Monday, August 31, 2026
spot_img
More
    spot_img
    HomeEntertainmentಜೈಲಿನಲ್ಲಿ ಸಂಜಯ್ ದತ್ ಏನು ಕೆಲಸ ಮಾಡುತ್ತಿದ್ದರು? ಸಂಬಳ ಎಷ್ಟಾಗಿತ್ತು ?

    ಜೈಲಿನಲ್ಲಿ ಸಂಜಯ್ ದತ್ ಏನು ಕೆಲಸ ಮಾಡುತ್ತಿದ್ದರು? ಸಂಬಳ ಎಷ್ಟಾಗಿತ್ತು ?

    ಸಂಜಯ್ ದತ್ ಅವರನ್ನು ಭಯೋತ್ಪಾದನೆ ಪ್ರಕರಣದಲ್ಲಿ ಬಂಧಿಸಲಾಗಿತ್ತು(1993). ಟಾಡಾ ಪ್ರಕರಣ ದಾಖಲಿಸಲಾಗಿತ್ತು. ಆದರೆ ಆ ಬಳಿಕ ಅವರಿಗೆ ಶಸ್ತ್ರಾಸ್ತ್ರ ಕಾಯ್ದೆಯಡಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಕ್ಕಾಗಿ ಐದು ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಲಾಯ್ತು. ಐದು ವರ್ಷ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದರು ಸಂಜಯ್ ದತ್.

    Advertisement

    ಮಹಾರಾಷ್ಟ್ರ ಸರಕಾರವು ಸನ್ನಡತೆ ಆಧಾರದ ಮೇಲೆ 8 ತಿಂಗಳ ಶಿಕ್ಷಾವಧಿಯನ್ನು ಕಡಿತಗೊಳಿಸಿ ಅವರನ್ನು ಬಿಡುಗಡೆಗೊಳಿಸಲು ನಿರ್ಧರಿಸಿತು. 42 ತಿಂಗಳ ಜೈಲುಶಿಕ್ಷೆಯ ಬಳಿಕ ದತ್ ಬಿಡುಗಡೆ ಘೋಷಣೆಯಾಯಿತು‌.

    ಹಾಸ್ಯನಟ ಕಪಿಲ್ ಶರ್ಮಾ ಅವರ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ಗೆ ಸಂಜಯ್ ದತ್ ಆಗಮಿಸಿದ್ದರು, ಆಗ ನಟ ತಮ್ಮ ಕೆಲವು ದಿನಗಳ ಜೈಲುವಾಸದ ಬಗ್ಗೆ ಮಾಹಿತಿ ನೀಡಿದ್ದಾರೆ. ಸಂಜಯ್ ದತ್ ಜೈಲಿನಲ್ಲಿ ಕೆಲಸ ಮಾಡುತ್ತಿದ್ದರು, ಅದಕ್ಕಾಗಿ ಅವರಿಗೆ ಸಂಭಾವನೆಯೂ ಸಿಗುತ್ತಿತ್ತು.

    ಸಂಜಯ್ ದತ್ ಜೈಲಿನಲ್ಲಿ ತಮ್ಮದೇ ಆದ ರೇಡಿಯೋ ಕಾರ್ಯಕ್ರಮವನ್ನು ನಡೆಸುತ್ತಿದ್ದರು. ಇದಲ್ಲದೆ, ನಟ ನಾಟಕ ಕಂಪನಿಯನ್ನು ಸಹ ಸ್ಥಾಪಿಸಿದ್ದರು. ಇದಲ್ಲದೆ, ಸಂಜಯ್ ಜೈಲಿನಲ್ಲಿ ಕುರ್ಚಿಗಳು ಮತ್ತು ಪೇಪರ್ ಬ್ಯಾಗ್‌ಗಳನ್ನು ತಯಾರಿಸುವ ಮೂಲಕವೂ ಹಣ ಸಂಪಾದಿಸಿದರು.

    ನಾನು ಜೈಲಿನಲ್ಲಿ ನಾನು ನಾಟಕ ಕೂಡ ಮಾಡಿಸಿದೆ. ನಾನು ಜೈಲಿನಲ್ಲಿ ಕಂಗಾನಿ ಎಂಬ ನಾಟಕವನ್ನು ಸಹ ಪ್ರಾರಂಭಿಸಿದ್ದೆ. ಕಂಬಾನ ನಾಟಕದ ನಿರ್ದೇಶಕ ನಾನು. ಕೊಲೆ ಮಾಡಿದ ಜನರು ನನ್ನೊಂದಿಗೆ ಕೆಲಸ ಮಾಡುತ್ತಿದ್ದರು. ನಾನು ಕೈದಿಗಳಿಂದ ನಾಟಕಗಳಿಗೆ ಕಥೆಗಳನ್ನು ಬರೆಯುತ್ತಿದ್ದೆ. ಎಂದು ಸಂಜಯ್ ದತ್ ಹೇಳಿದ್ದಾರೆ.

    ಸಂಜಯ್ ದತ್ ಜೈಲಿನಲ್ಲಿ 38 ಸಾವಿರ ರೂಪಾಯಿ ಹಣವನ್ನು ಗಳಿಕೆ ಮಾಡಿದ್ದರು. ಇದರಲ್ಲಿ ಅವರು ಜೈಲಿನಲ್ಲಿ ದಿನ ನಿತ್ಯ ಬಳಕೆ ವಸ್ತುಗಳನ್ನು ಖರೀದಿ ಮಾಡಿದ್ದರು. ಇದರಿಂದ ಅವರಿಗೆ ಕೊನೆಯಲ್ಲಿ ಉಳಿದಿದ್ದು 450 ರೂಪಾಯಿ ಮಾತ್ರ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading