Monday, August 3, 2026
spot_img
More
    spot_img
    HomeBreaking Newsಹಣವನ್ನು ಸಾಸಿವೆ ಡಬ್ಬಿಯಲ್ಲಿ ಬಚ್ಚಿಡುವ ಬದಲು ಇಲ್ಲಿ ಹೂಡಿಕೆ ಮಾಡಿದ್ರೆ ಬರುತ್ತೆ ಒಳ್ಳೆ ಬಡ್ಡಿ!

    ಹಣವನ್ನು ಸಾಸಿವೆ ಡಬ್ಬಿಯಲ್ಲಿ ಬಚ್ಚಿಡುವ ಬದಲು ಇಲ್ಲಿ ಹೂಡಿಕೆ ಮಾಡಿದ್ರೆ ಬರುತ್ತೆ ಒಳ್ಳೆ ಬಡ್ಡಿ!

    ಬೆಂಗಳೂರು, : ಈಗ ಮಹಿಳೆಯರು ಹೆಚ್ಚು ಹೆಚ್ಚು ಸ್ವಾವಲಂಬಿಯಾಗುತ್ತಿದ್ದಾರೆ. ಓದು ಮುಗಿಸಿ ಕೆಲಸಕ್ಕೆ ಸೇರಿಕೊಂಡು ಮನೆಯನ್ನು ತಾವೇ ನಡೆಸುವಷ್ಟು ಜವಾಬ್ದಾರಿಗಳನ್ನು ಹೊತ್ತು ಎಲ್ಲವನ್ನು ಒಬ್ಬರೇ ನಿಭಾಯಿಸುವಷ್ಟು ಸಮರ್ಥರಾಗಿದ್ದಾರೆ. ಹೀಗಿರುವಾಗ ಮಹಿಳೆಯರು ಸದ್ಯ ಸಾಸಿವೆ ಡಬ್ಬಿ, ತೊಗರಿ ಬೇಳೆ ಡಬ್ಬಿಗಳಲ್ಲಿ ಹಾಗೂ ಬಟ್ಟೆಗಳ ಸಂಧಿಯಲ್ಲಿ, ಹಾಸಿಗೆ ಅಡಿಯಲ್ಲಿ ಹಣವನ್ನು ಕದ್ದು ಮುಚ್ಚಿ ಉಳಿತಾಯ ಮಾಡುವ ಕಾಲ ಈಗ ಮುಗಿದಿದೆ. ಈಗೇನಿದ್ದರೂ ಬ್ಯಾಂಕ್ ಖಾತೆಗಳಲ್ಲಿ ಉಳಿತಾಯ ಮಾಡುತ್ತಾರೆ.

    Advertisement

    ಹಾಗಾದರೆ, ಮಹಿಳೆಯರು ಕೂಡ ಹಣವನ್ನು ಎಲ್ಲಿ ಹೂಡಿಕೆ ಮಾಡುವುದು ಬೆಸ್ಟ್ ಎಂಬುದನ್ನು ನೋಡೋಣ ಬನ್ನಿ. ಮಹಿಳೆಯರು ಕೂಡ ಈಗ ದೊಡ್ಡ ದೊಡ್ಡ ಕಡೆ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಕೇವಲ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಇಡುವ ಬದಲು, ಬೇರೆ ಬೇರೆ ಕಡೆಗಳಲ್ಲಿ ಹೂಡಿಕೆ ಮಾಡಬಹುದು. ಎಫ್ ಡಿ ಮಾಡಿ ಹಣವನ್ನು ಉಳಿತಾಯ ಮಾಡುವುದು ಮಹಿಳೆಯರಿಗೆ ಬೆಸ್ಟ್ ಆಲೋಚನೆ ಯಾಗಿದೆ. ಸಣ್ಣ ಸಣ್ಣ ಎಫ್ ಡಿ ಗಳೇ ಮುಂದೆ ದೊಡ್ಡ ಮೊತ್ತವಾಗಿ ಕೈ ಸೇರುತ್ತದೆ.

    ಇದಿಲ್ಲದೇ ಹೋದರೆ, ಆರ್ ಡಿ(RD) ಕೂಡ ಮಾಡಬಹುದು. ಆದರೆ, ಆರ್ ಡಿ ನಲ್ಲಿ ಹಣವನ್ನು ಹೂಡಿಕೆ ಮಾಡುವುದಾದರೆ, ಎಷ್ಟು ಎಂಬುದನ್ನು ಮೊದಲೇ ನಿರ್ಧರಿಸಬೇಕು. ಒಂದು ತಿಂಗಳು ತಪ್ಪಿದರೂ ಸಮಸ್ಯೆ ಆಗುತ್ತದೆ. ಇನ್ನು ಚಿನ್ನದ ಮೇಲಿನ ಹೂಡಿಕೆಯೂ ಕೂಡ ಹೆಂಗಳೆಯರಿಗೆ ಖುಷಿಯ ಜೊತೆಗೆ ಭವಿಷ್ಯಕ್ಕೂ ಆಧಾರವಾಗಿರುತ್ತದೆ. ಇವತ್ತು ಖರೀದಿಸಿದ ಚಿನ್ನವೂ ಮನೆಯಲ್ಲೇ ಇದ್ದರೂ ಬಡ್ಡಿ ಹಣ ಬೆಳೆದಂತೆ ಚಿನ್ನದ ಬೆಲೆಯೂ ಏರಿಕೆಯಾಗುತ್ತಲೇ ಇರುತ್ತದೆ.

    ಹಾಗಾಗಿ ಹೆಣ್ಣು ಮಕ್ಕಳು ಚಿನ್ನದ ಮೇಲೂ ಹೂಡಿಕೆ ಮಾಡಿ ಲಾಭವನ್ನು ಪಡೆಯಬಹುದು. ಇದರೊಂದಿಗೆ ಪೆನ್ಷನ್ ಸ್ಕೀಮ್(Pension scheeme) ಗಳಲ್ಲೂ ಮಹಿಳೆಯರು ತಮ್ಮ ಉಳಿತಾಯದ ಮೊತ್ತವನ್ನು ಹೂಡಿಕೆ ಮಾಡಬಹುದು. ಇದು ಅವರ ಕೊನೆಗಾಲದಲ್ಲೂ ಸಹಾಯಕ್ಕೆ ಬರುತ್ತದೆ. ಇನ್ನು ಆರೋಗ್ಯ ವಿಮೆಯಲ್ಲೂ ಹೂಡಿಕೆ ಮಾಡುವುದರಿಂದ ಮಹಿಳೆಯರಿಗೆ ಭವಿಷ್ಯದಲ್ಲಿ ಸಹಕಾರಿಯಾಗುತ್ತದೆ. ಹೀಗೆಲ್ಲಾ ಹೂಡಿಕೆ ಮಾಡಿ ತಮ್ಮ ಉಳಿತಾಯದ ಮೊತ್ತವನ್ನು ಹೆಚ್ಚಿಸಿಕೊಳ್ಳುವುದು ಬಹಳ ಒಳ್ಳೆಯದು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading