ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ, ಯಾವುದೇ ಪ್ರಾಜೆಕ್ಟ್ಗೆ ಜೀವ ಯಾವಾಗಲೋ ಬರುತ್ತದೆ. ʻರಾಜ ವೀರ ಮದಕರಿ ನಾಯಕʼ ಚಿತ್ರ ಬಂದರೆ ಕನ್ನಡಕ್ಕೆ ಅತ್ಯುತ್ತಮ ಹಿಸ್ಟಾರಿಕಲ್ ಸಿನಿಮಾ ಆಗುತ್ತದೆ ಎಂದು ಭರವಸೆ ನೀಡಿದ್ದಾರೆ.ʻರಾಜ ವೀರ ಮದಕರಿ ನಾಯಕʼ ಸಿನಿಮಾ ದರ್ಶನ್ ಅವರ ಐತಿಹಾಸಿಕ ಚಿತ್ರಗಳ ಸಾಲಿನಲ್ಲಿ ಮತ್ತೊಂದು ಯಶಸ್ವಿ ಯೋಜನೆಯಾಗಬಹುದಿತ್ತು. ಆದರೆ ವಿವಿಧ ಕಾರಣಗಳಿಂದಾಗಿ ಈ ಚಿತ್ರದ ಭವಿಷ್ಯ ಸದ್ಯಕ್ಕೆ ಅನಿಶ್ಚಿತವಾಗಿದೆ. ಇದೀಗ ದರ್ಶನ್ ತಮ್ಮ ಬಹುನಿರೀಕ್ಷೆಯ ʻದಿ ಡೆವಿಲ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ರಜನಿಕಾಂತ್ ಭೇಟಿಯಾದ ಧನ್ಯಾ ರಾಮ್ಕುಮಾರ್; ಖುಷಿಯ ಕ್ಷಣಗಳ ಫೋಟೋಗಳು ವೈರಲ್
ಕೃಷಿ ಎಐ ಕನ್ನಡ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


