Friday, August 7, 2026
spot_img
More
    spot_img
    HomeTop StoryIPL 2025: ಅಭಿಷೇಕ್ ಶರ್ಮಾ ಆ ಚೀಟಿಯನ್ನು ಐಪಿಎಲ್ ಶುರುವಾದಾಗಿಂದ ಇಟ್ಕೊಂಡು ಓಡಾಡ್ತಾ ಇದ್ದ ಎಂದ...

    IPL 2025: ಅಭಿಷೇಕ್ ಶರ್ಮಾ ಆ ಚೀಟಿಯನ್ನು ಐಪಿಎಲ್ ಶುರುವಾದಾಗಿಂದ ಇಟ್ಕೊಂಡು ಓಡಾಡ್ತಾ ಇದ್ದ ಎಂದ ಟ್ರಾವಿಸ್ ಹೆಡ್

    ಹೈದರಾಬಾದ್: ನಿನ್ನೆ ( ಏಪ್ರಿಲ್‌ 12 ) ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 27ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ 8 ವಿಕೆಟ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿತು.

    Advertisement

    ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಟಾಪ್‌ ಆರ್ಡರ್ ಹಾಗೂ ಅಂತಿಮ ಹಂತದಲ್ಲಿ ಮಾರ್ಕಸ್ ಸ್ಟಾಯ್ನಿಸ್ ಅಬ್ಬರದಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 245 ರನ್ ಕಲೆಹಾಕಿ ಸನ್‌ರೈಸರ್ಸ್ ಹೈದರಾಬಾದ್‌ಗೆ 246 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು.

    ಈ ಬೃಹತ್ ಗುರಿಯನ್ನು ಸನ್‌ರೈಸರ್ಸ್ ಹೈದರಾಬಾದ್ 171 ರನ್‌ಗಳ ಅಬ್ಬರದ ಓಪನಿಂಗ್ ಜತೆಯಾಟ, ಅದರಲ್ಲಿಯೂ ಅಭಿಷೇಕ್ ಶರ್ಮ ದಾಖಲೆಯ ಇನ್ನಿಂಗ್ಸ್‌ ನೆರವಿನಿಂದ 18.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 247 ರನ್ ಬಾರಿಸಿ ಇನ್ನೂ 9 ಎಸೆತ ಬಾಕಿ ಇರುವಾಗಲೇ 8 ವಿಕೆಟ್‌ಗಳ ಗೆಲುವು ದಾಖಲಿಸಿತು.

    ಸನ್ ರೈಸರ್ ಹೈದರಾಬಾದ್ ಪರ 55 ಎಸೆತಗಳಲ್ಲಿ ಬರೋಬ್ಬರಿ 141 ರನ್ ಚಚ್ಚಿದ ಅಭಿಷೇಕ್ ಶರ್ಮ ಬೃಹತ್ ಮೊತ್ತ ಕಲೆಹಾಕಿ ಗೆಲುವಿನ ನಿರೀಕ್ಷೆಯಲ್ಲಿದ್ದ ಪಂಜಾಬ್ ಕಿಂಗ್ಸ್ ಆಟಗಾರರಿಗೆ ನಿರಾಸೆ ಮೂಡಿಸಿದರು. 8 ಎಸೆತಗಳಲ್ಲಿ 18 ರನ್ ಗಳಿಸಿದ್ದಾಗ ಕ್ಯಾಚ್ ನೀಡಿ ನೋಬಾಲ್ ಆದ ಕಾರಣ ಜೀವ ಉಳಿಸಿಕೊಂಡ ಅಭಿಷೇಕ್ ಶರ್ಮಾ ತದನಂತರ 40 ನಿಷೇಧಗಳಲ್ಲಿ ಶತಕವನ್ನು ಪೂರೈಸಿ ಅತಿ ಅಪರೂಪದ ಸಂಭ್ರಮಾಚರಣೆಯನ್ನು ಮಾಡಿದರು.

    ಚೀಟಿಯೊಂದನ್ನು ತೆಗೆದ ಅಭಿಷೇಕ್ ಶರ್ಮ ಅದನ್ನು ಪ್ರದರ್ಶಿಸಿದರು. ಈ ಶತಕ ಆರೆಂಜ್ ಆರ್ಮಿ ಅಭಿಮಾನಿಗಳಿಗಾಗಿ ಎಂದು ಚೀಟಿಯಲ್ಲಿ ಬರೆದಿದ್ದ ಅಭಿಷೇಕ್ ಶರ್ಮ ತಮ್ಮ ಶತಕವನ್ನು ಸನ್ ರೈಸರ್ಸ್ ಹೈದರಾಬಾದ್ ತಂಡದ ಅಭಿಮಾನಿಗಳಿಗೆ ಅರ್ಪಿಸಿದರು. ಈ ಸಂಭ್ರಮಾಚರಣೆ ಸದ್ಯ ಇಂಟರ್ನೆಟ್ ವೈರಲ್ ಕಂಟೆಂಟ್ ಆಗಿ ಪರಿಣಮಿಸಿದ್ದು, ಎಲ್ಲೆಡೆ ಇದರ ಕುರಿತು ಚರ್ಚೆ ನಡೆಯುತ್ತಿವೆ. ಪಂದ್ಯ ಮುಗಿದ ಬಳಿಕ ಅಭಿಷೇಕ್ ಶರ್ಮ ಈ ಸೆಲಬ್ರೇಶನ್ ಮಾಡಿದಾಗ ಕಣದಲ್ಲಿದ್ದ ಹೆಡ್ ಈ ಚೀಟಿಯ ಹಿಂದಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

    ಅಸಲಿಯತ್ತಿಗೆ ಅಭಿಷೇಕ್ ಶರ್ಮ ಟೂರ್ನಿಯ ಮೊದಲ ಪಂದ್ಯದಿಂದಲೂ ಈ ಚೀಟಿಯನ್ನು ತೋರಿಸಿ ಅಭಿಮಾನಿಗಳಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಬೇಕು ಎಂದುಕೊಂಡಿದ್ದರಂತೆ. ಆದರೆ ಕಳೆದ ಐದು ಪಂದ್ಯಗಳಲ್ಲಿಯೂ ಅಭಿಷೇಕ್ ಶರ್ಮ ಕಳಪೆ ಪ್ರದರ್ಶನ ನೀಡಿದ ಕಾರಣ ಈ ಚೀಟಿಯನ್ನು ಅಷ್ಟು ಪಂದ್ಯಗಳಲ್ಲಿಯೂ ತಮ್ಮ ಜೇಬಿನಲ್ಲಿಯೇ ಇಟ್ಟುಕೊಂಡು ಓಡಾಡಿದ್ದರಂತೆ. ಈ ವಿಷಯವನ್ನ ಪಂದ್ಯ ಮುಗಿದ ಬಳಿಕ ಹೆಡ್ ಬಹಿರಂಗಪಡಿಸಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading