ಬೀದರ್: ಇಲ್ಲಿನ ಭಾಲ್ಕಿ ಡಿಪೊನ ಕೆಎಸ್ಆರ್ಟಿಸಿ ಬಸ್ನ ಕಂಡಕ್ಟರ್ ಓರ್ವರು ಪ್ರಯಾಣಿಕರು ಬಸ್ನಲ್ಲೇ ಬಿಟ್ಟುಹೋಗಿದ್ದ 3 ಲಕ್ಷ ಮೌಲ್ಯದ ಚಿನ್ನಾಭರವಣವನ್ನು ಹಿಂದಿರುಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಭಾಲ್ಕಿ ನಿಲ್ದಾಣದಿಂದ ಮಹಾರಾಷ್ಟ್ರದ ನಿಲಂಗಾಕ್ಕೆ ಪ್ರಯಾಣ ಮಾಡುತ್ತಿದ್ದ ಮಹ್ಮದ್ 3 ಲಕ್ಷ ರೂ ಮೌಲ್ಯದ ಚಿನ್ನಾಭರಣ ಬಸ್ನಲ್ಲೇ ಮರೆತು ಹೋಗಿದ್ದರು. ಚಿನ್ನ ವಾಪಸ್ ಸಿಗುವುದು ಅನುಮಾನವೆಂದೇ ಬಂದು ವಿಚಾರಿಸಿದ ಮಹ್ಮದ್ ಬಸ್ ಕಂಡಕ್ಟರ್ ಪ್ರಕಾಶ್ ಚಿನ್ನಾಭರವನ್ನು ಸುರಕ್ಷಿತವಾಗಿ ಇಟ್ಟಿರುವುದನ್ನು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ.
ಕಂಡಕ್ಟರ್ ಅವರ ಈ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರೆ, ಕಳೆದುಕೊಂಡಿದ್ದ ಚಿನ್ನಾಭರವಣನ್ನು ವಾಪಸ್ ಪಡೆದ ಮಹ್ಮದ್ ಕಂಡಕ್ಟರ್ ಹಾಗೂ ಡ್ರೈವರ್ಗೆ ಹಾರ ಹಾಕಿ ಸನ್ಮಾನಿಸಿ ಕೃತಜ್ಞತೆ ತಿಳಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


