ಕಳೆದೆರಡು ದಿನಗಳಿಂದ ವಿಶ್ವದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ವಿಷಯವೆಂದರೆ ಅದು ಅಮೆರಿಕಾ ತನ್ನ ದೇಶ ಹೊಕ್ಕಿದ್ದ ಅಕ್ರಮ ವಲಸಿಗರನ್ನು ಗಡಿಪಾರು ಮಾಡಿರುವುದು.
ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಕೊಟ್ಟ ಮಾತಿನಂತೆ ಈ ದಿಟ್ಟ ಹೆಜ್ಜೆ ಇಟ್ಟಿದ್ದು, ಈಗಾಗಲೇ ಹಲವಾರು ದೇಶಗಳಿಂದ ಅಕ್ರಮವಾಗಿ ಯುಎಸ್ ಸೇರಿದ್ದವರನ್ನು ಹೊರಹಾಕಲಾಗಿದ್ದು, ಈ ಪೈಕಿ ಭಾರತದ 104 ಮಂದಿಯೂ ಸೇರಿದ್ದಾರೆ.
ಇನ್ನು ಹೀಗೆ ಗಡಿಪಾರು ಮಾಡಲಾದವರನ್ನು ಮೊದಲಿಗೆ ಸರಪಳಿಯಿಂದ ಕೈ ಕಾಲು ಕಟ್ಟಿಹಾಕಲಾಗಿದೆ. ಈ ಫೋಟೊ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಇವು ವೈರಲ್ ಆಗಿವೆ. ಇದಕ್ಕೆ ಅನೇಕರು ಅಸಮಾಧಾನ ಹೊರಹಾಕಿದ್ದು, ಇನ್ನೂ ಕೆಲವರು ಮೋದಿಯನ್ನು ಟ್ರೋಲ್ ಮಾಡಿದ್ದಾರೆ.
ಇತ್ತ ವೇದಿಕೆ ಭಾಷಣಕಾರ, ಮೋದಿ ಅಪ್ಪಟಭಕ್ತ ಚಕ್ರವರ್ತಿ ಸೂಲಿಬೆಲೆ ಈ ಕುರಿತು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿದ್ದು, “ಅಕ್ರಮ ವಲಸಿಗರನ್ನು ಅಮೆರಿಕಾ ಅಮಾನವೀಯವಾಗಿ ಗಡಿಪಾರು ಮಾಡಿದ್ದಕ್ಕೆ ಸೇಡು ತೀರಿಸಿಕೊಳ್ಳಬಹುದಾಗಿದೆ. ಆದರೆ ಹೇಗೆ? ಅದೇ ರೀತಿ ಭಾರತದಲ್ಲಿರುವ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಓಡಿಸಿ” ಎಂದಿದ್ದಾರೆ.
ಇನ್ನು ಚಕ್ರವರ್ತಿ ಸೂಲಿಬೆಲೆಯ ಈ ಉಪಾಯ ಕಂಡು ನೆಟ್ಟಿಗರು ನಿಮ್ಮ ಬುದ್ಧಿವಂತಿಕೆಗೆ ಶರಣು ಎಂದು ಕಾಮೆಂಟ್ ಮಾಡಿದ್ದಾರೆ. ಶ್ರೀಮಂತರ ಕೈನಲ್ಲಿ ಒದೆ ತಿಂದು, ಬಡವರ ಮೇಲೆ ಕೋಪ ತೋರಿಸುವ ಉಪಾಯ ಎಂದು ಸೂಲಿಬೆಲೆ ಕಾಲೆಳೆದಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


