ನಾಳೆ ( ಡಿಸೆಂಬರ್ 5 ) ಬಹು ನಿರೀಕ್ಷಿತ ಪುಷ್ಪ 2 ಚಿತ್ರ ಬಿಡುಗಡೆಯಾಗುತ್ತಿದ್ದು, ಚಿತ್ರ ವೀಕ್ಷಿಸಲು ಸಿನಿ ರಸಿಕರು ಕಾತರರಾಗಿದ್ದಾರೆ. ಇನ್ನು ಬೆಂಗಳೂರಿನಲ್ಲಿಯೂ ಸಹ ಪ್ಯಾನ್ ಇಂಡಿಯಾ ತೆಲುಗು ಚಿತ್ರ ʼಪುಷ್ಪ ದ ರೂಲ್ʼ ಹವಾ ಜೋರಾಗಿದ್ದು, ಮಧ್ಯರಾತ್ರಿಯಿಂದಲೇ ಪ್ರದರ್ಶನಗಳನ್ನು ಆರಂಭಿಸಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು.
ಆದರೆ ಅಲ್ಲು ಅರ್ಜುನ್ ಅಭಿಮಾನಿಗಳ ಹಾಗೂ ಸಿನಿ ರಸಿಕರ ಈ ಆಸೆಗೆ ಬೆಂಗಳೂರು ಜಿಲ್ಲಾಧಿಕಾರಿ ತಣ್ಣೀರು ಚೆಲ್ಲಿದ್ದು, ಚಿತ್ರಕ್ಕೆ ನಗರದಲ್ಲಿ ಆಯೋಜಿಸಲಾಗಿದ್ದ ಎಲ್ಲಾ ಮಿಡ್ನೈಟ್ ಶೋಗಳು ಹಾಗೂ ಸೂರ್ಯೋದಯಕ್ಕೂ ಮುನ್ನ ಇದ್ದ ಮುಂಜಾನೆ ಶೋಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ.


ಹೌದು, ಈ ಕುರಿತು ಪೊಲೀಸರಿಗೆ ಪತ್ರ ಬರೆದಿರುವ ಜಿಲ್ಲಾಧಿಕಾರಿ ಕರ್ನಾಟಕ ಸಿನಿಮಾ ರೆಗ್ಯೂಲೇಷನ್ ಕಾಯ್ದೆಯನ್ನು ಉಲ್ಲೇಖಿಸಿದ್ದು, ಈ ನಿಯಮದಂತೆ ಬೆಳಗ್ಗೆ 6.30ರ ನಂತರವಷ್ಟೇ ಚಿತ್ರವನ್ನು ಪ್ರದರ್ಶಿಸಬೇಕು, ಅದಕ್ಕೂ ಮುನ್ನ ಇರುವ ಎಲ್ಲಾ ಪ್ರದರ್ಶವನ್ನು ಕೂಡಲೇ ರದ್ದುಗೊಳಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಕರ್ನಾಟಕ ನಿರ್ಮಾಪಕರ ಕೌನ್ಸಿಲ್ ನೀಡಿದ್ದ ದೂರಿನ ಆಧಾರದ ಮೇಲೆ ಈ ಆದೇಶವನ್ನು ಡಿಸಿ ಹೊರಡಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


