ಬೆಂಗಳೂರು: ಇಂದು ( ಏಪ್ರಿಲ್ 17 ) ಸಚಿವ ಸಂಪುಟ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಈಗಾಗಲೇ ಜಾತಿಗಣತಿ ವರದಿಯದ್ದು ಎನ್ನಲಾದ ಜಾತಿವಾರು ಜನಸಂಖ್ಯೆ ಅಂಕಿಅಂಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಭಾರೀ ಪರ ಹಾಗೂ ವಿರೋಧಗಳು ವ್ಯಕ್ತವಾಗಿವೆ.
ಅದರಲ್ಲೂ ಲಿಂಗಾಯತ ಹಾಗೂ ಒಕ್ಕಲಿಗ ಸಮದಾಯಗಳು ತಮ್ಮ ಸಮುದಾಯದ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂದು ಕಿಡಿಕಾರಿದ್ದಾರೆ. ಅತ್ತ ಸಿದ್ದರಾಮಯ್ಯ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಮುಂದಿನ ನಡೆ ಎಂದಿದ್ದಾರೆ.
ಸಂಜೆ 4 ಗಂಟೆಗೆ ಸಚಿವ ಸಂಪುಟ ಸಭೆ ಆರಂಭವಾಗಲಿದ್ದು, ಸಭೆ ಮುಗಿದ ಬಳಿಕ ಸಭೆಯಲ್ಲಿ ಏನು ನಿರ್ಣಯ ತೆಗೆದುಕೊಳ್ಳಲಾಯಿತು ಹಾಗೂ ಏನೆಲ್ಲ ಚರ್ಚೆಗಳು ನಡೆದವು ಎಂಬ ಮಾಹಿತಿ ಹೊರಬರಲಿದೆ. ಹೀಗಾಗಿ ಈ ಕುರಿತು ಜನಸಾಮಾನ್ಯರಲ್ಲೂ ಸಹ ಕುತೂಹಲ ಹೆಚ್ಚಾಗಿದ್ದು, ಕಾತರರಾಗಿ ಕಾಯುತ್ತಿದ್ದಾರೆ.
ಇನ್ನು ಈ ವರದಿ ಬಳಿಕ ಅಂಕಿಅಂಶದಲ್ಲಿ ತಪ್ಪಿದ್ದರೆ ಅದನ್ನು ಸರಿಪಡಿಸಲು ಅವಕಾಶವಿದೆ, ಅಪ್ಡೇಟ್ ಮಾಡಬಹುದು ಎಂದು ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ. ಅಲ್ಲದೇ ವರದಿಯಲ್ಲಿ ಲೋಪದೋಷಗಳಿರಬಹುದು, ಆದರೆ ನ್ಯೂನ್ಯತೆಗಳಂತೂ ಖಂಡಿತವಾಗಿಯೂ ಇಲ್ಲ ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


