Wednesday, September 2, 2026
spot_img
More
    spot_img
    HomeLatest newsಆತ ಎಸ್‌ಸಿ ಸ್ಟೇಜ್‌ ಮೇಲೆ ಬೇಡ ಕೆಳಗಡೆ ನಿಲ್ಲಲಿ: ದಲಿತನನ್ನು ಅವಮಾನಿಸಿದ ಬಿಜೆಪಿ, ಟಿಡಿಪಿ ಕಾರ್ಯಕರ್ತರು;...

    ಆತ ಎಸ್‌ಸಿ ಸ್ಟೇಜ್‌ ಮೇಲೆ ಬೇಡ ಕೆಳಗಡೆ ನಿಲ್ಲಲಿ: ದಲಿತನನ್ನು ಅವಮಾನಿಸಿದ ಬಿಜೆಪಿ, ಟಿಡಿಪಿ ಕಾರ್ಯಕರ್ತರು; ವಿಡಿಯೊ

    2025ರಲ್ಲೂ ಜಾತೀಯತೆ, ಮೇಲು ಕೀಳು ತಾರತಮ್ಯ ಅಂತೀರಾ? ಹಾಗೇನೂ ಇಲ್ಲ ಈ ಹಿಂದಿನ ಹಾಗೆ ಈಗಿಲ್ಲ ಎಂದು ಹೇಳುವವರೇ ಹೆಚ್ಚು. ಆದರೆ ಅಸಲಿಯತ್ತಿಗೆ ಜಾತೀಯತೆ ಎಂಬುದು ಮದ್ದೇ ಇಲ್ಲದ ಸೋಂಕು.

    Advertisement

    ನಿನ್ನೆಯಷ್ಟೇ ಬಹುಜನ ಮಹಿಳೆಯನ್ನು ಪತಿ ಮಾಡಿದ 80 ಸಾವಿರ ರೂ ಸಾಲ ಮರು ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಮರಕ್ಕೆ ಕಟ್ಟಿಹಾಕಿ ಥಳಿಸಿದ್ದ ಘಟನೆ ಆಂಧ್ರ ಪ್ರದೇಶದ ಕುಪ್ಪಂನಲ್ಲಿ ನಡೆದಿತ್ತು. ಇದೀಗ ಮಾರನೇ ದಿನವೇ ಅದೇ ಆಂಧ್ರ ಪ್ರದೇಶದಲ್ಲಿ ಅಂತಹದ್ದೇ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಜೂನ್‌ 16ರಂದು ನಡೆದಿದೆ.

    ಕಾರ್ಯಕ್ರಮವೊಂದರಲ್ಲಿ ಅದೋನಿ ಕ್ಷೇತ್ರದ ಶಾಸಕ ಪೊದಲ ವೆಂಕಟ ಪಾರ್ಥಸಾರಥಿ ವೇದಿಕೆ ಮೇಲೆ ನಿಂತು ಮಾತನಾಡುತ್ತಿದ್ದರು. ಬಿಜೆಪಿಯ ಶಾಸಕರಾದ ಇವರು ತಮ್ಮ ಮೈತ್ರಿ ಪಕ್ಷ ಟಿಡಿಪಿಯ ಕಾರ್ಯಕರ್ತರ ಜೊತೆ ವೇದಿಕೆ ಹಂಚಿಕೊಂಡಿದ್ದರು. ಇದೇ ಸಮಯದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರನ್ನು ವೇದಿಕೆ ಮೇಲೆ ಕರೆಯಲು ವೆಂಕಟ ಪಾರ್ಥಸಾರಥಿ ಮುಂದಾದರು.

    ಈ ವೇಳೆ ಪಕ್ಕದಲ್ಲೇ ನಿಂತಿದ್ದ ಟಿಡಿಪಿಯ ಮಹಿಳಾ ಕಾರ್ಯಕರ್ತೆಯೊಬ್ಬರು ವೇದಿಕೆ ಬೇಡ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಯಾಕೆ ಆತ ಕ್ರೈಸ್ತ ಧರ್ಮದವನಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಆ ಮಹಿಳೆ ಅಲ್ಲ ಆತ ಎಸ್‌ಸಿ ಎಂದು ಬಾಯಿಗೆ ಕೈ ಅಡ್ಡ ಇಟ್ಟು ಹೇಳಿದ್ದಾಳೆ.

    ಹೀಗೆ ಹೇಳುತ್ತಿದ್ದಂತೆ ದಲಿತ ಅಧ್ಯಕ್ಷನನ್ನು ವೇದಿಕೆ ಬಳಿ ಕರೆಸಿ ಕೆಳಗೇ ನಿಲ್ಲಿಸಿ ಮಾತು ಮುಂದುವರಿಸಿದ್ದಾರೆ. ಸದ್ಯ ಈ ಹೀನಾಯ ವಿಡಿಯೊ ಹೊರಬಿದ್ದಿದ್ದು, ಸಂವಿಧಾನದಂತಹ ಪವಿತ್ರ ರಕ್ಷಣೆಯ ನಡುವೆಯೂ ದಲಿತರ ಬದುಕು ಎಷ್ಟು ಶೋಚನೀಯ ಎಂಬುದು ಬಹಿರಂಗವಾಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading