ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಸರಣಿ ಕೊಲೆ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ನೀಡಿರುವ ದೂರಿನ ಆಧಾರದ ಮೇಲೆ ಎಸ್ಐಟಿ ತನಿಖೆ ನಡೆಯುತ್ತಿದ್ದು, ಇಂದು ( ಆಗಸ್ಟ್ 5 ) ಏಳನೇ ದಿನದ ಗುಂಡಿ ಅಗೆಯುವ ಕಾರ್ಯಾಚರಣೆಯನ್ನು ಎಸ್ಐಟಿ ಅಧಿಕಾರಿಗಳು ಕೈಗೊಂಡಿದ್ದಾರೆ.
ಮೊದಲ ಹತ್ತು ಸ್ಥಳಗಳಲ್ಲಿ ಗುಂಡಿ ಅಗೆದ ಅಧಿಕಾರಿಗಳಿಗೆ ಕೇವಲ ಆರನೇ ಪಾಯಿಂಟ್ನಲ್ಲಿ ಮಾತ್ರ ಅಸ್ತಿಪಂಜರದ ಅವಶೇಷಗಳು ಪತ್ತೆಯಾಗಿದ್ದವು. ಆದರೆ, ನಿನ್ನೆ ( ಆಗಸ್ಟ್ 4 ) 11ನೇ ಪಾಯಿಂಟ್ ಅಗೆಯುವುದಕ್ಕೂ ಮುನ್ನ ಸಮೀಪದಲ್ಲೇ ಇದ್ದ ಕಾಡಿನೊಳಗೆ ಕರೆದೊಯ್ದ ಸಾಕ್ಷಿ ದೂರುದಾರ ಬೇರೆ ಜಾಗವನ್ನು ಅಗೆಯಲು ಹೇಳಿದ್ದ. ಆ ಜಾಗದಲ್ಲಿ ಒಂದಕ್ಕಿಂತ ಹೆಚ್ಚು ಶವದ ಅಸ್ತಿಪಂಜರಗಳೂ ಸಹ ದೊರಕಿದ್ದವು.
ಹೀಗೆ ಬೇರೆಡೆ ಅಗೆದು ಕೆಲ ಕುರುಹುಗಳನ್ನು ಸಂಗ್ರಹಿಸಿದ್ದ ಎಸ್ಐಟಿ ಅಧಿಕಾರಿಗಳು ಇಂದು 11ನೇ ಸ್ಥಳದ ಉತ್ಖನನ ನಡೆಸಿದ್ದು, ಅಲ್ಲಿ ಯಾವುದೇ ಅಸ್ತಿಪಂಜರದ ಕುರುಹು ಸಹ ಪತ್ತೆಯಾಗದೇ ಗುಂಡಿಯನ್ನು ಮುಚ್ಚಿದ್ದಾರೆ. 6 ಅಡಿಗಳಷ್ಟು ಆಳದವರೆಗೆ ಗುಂಡಿಯನ್ನು ಅಗೆಯಲಾಗಿದ್ದು, ಯಾವುದೇ ಮೂಳೆ ಪತ್ತೆಯಾಗಿಲ್ಲ.
ಹೀಗಾಗಿ ಎಸ್ಐಟಿ ತಂಡ ಊಟದ ಬಳಿಕ 12ನೇ ಸ್ಥಳದ ಉತ್ಖನನ ಮಾಡಲು ಮುಂದಾಗಿದೆ. ಈ ಪಾಯಿಂಟ್ನಲ್ಲಿ ಅಸ್ತಿಪಂಜರಗಳು ಪತ್ತೆಯಾಗಲಿವೆಯಾ ಎಂಬ ಕುತೂಹಲ ಮೂಡಿಸಿದೆ. ಅಲ್ಲದೇ ಅನಾಮಿಕ ಹೇಳಿದ್ದ 13ನೇ ಪಾಯಿಂಟ್ ಅತಿಮುಖ್ಯವಾಗಿದ್ದು, ಭಾರೀ ಕುತೂಹಲ ಕೆರಳಿಸಿದೆ.
ಜೋಡಿ ಮಾರ್ಗ ಕಾಮಗಾರಿ: ಗೋಲ್ಗುಂಬಜ್, ಇಂಟರ್ಸಿಟಿ ಸೇರಿದಂತೆ ಪ್ರಮುಖ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


