Thursday, March 26, 2026
spot_img
More
    spot_img
    HomeCrimeಮದ್ಯ ಸೇವನೆ ಚಟ ಬಿಡಿಸಲು ಮುತ್ಯಾ ನೀಡಿದ ನಾಟಿ ಔಷಧಕ್ಕೆ ಮೂವರು ಬಲಿ!

    ಮದ್ಯ ಸೇವನೆ ಚಟ ಬಿಡಿಸಲು ಮುತ್ಯಾ ನೀಡಿದ ನಾಟಿ ಔಷಧಕ್ಕೆ ಮೂವರು ಬಲಿ!

    ಸೇಡಂ ತಾಲೂಕಿನ ಇಮಡಾಪುರ ಗ್ರಾಮದಲ್ಲಿ ಮದ್ಯಸೇವನೆ ಚಟ ಬಿಡಲು ಸ್ವಯಂಘೋಷಿತ ಮುತ್ಯಾನೋರ್ವ ನಾಟಿ ಔಷಧ ನೀಡಿದ್ದು, ಮೂವರು ಬುಧವಾರ ( ಆಗಸ್ಟ್‌ 6 ) ಸಾವಿಗೀಡಾಗಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಫಕೀರಪ್ಪ (ಸಾಯಪ್ಪ) ನಾಟಿ ಔಷಧ ನೀಡಿದ ಸ್ವಯಂಘೋಷಿತ ಮುತ್ಯಾ.

    ಬುರಗಪಲ್ಲಿ ಗ್ರಾಮದ ಲಕ್ಷ್ಮೀ ಪಲ್ಲಾ (50), ಶಹಾಬಾದ್‌ನ ಡಕ್ಕಾ ತಾಂಡಾದ ಗಣೇಶ ರಾಠೋಡ್ (30) ಮೃತರು. ಲಕ್ಷ್ಮೀ ಪುತ್ರ ನಿಂಗೇಶ ಪಲ್ಲಾ ಸ್ಥಿತಿ ಕೂಡ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಸಾಗಿಸಲಾಗಿದೆ. ಮದಕಲ್‌ನ ನಾಗೇಶ ಕಡಬು (31) ಸಹ ಔಷಧ ಸೇವಿಸಿ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. ವಿಷಯ ತಿಳಿಯುತ್ತಲೇ ಮುತ್ಯಾ ಪರಾರಿಯಾಗಿದ್ದಾನೆ.

    ಇಮಡಾಪುರದ ಹನುಮಾನ ಮಂದಿರ ಬಳಿ ಕುಡಿತ ಬಿಡಿಸುವುದು ಸೇರಿ ಹಲವು ವ್ಯಾಧಿಗಳಿಗೆ ಕೆಲ ವರ್ಷಗಳಿಂದ ಫಕೀರಪ್ಪ ಔಷಧ ನೀಡುತ್ತಿದ್ದ. ಕಳೆದ ಭಾನುವಾರ (ಆ.3) ಲಕ್ಷ್ಮೀ ಪಲ್ಲಾ, ಗಣೇಶ ರಾಠೋಡ್, ನಾಗೇಶ ಕಡಬು ಸೇರಿ ನೂರಾರು ಜನರಿಗೆ ಔಷಧ ನೀಡಿ ಬುಧವಾರ ಮತ್ತೊಮ್ಮೆ ಬರುವಂತೆ ತಿಳಿಸಿದ್ದ. ಬುಧವಾರ ಬೆಳಗ್ಗೆ ಮಡಿಕೆಯಲ್ಲಿ ಕುದಿಸಿದ ತಪ್ಪಲಿನ ದ್ರವರೂಪದ ಗಣೇಶ ರಾಠೋಡ್ ಪದಾರ್ಥವನ್ನು ಕುಡಿಯಲು ನೀಡಿದ್ದಾನೆ. ಇದನ್ನು ಕುಡಿದ ಮೂವರು ಸೇರಿ ಹಲವರು ಅಸ್ವಸ್ಥಗೊಂಡರು. ಆದರೂ ಮುತ್ಯಾ, ‘ಏನೂ ಆಗಲ್ಲ, ಕೈಬೆರಳು ಬಾಯಿಯಲ್ಲಿ ಹಾಕಿ ವಾಂತಿ ಮಾಡಿ’ ಎಂದು ಹೇಳಿದ್ದಾನೆ. ಹಾಗೆ ಮಾಡಿದ ನಂತರವೂ ಯಾವುದೇ ಬದಲಾವಣೆ ಕಾಣದಿರುವುದನ್ನು ಕಂಡು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾನೆ. ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮೀ, ಗಣೇಶ ಕೊನೆಯುಸಿರೆಳೆದಿದ್ದಾರೆ. ಪಿಎಸ್‌ಐ ಉಪೇಂದ್ರ ಕುಮಾರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಟೀ ಪುಡಿಗೆ 24 ರೂ. ಜಾಸ್ತಿ ಪಡೆದಿದ್ದಕ್ಕೆ 25 ಸಾವಿರ ದಂಡ!

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್ರಾ! ಮನವಮಿ ಹಬ್ಬಕ್ಕೆ ಮಾರುಕಟ್ಟೆ ಬಂದ್ ಆಗುತ್ತಾ? ಹೂಡಿಕೆದಾರರಿಗೆ ಕ್ಲಿಯರ್ ಮಾಹಿತಿ!

    “ಸ್ಟಾಕ್ ಮಾರ್ಕೆಟ್ ಹಾಲಿಡೇ 2026” ಇದೀಗ ಹೂಡಿಕೆದಾರರಲ್ಲಿ ದೊಡ್ಡ ಗೊಂದಲ ಮೂಡಿಸಿದೆ. ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಅಥವಾ ಶುಕ್ರವಾರ ಷೇರು ಮಾರುಕಟ್ಟೆ ಬಂದ್ ಆಗುತ್ತದೆಯಾ? ಎಂಬ ಪ್ರಶ್ನೆ ಟ್ರೇಡರ್‌ಗಳ ನಡುವೆ ಭಾರೀ...

    ಬ್ರೇಕಿಂಗ್! ಮಾರುಕಟ್ಟೆ ರಾಕೆಟ್—ಸೆನ್ಸೆಕ್ಸ್ 1300 ಪಾಯಿಂಟ್ ಜಿಗಿತ! ರೂಪಾಯಿ ಕುಸಿತ, ಚಿನ್ನ ಏರಿಕೆ… ಏನಿದು ಮಿಶ್ರ ಸಿಗ್ನಲ್?

    “ಸ್ಟಾಕ್ ಮಾರ್ಕೆಟ್ 24 ಮಾರ್ಚ್ 2026” ಹೂಡಿಕೆದಾರರಿಗೆ ಒಂದೇ ದಿನದಲ್ಲಿ ರೋಲರ್ ಕೋಸ್ಟರ್ ಅನುಭವ ನೀಡಿದೆ! ಒಂದೆಡೆ ಷೇರು ಮಾರುಕಟ್ಟೆ ಭರ್ಜರಿ ಏರಿಕೆ ಕಂಡಿದ್ದರೆ, ಇನ್ನೊಂದೆಡೆ ರೂಪಾಯಿ ಕುಸಿತ ಮತ್ತು ಚಿನ್ನದ ಬೆಲೆ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading