ಪುತ್ತೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಜೈನ ಧರ್ಮದ ಸ್ವಾಮೀಜಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ಕಿಡಿಗೇಡಿಯೊಬ್ಬನ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಜೈನ ಧರ್ಮ ಗುರುಗಳಾದ ಆಚಾರ್ಯ ವಿದ್ಯಾನಂದಜೀ ಮಹಾರಾಜರ 100ನೇ ಜಯಂತಿ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರಿಗೆ “ಧರ್ಮ ಚಕ್ರವರ್ತಿ” ಎಂಬ ಬಿರುದನ್ನು ನೀಡಿ ಗೌರವಿಸಲಾಗಿದೆ ಎಂದು ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿತ್ತು.
ಈ ಪೋಸ್ಟ್ಗೆ ಕರುನಾಡಿದ ಮಿನುಗುವ ನಕ್ಷತ್ರ ಎಂಬ ಖಾತೆಯಿಂದ ಮೋದಿ ಹಾಗೂ ಸ್ವಾಮೀಜಿ ಯೋಗ್ಯತೆ ಒಂದೇ ರೀತಿ ಇದೆ, ಮಾನಗೆಟ್ಟವರು ಎಂದು ಕಾಮೆಂಟ್ ಮಾಡಲಾಗಿತ್ತು.
ಈ ಕಾಮೆಂಟ್ನಿಂದ ಬೇಸತ್ತ ಪಡ್ನೂರಿನ ನಿವಾಸಿ ಜೀವಂಧರ್ ಜೈನ್ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ಎಕ್ಸ್ ವೇದಿಕೆಯಲ್ಲಿದ್ದ ʼಕರುನಾಡಿನ ಮಿನುಗು ನಕ್ಷತ್ರʼ ಎಂಬ ಖಾತೆ ನಿಷ್ಕ್ರಿಯಗೊಂಡಿದೆ.
ಬಿಜೆಪಿ-ಜೆಡಿಎಸ್ ಅವರೇ ಬೇರೆ ಇವರೇ ಬೇರೆ ಎಂಬಂತೆ ಇದ್ದಾರೆ: ಶಾಸಕ ಜಿಟಿ ದೇವೇಗೌಡ
ಕೃಷಿ ಕನ್ನಡ ಎಐ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


