ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿನಲ್ಲಿದ್ದು, ಕಾಂಗ್ರೆಸ್ ಶಾಸಕರ ಜೊತೆ ನೇರಾನೇರ ಚರ್ಚೆಯನ್ನು ನಡೆಸಿ ಪಕ್ಷದ ʼಅಸಮಾಧಾನತೆʼ ಸರಿಪಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಹೀಗಿರುವ ಸಂದರ್ಭದಲ್ಲಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚನ್ನಪಟ್ಟಣ ಕ್ಷೇತ್ರದಿಂದ ಗೆದ್ದ ಸಿಪಿ ಯೋಗೇಶ್ವರ್ ವಿರುದ್ಧ ವೈಯಕ್ತಿಕ ಕಾರಣಗಳನ್ನು ನೀಡಿ ಪತ್ನಿ ಮಾಳವಿಕ ದೂರನ್ನು ಸಲ್ಲಿಸಿದ್ದಾರೆ.
ಪುತ್ರಿ ನಿಶಾ ಯೋಗೇಶ್ವರ್ ಜತೆ ಆಗಮಿಸಿ ಸುರ್ಜೇವಾಲ ಅವರಿಗೆ ದೂರು ನೀಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಮಾಳವಿಕ ಓರ್ವ ತಂದೆಯಾಗಿ ಕೊಡಬಾರದ ಕಷ್ಟಗಳನ್ನೆಲ್ಲ ಯೋಗೇಶ್ವರ್ ತನ್ನ ಮಕ್ಕಳಿಗೆ ನೀಡಿದ್ದಾರೆ, ಅಧಿಕಾರದ ಅಸ್ತ್ರ ಬಳಸಿ ತಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಗಳು ತಂದೆಯಿಂದ ತನಗಾದ ಅನ್ಯಾಯವನ್ನು ಹಂಚಿಕೊಂಡರೆ ಅದನ್ನೂ ಸಹ ಅಧಿಕಾರವನ್ನು ಬಳಸಿಕೊಂಡು ನಾಶಪಡಿಸಿದ್ದಾರೆ ಎಂದೂ ಸಹ ಮಾಳವಿಕ ದೂಷಿಸಿದ್ದಾರೆ.
ಬೇಕಂತಲೇ ತನ್ನ ಮಕ್ಕಳ ಮೇಲೆ ದೂರಿನ ಮೇಲೆ ದೂರುಗಳನ್ನು ಹಾಕಲಾಗಿದ್ದು, ಪ್ರತಿದಿನ ಕೋರ್ಟ್ ಕಚೇರಿಯಂತ ಓಡಾಡುವುದೇ ಆಗಿದೆ, ಮಕ್ಕಳನ್ನು ಬೀದಿಗೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಫೋರ್ಬ್ಸ್ ಟಾಪ್ 10 ಶ್ರೀಮಂತರ ಪಟ್ಟಿ 2025: ಪುರುಷರ ನಡುವೆ ಏಕೈಕ ಮಹಿಳಾ ಉದ್ಯಮಿಗೆ ಗೌರವದ ಸ್ಥಾನ
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


