Saturday, August 8, 2026
spot_img
More
    spot_img
    HomeTop Storyಮಳೆ ಕಾರಣ ತಡವಾಗಿ ಆರಂಭಗೊಂಡ ಕರಗ ಮಹೋತ್ಸವ; ಮಳೆ ನಡುವೆಯೂ ಕರಗ ಕಣ್ತುಂಬಿಕೊಂಡ ಭಕ್ತಸಾಗರ

    ಮಳೆ ಕಾರಣ ತಡವಾಗಿ ಆರಂಭಗೊಂಡ ಕರಗ ಮಹೋತ್ಸವ; ಮಳೆ ನಡುವೆಯೂ ಕರಗ ಕಣ್ತುಂಬಿಕೊಂಡ ಭಕ್ತಸಾಗರ

    ಬೆಂಗಳೂರು: ಬೆಂಗಳೂರಿನ ಪ್ರಸಿದ್ಧ ಹಾಗೂ ಅತಿ ಹಳೆಯ ಆಚರಣೆಯಾದ ಕರಗ ಮಹೋತ್ಸವದ ಶಕ್ತ್ಯೋತ್ಸವ ತಡರಾತ್ರಿ 2.30ಕ್ಕೆ ಆರಂಭಗೊಂಡಿದೆ.

    Advertisement

    ತಿಗಳರಪೇಟೆಯ ಧರ್ಮರಾಯಸ್ವಾಮಿ ದೇಗುಲದ ಬಳಿ ಪಂಚ ಪಾಂಡವರ ದೇವಾಲಯದ ರಥೋತ್ಸವ ನಡೆದ ಬಳಿಕ ದೇವಾಲಯದಲ್ಲಿ ಪೂಜೆ ಮುಗಿಸಿದ ಬಳಿಕ ಕರಗ ಹೊತ್ತ ಜ್ಞಾನೇಂದ್ರ ದೇವಾಲಯದಿಂದ ಆಚೆ ಬಂದು ರಥವನ್ನು ಸುತ್ರು ಹಾಕಿ ನಗರ ಪ್ರದಕ್ಷಿಣೆಗೆ ಹೊರಟಿದ್ದಾರೆ. ಕರಗದ ಸುತ್ತ ವೀರಪುತ್ರರು ರಕ್ಷಣೆಗಾಗಿ ನಿಂತಿದ್ದು, ಮಲ್ಲಿಗೆ ಹೂಮಳೆ ಸುರಿಸಿದ್ದಾರೆ.

    ಇನ್ನು ಪ್ರತಿ ಬಾರಿಯಂತೆ ಈ ಬಾರಿಯೂ ಮಲ್ಲಿಗೆ ಹೂಗಳಿಂದ ಕರಗವನ್ನು ಅಲಂಕರಿಸಲಾಗಿದ್ದು, ನೆರೆದಿದ್ದ ಭಕ್ತರು ವಿಶ್ವವಿಖ್ಯಾತ ಕರಗ ಮಹೋತ್ಸವಕ್ಕೆ ಸಾಕ್ಷಿಯಾಗಿದ್ದಾರೆ. ಕರಗ ಹೊತ್ತು ವೀರನೃತ್ಯ ಮಾಡುತ್ತಾ ನಗರ ಪ್ರದಕ್ಷಿಣೆ ಹೊರಟ ಜ್ಞಾನೇಂದ್ರ 15ನೇ ಬಾರಿಗೆ ಕರಗ ಹೊತ್ತಿದ್ದಾರೆ.

    ನಿನ್ನೆ ರಾತ್ರಿ ಹತ್ತು ಗಂಟೆಗೆ ತಿಗಳರಪಾಳ್ಯದಲ್ಲಿ ಮಳೆ ಆರಂಭಗೊಂಡ ಕಾರಣ ರಥ ಸಿದ್ಧತೆ ಕಾರ್ಯ ಹಾಗೂ ಇತರೆ ಪೂಜೆ ಕಾರ್ಯಗಳಲ್ಲಿ ವಿಳಂಬವಾಗಿದ್ದು, ಒಂದೂವರೆಗೆ ಆರಂಭವಾಗಬೇಕಿದ್ದ ಕರಗ ಒಂದು ಗಂಟೆ ತಡವಾಗಿ ಆರಂಭವಾಗಿದೆ. ಮಳೆಯನ್ನೂ ಸಹ ಲೆಕ್ಕಿಸದ ಭಕ್ತ ಸಾಗರ ಕರಗ ಮಹೋತ್ಸವ ಕಣ್ತುಂಬಿಕೊಳ್ಳಲು ಕಾದು ನಿಂತು ಮೆರವಣಿಗೆ ಆರಂಭವಾದ ಬಳಿಕ ತೆರಳಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading