ಜೈಪುರ: ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ನ 28ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿವೆ.
ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್ ಆರಿಸಿಕೊಂಡು ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿರುವ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 174 ರನ್ಗಳ ಗುರಿಯನ್ನು ನೀಡಿದೆ.
ಇನ್ನು ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೀಲ್ಡರ್ಗಳು ಎರಡು ಬಾರಿ ಸುಲಭವಾದ ಕ್ಯಾಚ್ ಬಿಟ್ಟಿದ್ದಾರೆ. ಮೊದಲಿಗೆ ಸುಯಶ್ ಶರ್ಮಾ ಎಸೆದ ಹತ್ತನೇ ಓವರ್ನ ಐದನೇ ಎಸೆತದಲ್ಲಿ ರಿಯಾನ್ ಪರಾಗ್ ಕ್ಯಾಚ್ ಅನ್ನು ಯಶ್ ದಯಾಳ್ ಕೈಚೆಲ್ಲಿದರು. ಕೇವಲ 9 ರನ್ ಗಳಿಸಿದ್ದ ಪರಾಗ್ ಕ್ಯಾಚ್ ಬಿಟ್ಟ ಕಾರಣ 30 ರನ್ ಪೇರಿಸಿದರು.
ಇನ್ನು ಮತ್ತೆ ಸುಯಶ್ ಶರ್ಮಾ ಎಸೆದ 17ನೇ ಓವರ್ನ ಅಂತಿಮ ಎಸೆತದಲ್ಲಿ ಧ್ರುವ್ ಜುರೆಲ್ ಸುಲಭ ಕ್ಯಾಚನ್ನು ಕೊಹ್ಲಿ ಕೈಚೆಲ್ಲಿದರು. ಆ ಸಂದರ್ಭದಲ್ಲಿ 11 ರನ್ ಬಾರಿಸಿದ್ದ ಧ್ರುವ್ ಜುರೆಲ್ ಕೊನೆಯ ಅಜೇಯ 35 ರನ್ ಬಾರಿಸಿದರು. ಹೀಗೆ ಕ್ಯಾಚ್ ಬಿಟ್ಟು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 45 ರನ್ ( ಜೀವದಾನದ ಬಳಿಕ ಧ್ರುವ್ ಜುರೆಲ್ ಹಾಗೂ ರಿಯಾನ್ ಪರಾಗ್ ಬಾರಿಸಿದ ರನ್ ) ಹೆಚ್ಚಳಕ್ಕೆ ಈ ಇಬ್ಬರು ಕಾರಣವಾದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


