Thursday, September 3, 2026
spot_img
More
    spot_img
    HomeEntertainment2025ರ ಮೊದಲ 6 ತಿಂಗಳಲ್ಲಿ ಕನ್ನಡ ಚಿತ್ರಗಳು ಮಾಡಿದ ಕಲೆಕ್ಷನ್‌; ಇಷ್ಟೇ ಸಾಕಾ?

    2025ರ ಮೊದಲ 6 ತಿಂಗಳಲ್ಲಿ ಕನ್ನಡ ಚಿತ್ರಗಳು ಮಾಡಿದ ಕಲೆಕ್ಷನ್‌; ಇಷ್ಟೇ ಸಾಕಾ?

    2025ರ ಜುಲೈ ತಿಂಗಳು ಆಗಮಿಸಿದ್ದು, ವರ್ಷದ ಮೊದಲಾರ್ಧ ಮುಕ್ತಾಯಗೊಂಡಿದೆ. ಆದರೆ ಕನ್ನಡ ಚಿತ್ರರಂಗ ಮಾತ್ರ ಬ್ಲಾಕ್‌ಬಸ್ಟರ್‌ ಚಿತ್ರವನ್ನು ಮಾತ್ರ ಕಂಡಿಲ್ಲ. ಜನವರಿಯಿಂದ ಜೂನ್‌ವರೆಗೆ ಹಲವಾರು ಕನ್ನಡ ಚಿತ್ರಗಳು ಬಿಡುಗಡೆಗೊಂಡಿದ್ದು, ಕೆಲ ಚಿತ್ರಗಳು ಮಾತ್ರ ನಷ್ಟದಿಂದ ಪಾರಾಗಿವೆ.

    Advertisement

    ಇನ್ನು ಈ ಪೈಕಿ ಕೇವಲ 3 ಚಿತ್ರಗಳು ಮಾತ್ರ 5 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದ್ದು, ಇದೇ ಈ ವರ್ಷ ಕನ್ನಡ ಚಿತ್ರರಂಗ ಮಾಡಿದ ಸಾಧನೆಯಾಗಿದೆ. ಸ್ಟಾರ್‌ ನಟರ ಚಿತ್ರಗಳಾವುವೂ ಬಿಡುಗಡೆಯಾಗದೇ ಇರುವುದು ಚಿತ್ರರಂಗದ ಹಿನ್ನಡೆಗೆ ಕಾರಣವಾದ ಅಂಶಗಳಲ್ಲೊಂದಾಗಿದ್ದು, ಒಳ್ಳೆ ಚಿತ್ರ ಬಂದರೆ ಹೀರೊ ಯಾರೇ ಆದರೂ ಸಿನಿಮಾ ನೋಡುತ್ತಾರೆ ಎನ್ನುತ್ತಾರೆ ಸಿನಿ ರಸಿಕರು.

    ಈ ವರ್ಷದ ಮೊದಲಾರ್ಧದಲ್ಲಿ ಅತ್ಯಧಿಕ ಕಲೆಕ್ಷನ್ ಮಾಡಿದ ಕನ್ನಡ ಚಿತ್ರವೆಂದರೆ ಅದು ಶರಣ್‌ ನಟನೆಯ ಛೂ ಮಂತರ್.‌ ಎರಡನೇ ಸ್ಥಾನದಲ್ಲಿ ವಿನೋದ್‌ ಪ್ರಭಾಕರ್‌ ನಟನೆಯ ಮಾದೇವ ಇದ್ದರೆ, ಮೂರನೇ ಸ್ಥಾನದಲ್ಲಿ ಯುದ್ಧಕಾಂಡ ಚಾಪ್ಟರ್‌ 2 ಇದೆ. ಇನ್ನು ಈ ವರ್ಷ ಕನ್ನಡ ಚಿತ್ರಗಳು ಮಾಡಿದ ಟಾಪ್‌ 10 ಕನ್ನಡ ಚಿತ್ರಗಳ ಪಟ್ಟಿ ಮುಂದಿದೆ.

    1. ಛೂ ಮಂತರ್‌ – 6.45 ಕೋಟಿ ಗ್ರಾಸ್‌
    2. ಮಾದೇವ – 6.26 ಕೋಟಿ ಗ್ರಾಸ್‌
    3. ಯುದ್ಧಕಾಂಡ ಚಾಪ್ಟರ್‌ 2 – 5.54 ಕೋಟಿ ಗ್ರಾಸ್‌
    4. ವಾಮನ – 3.40 ಕೋಟಿ ಗ್ರಾಸ್‌
    5. ಮನದ ಕಡಲು – 1.78 ಕೋಟಿ ಗ್ರಾಸ್‌
    6. ಫಾರೆಸ್ಟ್‌ – 1.63 ಕೋಟಿ ಗ್ರಾಸ್‌
    7. ವೀರ ಚಂದ್ರಹಾಸ – 1.62 ಕೋಟಿ ಗ್ರಾಸ್‌
    8. ಸಂಜು ವೆಡ್ಸ್‌ ಗೀತಾ 2 – 1.32 ಕೋಟಿ ಗ್ರಾಸ್‌
    9. ರಾಯಲ್‌ – 1.07 ಕೋಟಿ ಗ್ರಾಸ್‌
    10. ಭಗೀರಥ – 1.04 ಕೋಟಿ ಗ್ರಾಸ್
      ( ಮೂಲ: ಸ್ಯಾಕ್‌ನಿಕ್‌ )

    ಇಸ್ರೇಲ್‌ ದಾಳಿಯಿಂದ ಗಾಜಾದಲ್ಲಿ ಮೃತಪಟ್ಟ ಪತ್ರಕರ್ತರೆಷ್ಟು? ಮಾಹಿತಿ ಬಹಿರಂಗ

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading