ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಹಲವಾರು ಶವಗಳನ್ನು ಅಕ್ರಮವಾಗಿ ಹೂತಿದ್ದೇನೆ ಎಂದು ಆರೋಪಿಸಿ ಬಳಿಕ ತಪ್ಪು ಮಾಹಿತಿ ಆರೋಪದ ಅಡಿಯಲ್ಲಿ ಆರೋಪಿಯಾದ ಮಾಸ್ಕ್ಮ್ಯಾನ್ ಚಿನ್ನಯ್ಯ ಎಸ್ಐಟಿ ತನಿಖೆಯ ಸಂದರ್ಭದಲ್ಲಿ ಧರ್ಮಸ್ಥಳದ ಬಂಗ್ಲೆಗುಡ್ಡದ ಬಗ್ಗೆ ಸ್ಪೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದ ಎಂದು ಗೃಹ ಇಲಾಖೆಯ ಉನ್ನತ ಮೂಲವೊಂದು ತಿಳಿಸಿದೆ ಎಂದು ಬೆಂಗಳೂರು ಪೋಸ್ಟ್ ವೆಬ್ಸೈಟ್ ವರದಿ ಮಾಡಿದೆ.
ತಾನು ಸ್ವಚ್ಛತಾ ಕಾರ್ಮಿಕನಾಗಿ ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾಗ ದೇವಸ್ಥಾನದ ಪ್ರಾಧಿಕಾರದವರು ಬಂಗ್ಲೆಗುಡ್ಡ ನಿಷಿದ್ಧ ಸ್ಥಳ ಅಲ್ಲಿಗೆ ಯಾರೂ ಸಹ ಕಾಲಿಡಬಾರದು ಎಂದು ಕಟ್ಟುನಿಟ್ಟಾಗಿ ಹೇಳಿತ್ತು ಎಂದು ಚಿನ್ನಯ್ಯ ಎಸ್ಐಟಿ ಅಧಿಕಾರಿಗಳಿಗೆ ತಿಳಿಸಿದ್ದನಂತೆ. ಆ ಸ್ಥಳಕ್ಕೆ ನಾನು ಯಾವತ್ತೂ ಹೋಗಿಲ್ಲ, ಆ ಸ್ಥಳಕ್ಕೆ ಕಾಲಿಡಲು ಎಲ್ಲರೂ ಹೆದರುತ್ತಿದ್ದರು ಎಂದೂ ಸಹ ಚಿನ್ನಯ್ಯ ಹೇಳಿದ್ದ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೇ ಚಿನ್ನಯ್ಯನ ಸಹೋದರ ತಾನಾಸಿ ಸಹ ಇದೇ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದ. ಆತನೂ ಸಹ ಇದೇ ರೀತಿಯ ಹೇಳಿಕೆಯನ್ನು ಎಸ್ಐಟಿ ಅಧಿಕಾರಿಗಳ ಮುಂದೆ ನೀಡಿದ್ದು, ಆ ಒಂದು ಸ್ಥಳದ ಬಗ್ಗೆ ನಮಗೆ ಭಯ ಇತ್ತು, ಯಾವತ್ತೂ ಸಹ ಆ ಕಡೆ ಕಣ್ಣು ಹಾಕುವುದಕ್ಕೂ ಸಹ ಪ್ರಯತ್ನಿಸಿಲ್ಲ ಎಂದು ಹೇಳಿದ್ದನಂತೆ.
ಇನ್ನು ಚಿನ್ನಯ್ಯ ನೀಡಿದ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರ ಜುಲೈ 19ರಂದು ಎಸ್ಐಟಿ ರಚಿಸಿ ಆದೇಶ ಹೊರಡಿಸಿತ್ತು. ಆಗಸ್ಟ್ 23ರಂದು ಚಿನ್ನಯ್ಯನನ್ನು ತಪ್ಪು ಹೇಳಿಕೆ ಮೇಲೆ ಬಂಧಿಸಿತ್ತು. ಈ ವೇಳೆ ಚಿನ್ನಯ್ಯ ತಾನು ತಂದ ಬುರುಡೆಯನ್ನು ಸೌಜನ್ಯ ಮಾವ ವಿಠಲಗೌಡ ತಂದುಕೊಟ್ಟಿದ್ದರು ಎಂದು ಹೇಳಿಕೊಂಡಿದ್ದ.
ಅದರ ಆಧಾರದ ಮೇಲೆ ವಿಠಲಗೌಡನನ್ನು ವಿಚಾರಣೆ ನಡೆಸಿದಾಗ ಆತ ಎಸ್ಐಟಿಯನ್ನು ಬಂಗ್ಲೆಗುಡ್ಡಕ್ಕೆ ಕರೆದೊಯ್ದಿದ್ದ. ಈ ವೇಳೆ ಎಸ್ಐಟಿ ಅಧಿಕಾರಿಗಳಿಗೆ ಒಂದು ಮಗುವಿನ ಮೂಳೆಯೂ ಸೇರಿದಂತೆ ಹಲವು ಮೂಳೆಗಳು ದೊರಕಿದ್ದವು.
ಬಿಹಾರ ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿಗೆ ಮೇಲುಗೈ ಎಂದು ಟ್ವೀಟ್ ಮಾಡಿ ಡಿಲಿಟ್ ಮಾಡಿದ ಡಿಡಿ ನ್ಯೂಸ್!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


