ಬೆಳಗಾವಿ: ಯಾವುದೇ ರೀತಿಯ ಕನಿಷ್ಟ ಮೂಲಸೌಲಭ್ಯಗಳನ್ನು ಒದಗಿಸದೆ ಕೇವಲ ಪ್ರತಿಷ್ಠೆಗಾಗಿ ವಿವಿಗಳನ್ನು ಆರಂಭಿಸುವ ಔಚಿತ್ಯವಾದರೂ ಏನಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದರು.
ಬಿಜೆಪಿಯ ಡಿ.ಎಸ್.ಅರುಣ್ ಅವರು, ಶಿವಮೊಗ್ಗದಲ್ಲಿ ಆರ್ಯವೇದಿಕ್ ಕಾಲೇಜು ನೆನೆಗುದಿಗೆ ಬಿದ್ದಿರುವ ಬಗ್ಗೆ ಆರೋಗ್ಯ ಸಚಿವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡುವ ವೇಳೆ, ರಾಜ್ಯದ ಅನೇಕ ಕಡೆ ವಿವಿಗಳನ್ನು ಸ್ಥಾಪಿಸಿದ್ದೇವೆ. ಆದರೆ ಇಲ್ಲಿ ಕನಿಷ್ಟ ಮೂಲಭೂತ ಸರ್ಯಗಳಿಲ್ಲ. ಸಿಬ್ಬಂದಿ ಕೊರತೆ, ಸಂಶೋಧನಾಲಯ, ಗ್ರಂಥಾಲಯ, ಕ್ರೀಡಾಂಗಣ ಯಾವುದೇ ಸರ್ಯಗಳಿಲ್ಲದೆ ಅನೇಕ ವಿವಿಗಳು ಹಾಗೇ ಉಳಿದಿವೆ. ಇದೊಂದು ರೀತಿ ಬಿಳಿಯಾನೆಯಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ರ್ಯುವೇದಿಕ್ ಕಾಲೇಜನ್ನು ೨೦೨೧-೨೨ನೇ ಸಾಲಿನ ಬಜೆಟ್ ನಲ್ಲಿ ಸ್ಥಾಪನೆ ಮಾಡುವುದಾಗಿ ಘೋಷಿಸಲಾಗಿತ್ತು. ಅಂದು ಇದಕ್ಕಾಗಿ ೧೦೦ ಎಕರೆ ಜಮೀನನ್ನು ಸಹ ಮೀಸಲಿಡಲಾಗಿತ್ತು. ಈಗ ಇಲ್ಲಿ ಕೇವಲ ೮ ಎಕರೆ ೧೦ ಗುಂಟೆ ಜಮೀನು ಉಳಿದಿದೆ. ಬೇರೆ ಬೇರೆ ಯೋಜನೆಗಳಿಗೆ ಜಮೀನನ್ನು ವಶ ಪಡಿಸಿಕೊಳ್ಳಲಾಗದೆ ಎಂದು ಮಾಹಿತಿ ನೀಡಿದರು.
ಒಂದು ವಿವಿಯನ್ನು ಸ್ಥಾಪನೆ ಮಾಡಬೇಕಾದರೆ ವಿಜಿಸಿ ಮಾರ್ಗಸೂಚಿ ಪ್ರಕಾರ ೧೦ ಎಕರೆ ಜಮೀನು ಇರಲೇಬೇಕು. ವಾಸ್ತವವಾಗಿ ವಿವಿಗಳಿಗೆ ಕನಿಷ್ಟ ಎಂದರೂ ೫೦ ಎಕರೆ ಜಮೀನು ಬೇಕಾಗುತ್ತದೆ. ಸಸಿಗಳನ್ನು ಬೆಳೆಸುವುದು, ಗ್ರಂಥಾಲಯ, ಸಿಬ್ಬಂದಿ ಹೀಗೆ ನಾನಾ ಕೆಲಸಗಳಿಗೆ ಕನಿಷ್ಟ ಪಕ್ಷ ೫೦ ಎಕರೆ ಜಮೀನು ಬೇಕು. ಮುಂದಿನ ದಿನಗಳಲ್ಲಿ ಇದರ ಪರಿಶೀಲನೆ ಮಾಡುವುದಾಗಿ ಆಶ್ವಾಸನೆ ಮಾಡಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


