ದಕ್ಷಿಣ ರೈಲ್ವೆ ತನ್ನ ವ್ಯಾಪ್ತಿಯ ವಿವಿಧ ಕಾರ್ಯಾಗಾರಗಳು ಮತ್ತು ಘಟಕಗಳಲ್ಲಿ ಅಪ್ರೆಂಟಿಸ್ಶಿಪ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ನೇಮಕಾತಿ ಅಭಿಯಾನಡಿಯಲ್ಲಿ ಒಟ್ಟು 3518 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ಈ ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಈ ಅವಕಾಶವು ದಕ್ಷಿಣ ರೈಲ್ವೆ ವ್ಯಾಪ್ತಿಯ ವಿವಿಧ ಘಟಕಗಳಲ್ಲಿ ತಜ್ಞತೆ ಮತ್ತು ಅನುಭವವನ್ನು ಪಡೆಯಲು ಉತ್ತಮ ಅವಕಾಶವಾಗಿದೆ.ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 25 ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ, ದಕ್ಷಿಣ ರೈಲ್ವೆಯ ಅಧಿಕೃತ ವೆಬ್ಸೈಟ್ sr.indianrailways.gov.in ಗೆ ಭೇಟಿ ನೀಡಬೇಕು .
ಅರ್ಹತೆ ಮತ್ತು ವಯೋಮಿತಿ:
ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ಕೆಲವು ಹುದ್ದೆಗಳಿಗೆ 12ನೇ ತರಗತಿ ಅಥವಾ ಐಟಿಐ ಅರ್ಹತೆ ಅಗತ್ಯವಿರುತ್ತದೆ. ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 15 ವರ್ಷ, ಮತ್ತು ಗರಿಷ್ಠ 22 ರಿಂದ 24 ವರ್ಷಗಳ ಒಳಗೆ ಇರಬೇಕು. ಮೀಸಲಾತಿ ಪ್ರಕಾರ ಮೇಲ್ವಯೋ ಮಿತಿಯಲ್ಲಿ ಸಡಿಲಿಕೆ ಕಲ್ಪಿಸಲಾಗಿದೆ.
ಈ ನೇಮಕಾತಿ ಅಭಿಯಾನದಡಿಯಲ್ಲಿ, ದಕ್ಷಿಣ ರೈಲ್ವೆಯ ವಿವಿಧ ಕಾರ್ಯಾಗಾರಗಳು ಮತ್ತು ಘಟಕಗಳಲ್ಲಿ ಅಪ್ರೆಂಟಿಸ್ಗಳನ್ನು ನೇಮಿಸಲಾಗುವುದು. ಇವುಗಳಲ್ಲಿ ಪೆರಂಬೂರು ಕ್ಯಾರೇಜ್ ಮತ್ತು ವ್ಯಾಗನ್ ವರ್ಕ್ಸ್, ಪೊಂಡನೂರಿನ ಸೆಂಟ್ರಲ್ ವರ್ಕ್ಶಾಪ್ ಗೋಲ್ಡನ್ ರಾಕ್ ಮತ್ತು ಸಿಗ್ನಲ್ ಮತ್ತು ಟೆಲಿಕಾಂ ವರ್ಕ್ಶಾಪ್ ಯೂನಿಟ್ಗಳು ಸೇರಿವೆ. ಈ ಎಲ್ಲಾ ಸ್ಥಳಗಳಲ್ಲಿ ಒಟ್ಟು 3518 ಅಭ್ಯರ್ಥಿಗಳು ಅಪ್ರೆಂಟಿಸ್ಶಿಪ್ ಅವಕಾಶವನ್ನು ಪಡೆಯುತ್ತಾರೆ.
ಅರ್ಜಿ ಶುಲ್ಕ:
ಸಾಮಾನ್ಯ (General) ಮತ್ತು ಓಬಿಸಿ (OBC) ಅಭ್ಯರ್ಥಿಗಳಿಗಾಗಿ ₹100 ಅರ್ಜಿ ಶುಲ್ಕ ವಿಧಿಸಲಾಗಿದೆ.
ಎಸ್ಸಿ, ಎಸ್ಟಿ, ದಿವ್ಯಾಂಗರು ಮತ್ತು ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಉಚಿತವಾಗಿ ಇರಿಸಲಾಗಿದೆ
ಸ್ಟೈಫಂಡ್ ಎಷ್ಟು ಸಿಗಲಿದೆ?
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಫಂಡ್ ಸಹ ನೀಡಲಾಗುವುದು. ಇದರಲ್ಲಿ, 10 ನೇ ತರಗತಿಯಲ್ಲಿ ಉತ್ತೀರ್ಣರಾದ ಹೊಸಬರಿಗೆ 6000 ರೂ. ಸ್ಟೈಫಂಡ್ ಮತ್ತು 12 ನೇ ತರಗತಿಯಲ್ಲಿ ಉತ್ತೀರ್ಣರಾದ ಅಥವಾ ಐಟಿಐ ಹೊಂದಿರುವವರಿಗೆ ತಿಂಗಳಿಗೆ 7000 ರೂ. ಸ್ಟೈಫಂಡ್ ಸಿಗುತ್ತದೆ. ಈ ಸ್ಟೈಫಂಡ್ ತರಬೇತಿಯ ಸಮಯದಲ್ಲಿ ಅಭ್ಯರ್ಥಿಗಳಿಗೆ ಆರ್ಥಿಕ ಬೆಂಬಲವನ್ನು ನೀಡುತ್ತದೆ ಮತ್ತು ಅವರಿಗೆ ಅನುಭವದ ಜೊತೆಗೆ ಆರ್ಥಿಕ ಬಲವನ್ನು ನೀಡುತ್ತದೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ ; ಆಗಸ್ಟ್ 25, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ; ಸೆಪ್ಟೆಂಬರ್ 25, 2025
ಅರ್ಜಿ ಸಲ್ಲಿಸುವ ವಿಧಾನ:
ಅಧಿಕೃತ ವೆಬ್ಸೈಟ್ಗೆ ಲಾಗಿನ್ ಆಗಿ
Act Apprentice 2025-26” ಲಿಂಕ್ ಮೇಲೆ ಕ್ಲಿಕ್ ಮಾಡಿ
ನೋಂದಣಿ (Registration) ಪ್ರಕ್ರಿಯೆ ಪೂರೈಸಿ
ನಂತರ ಲಾಗಿನ್ ಮಾಡಿ, ಎಲ್ಲಾ ವಿವರಗಳನ್ನು ಭರ್ತಿ ಮಾಡಿ
ಶುಲ್ಕ ಪಾವತಿ ಮಾಡಿ ಹಾಗೂ ಅರ್ಜಿಯನ್ನು ಸಲ್ಲಿಸಿ
ರೈಲ್ವೆ ಉದ್ಯೋಗಿಗಳ ಬದುಕಿಗೆ ಸುರಕ್ಷಾ ಕವಚ: ಎಸ್ಬಿಐನಿಂದ ಕೋಟಿ ಕೋಟಿ ವಿಮೆ!
ಕೃಷಿ ಎಐ ಕನ್ನಡ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


