ಸರ್ಕಾರದ ಎಡವಟ್ಟುಗಳನ್ನು ಟೀಕಿಸಲು ಜನ ಸಾಮಾನ್ಯರು ಭಿನ್ನವಿಭಿನ್ನ ಮಾರ್ಗಗಳನ್ನು ಅನುಸರಿಸಿದ್ದನ್ನು ಕಂಡಿದ್ದೇವೆ. ಅದರಲ್ಲೂ ರಸ್ತೆ ಕಾಮಗಾರಿ ಮಾಡದ ಸರ್ಕಾರದ ವಿರುದ್ಧ ನೀರು ನಿಂತ ರಸ್ತೆಯಲ್ಲಿಯೇ ನಾಟಿ ಮಾಡಿ ಪ್ರತಿಭಟನೆ ನಡೆಸಿದ ಹಲವು ಉದಾಹರಣೆಗಳಿವೆ.
ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆಯ ಫಲಕದ ಫೋಟೊವೊಂದು ವೈರಲ್ ಆಗಿದ್ದು, ರಸ್ತೆಯಲ್ಲಿ ನಿಧಿ ಇರುವ ಕಾರಣ ರಸ್ತೆಯನ್ನು ಸರಿ ಮಾಡಿಸದೇ ರಾಜ್ಯ ಸರ್ಕಾರ ಹಾಗೇ ಬಿಟ್ಟಿದೆ ಎಂದು ಹಾಸ್ಯಾಸ್ಪದವಾಗಿ ಬರೆಯಲಾಗಿದೆ.
ಹೌದು, ʼಎಚ್ಚರಿಕೆ ಫಲಕʼ ಎಂಬ ತಲೆಬರದೊಂದಿಗೆ ಆರಂಭವಾಗುವ ಈ ಫಲಕದಲ್ಲಿ ʼಯಾರೋ ಮಾಂತ್ರಿಕರು ಕೈಕಂಬದಿಂದ ಕುಕ್ಕೆ ಸುಬ್ರಹ್ಮಣ್ಯದವರೆಗಿನ ರಸ್ತೆಯಲ್ಲಿ ನಿಧಿ ಇದೆ ಎಂದು ಹೇಳಿದ ಕಾರಣ ಎಚ್ಚೆತ್ತ ರಾಜ್ಯ ಸರ್ಕಾರ ಈ ರಸ್ತೆಯಲ್ಲಿ ನಿಧಿಯನ್ನು ಹುಡುಕಿಸುವ ಕಾರಣದಿಂದ ಅಲ್ಲಲ್ಲಿ ರಸ್ತೆ ಮಧ್ಯೆಯೇ ದೊಡ್ಡ ಹೊಂಡಗಳನ್ನು ತೋಡಿಸಿ ಹಾಗೆಯೇ ಬಿಟ್ಟಿದ್ದಾರೆ. ನಿಧಾನವಾಗಿ ಚಲಿಸಿʼ ಎಂದು ಬರೆಯಲಾಗಿದೆ.
ಈ ಮೂಲಕ ಈ ಮಾರ್ಗದಲ್ಲಿ ರಸ್ತೆ ಸರಿಪಡಿಸದ ರಾಜ್ಯ ಸರ್ಕಾರವನ್ನು ಅನಾಮಧ್ಯೇಯ ವ್ಯಕ್ತಿ ವಿಭಿನ್ನವಾಗಿ ಟೀಕೆ ಮಾಡಿದ್ದಾರೆ.
ಬೆಂಗಳೂರು: ಬಂಧಿತ ಮೂವರು ಶಂಕಿತ ಉಗ್ರರು 6 ದಿನ ಎನ್ಐಎ ಕಸ್ಟಡಿಗೆ
ಕೃಷಿ ಕನ್ನಡ ಎಐ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


