ಹೈದರಾಬಾದ್: ತೆಲುಗು ಸಮುದಾಯದ ಕೆಲವು ವರ್ಗಗಳಿಗೆ ಧಕ್ಕೆ ತರುವಂತಹ ಹಾಗೂ ನೋಯಿಸುವಂತಹ ಹೇಳಿಕೆಯನ್ನು ನೀಡಿದ್ದ ನಟಿ ಕಸ್ತೂರಿ ರಂಗನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು, ನವೆಂಬರ್ 3ರಂದು ಬ್ರಾಹ್ಮಣರು ಸಮುದಾಯದ ವಿರುದ್ಧದ ಹಿಂಸಾಚಾರದ ವಿರುದ್ಧ ನಡೆಸಿದ ಪ್ರತಿಭಟನೆಯ ವಿರುದ್ಧ ನಡೆಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟಿ ಕಸ್ತೂರಿ ರಂಗನ್ ಭಾಷಣ ಮಾಡುವಾಗ ʼತೆಲುಗು ಮಹಿಳೆಯರ ಗುಂಪು ತಮಿಳುನಾಡಿನ ರಾಜರಿಗೆ ವೇಷ್ಯೆಯರು ಹಾಗೂ ಉಪಪತ್ನಿಯರಾಗಿ ಸೇವೆ ಸಲ್ಲಿಸಲು ಬಂದಿದ್ದರು. ಬಳಿಕ ಅವರು ತಮಿಳಿಗರು ಎಂದು ಗುರುತಿಸಿಕೊಂಡು ಬ್ರಾಹ್ಮಣರನ್ನು ದೂಷಿಸುವ ಕೆಲಸ ಮಾಡಿದರುʼ ಎಂದು ಹೇಳಿಕೆಯನ್ನು ನೀಡಿದ್ದರು.
ಹೀಗೆ ಕಸ್ತೂರಿ ರಂಗನ್ ನೀಡಿದ ಹೇಳಿಕೆ ವಿವಾದವನ್ನು ಎಬ್ಬಿಸಿತ್ತು. ತನ್ನ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಕಸ್ತೂರಿ ರಂಗನ್ ಡಿಎಂಕೆ ಬೆಂಬಲಿಗರು ತನ್ನ ಹೇಳಿಕೆಯನ್ನು ತಿರುಚಿದ್ದಾರೆ ಹಾಗೂ ತೆಲುಗು ಸಮುದಾಯವನ್ನು ಕೀಳಾಗಿ ಕಾಣುವ ಉದ್ದೇಶ ನನ್ನದಲ್ಲ ಎಂದು ಹೇಳಿಕೆ ನೀಡಿದ್ದರು.
ಹೀಗೆ ವಿವಾದಾತ್ಮಕ ಹೇಳಿಕೆ ನೀಡಿ ದೊಡ್ಡ ಮಟ್ಟದಲ್ಲಿ ವಿರೋಧ ಕಟ್ಟಿಕೊಂಡ ಕಸ್ತೂರಿ ರಂಗನ್ ಹೈದರಾಬಾದ್ನ ಸ್ನೇಹಿತನ ಮನೆಯಲ್ಲಿ ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆಶ್ರಯ ಪಡೆಯುತ್ತಿದ್ದರು, ಈ ಸಮಯದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


