Friday, August 7, 2026
spot_img
More
    spot_img
    HomeTop Storyಜಾತಿಗಣತಿ ವರದಿ ಬಗ್ಗೆ ಕೆಲ ಸಮುದಾಯಗಳಲ್ಲಿ ಆತಂಕ ಇದೆ: ಈಶ್ವರ್ ಖಂಡ್ರೆ

    ಜಾತಿಗಣತಿ ವರದಿ ಬಗ್ಗೆ ಕೆಲ ಸಮುದಾಯಗಳಲ್ಲಿ ಆತಂಕ ಇದೆ: ಈಶ್ವರ್ ಖಂಡ್ರೆ

    ಸದ್ಯ ರಾಜ್ಯ ರಾಜಕೀಯದಲ್ಲಿ ಕಾಂತರಾಜು ಸಮಿತಿ ಸಿದ್ಧಪಡಿಸಿರುವ ಜಾತಿ ಗಣತಿ ವರದಿ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಕಾಂತರಾಜು ಸಮಿತಿ ವರದಿ ಸಲ್ಲಿಸಿದಾಗಿನಿಂದಲೂ ಸತತವಾಗಿ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದು, ಕಾಂಗ್ರೆಸ್ ಸರ್ಕಾರ ಸಂಪುಟದಲ್ಲಿ ವರದಿ ಮಂಡಿಸಲು ಮುಂದಾಗಿದೆ.

    Advertisement

    ಇಂದು ವರದಿ ಮಂಡನೆಯಾಗಲಿದ್ದು ಹಲವು ಚರ್ಚೆಗಳು ನಡೆಯಲಿದೆ ಎಂಬ ನಿರೀಕ್ಷೆಯಿತ್ತು. ಆದರೆ ಜಾತಿ ಗಣತಿ ವರದಿ ಚರ್ಚೆಗೆಂದು ಏಪ್ರಿಲ್ 17ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಚರ್ಚೆಗಳು ನಡೆಯಲಿವೆ ಎಂಬ ಮಾತುಗಳು ಕೇಳಿಬಂದಿವೆ.

    ಸಂಪುಟ ಸಭೆಯ ಬಳಿಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಜಾತಿ ಗಣತಿ ವರದಿಯ ಬಗ್ಗೆ ಮಾತನಾಡಿದ್ದು, ಇಂದು ಜಾತಿಗಣತಿ ಬಗ್ಗೆ ಯಾವುದೇ ಚರ್ಚೆಗಳೂ ಸಹ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಅಲ್ಲದೇ ಈ ಸಮೀಕ್ಷೆಯನ್ನು ಸಾಮಾಜಿಕ ಆರ್ಥಿಕ ಸಮೀಕ್ಷೆ ಎಂದಿರುವ ಈಶ್ವರ್ ಖಂಡ್ರೆ ಮುಂದಿನ ಸಚಿವ ಸಂಪುಟದಲ್ಲಿ ಇದರ ಬಗ್ಗೆ ಚರ್ಚೆ ಆಗಲಿದೆ ಎಂದಿದ್ದಾರೆ. ಎಲ್ಲ ಸಮುದಾಯದವರ ಜೊತೆ ಚರ್ಚೆ ಮಾಡಿ, ಸಾಧಕ ಬಾಧಕಗಳನ್ನು ನೋಡಿಕೊಂಡು ಸಚಿವ ಸಂಪುಟ ತೀರ್ಮಾನವನ್ನು ಮಾಡಲಿದೆ ಎಂದಿದ್ದಾರೆ.

    ಇನ್ನು ಪ್ರಬಲ ಸಮುದಾಯದವರು ಈ ವರದಿ ಬಗ್ಗೆ ವಿರೋಧ ಮಾಡುತ್ತಿದ್ದಾರೆ ಎಂಬುದರ ಕುರಿತು ಸಹ ಪ್ರತಿಕ್ರಿಯಿಸಿದ ಖಂಡ್ರೆ ಈ ವರದಿ ಬಗ್ಗೆ ಕೆಲ ಸಮುದಾಯಗಳಲ್ಲಿ ಆತಂಕ ಇದೆ ಎಂದರು ಹಾಗೂ ವರದಿಯಲ್ಲಿ ಏನಿದೆ ಎಂಬುದು ಬಹಿರಂಗವಾದ ಬಳಿಕ ಅಧ್ಯಯನ ಮಾಡಿ ಇದು ಸರಿ ಇದೆಯಾ, ವೈಜ್ಞಾನಿಕವಾಗಿ ಆಗಿದೆಯಾ ಎಂಬುದನ್ನು ಪರಿಶೀಲಿಸಬಹುದು, ಈಗಲೇ ವಿರೋಧ ಸರಿಯಲ್ಲ ಎಂದಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading