ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆಯಲ್ಲಿ ಭಾಗವಹಿಸುವ ಗಜಪಡೆಯ ತಾಲೀಮು ಈಗಾಗಲೇ ಆರಂಭವಾಗಿದೆ. ಈ ಆನೆಗಳಿಗೆ ಅರಮನೆಯಲ್ಲಿ ರಾಜಾತಿಥ್ಯ ನೀಡಲಾಗುತ್ತಿದ್ದು, ಪ್ರತಿದಿನ ಎರಡು ಬಾರಿ ವಿಶೇಷ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಅಡುಗೆ ಕೋಣೆಯನ್ನು ಸಹ ನಿರ್ಮಿಸಲಾಗಿದೆ.
ಮೈಸೂರು ದಸರಾದಲ್ಲಿ ಅಂಬಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳಿಗೆ ಈ ಬಾರಿ 56 ದಿನಗಳ ಕಾಲ ವಿಶೇಷ ಮತ್ತು ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ. ಒಟ್ಟು 14 ಆನೆಗಳಿಗೆ 630 ಟನ್ಗೂ ಹೆಚ್ಚು ಆಹಾರವನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದು ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ತಿಳಿಸಿದ್ದಾರೆ.ಗಂಡಾನೆಗಳಿಗೆ ಪ್ರತಿದಿನ 750 ಕೆಜಿ ಮತ್ತು ಹೆಣ್ಣಾನೆಗಳಿಗೆ 450 ಕೆಜಿ ಆಹಾರ ನೀಡಲಾಗುತ್ತದೆ. ಈ ಆಹಾರದಲ್ಲಿ ಹಸಿರು ಹುಲ್ಲು, ಭತ್ತದ ಹುಲ್ಲು, ಕಬ್ಬು ಮತ್ತು ವಿವಿಧ ತರಕಾರಿಗಳು ಸೇರಿವೆ.

ಪ್ರಸ್ತುತ, ಅಭಿಮನ್ಯು ನೇತೃತ್ವದ 9 ಆನೆಗಳು ಅರಮನೆಯಲ್ಲಿ ತಾಲೀಮು ನಡೆಸುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಕಾಡಿನಿಂದ ಇನ್ನೂ 5 ಆನೆಗಳು ಆಗಮಿಸಲಿವೆ. ದಸರಾ ಉತ್ಸವದ ಯಶಸ್ಸಿಗೆ ಈ ಆನೆಗಳ ಆರೈಕೆ ಮತ್ತು ತರಬೇತಿಗೆ ವಿಶೇಷ ಗಮನ ನೀಡಲಾಗುತ್ತಿದೆ.ಪ್ರತಿ ಆನೆಯ ತೂಕಕ್ಕನುಗುಣವಾಗಿ ಆಹಾರದ ಪ್ರಮಾಣ ನಿರ್ಧರಿಸಲಾಗುತ್ತದೆ. ಪ್ರತಿದಿನ ಪ್ರತಿ ಆನೆಗೆ ಸುಮಾರು 450-500 ಕೆ.ಜಿ. ಹಸಿ ಸೊಪ್ಪು, 175-200 ಕೆ.ಜಿ. ಹಸಿ ಹುಲ್ಲು, ಮತ್ತು 20-25 ಕೆ.ಜಿ. ಭತ್ತ ಮತ್ತು ಒಣ ಭತ್ತದ ಹುಲ್ಲು ನೀಡಲಾಗುತ್ತದೆ. ಬೆಳಗ್ಗೆ ಮತ್ತು ಸಂಜೆ ವಿಶೇಷ ಆಹಾರವನ್ನು ಆನೆಗಳ ಸಾಮರ್ಥ್ಯಕ್ಕೆ ತಕ್ಕಂತೆ 10-12 ಕೆ.ಜಿ. ಪ್ರಮಾಣದಲ್ಲಿ ಒದಗಿಸಲಾಗುತ್ತದೆ.
ಆಹಾರದ ತಯಾರಿಕೆಯಲ್ಲಿ ವಿವಿಧ ಕಾಳುಗಳನ್ನು ಆರು ಗಂಟೆಗಳ ಕಾಲ ಬೇಯಿಸಿ, ಅಕ್ಕಿಯೊಂದಿಗೆ ಮಿಶ್ರಣ ಮಾಡಿ ನೀಡಲಾಗುತ್ತದೆ.ಬೆಲ್ಲ, ಕೊಬ್ಬರಿ, ಮತ್ತು ಕಬ್ಬನ್ನು ಸಹ ಆಹಾರದಲ್ಲಿ ಸೇರಿಸಲಾಗಿದೆ.
ವೈದ್ಯರ ಸಲಹೆ ಮೇರೆಗೆ ಈ ಬಾರಿ ಬೆಣ್ಣೆಯ ಬದಲಾಗಿ ರಾಗಿ ಮತ್ತು ಹುರುಳಿಯನ್ನು ಸೇರಿಸಲಾಗಿದ್ದು, ಇದು ಆನೆಗಳ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.ದಿನಕ್ಕೆ 100 ಕೆ.ಜಿ. ತರಕಾರಿಗಳನ್ನು ಸಹ ನೀಡಲಾಗುತ್ತದೆ. ಹಾಪ್ಕಾಮ್ಸ್ನಿಂದ ಖರೀದಿಸುವ ಈ ತರಕಾರಿಗಳಲ್ಲಿ ಗೆಡ್ಡೆಕೋಸ್, ಬೀಟ್ರೂಟ್, ಕ್ಯಾರೆಟ್, ಸೌತೆಕಾಯಿ ಮತ್ತು ಸೀಮೆಬದನೆಕಾಯಿ ಸೇರಿವೆ.
ಇತರ ಧಾನ್ಯಗಳು ಮತ್ತು ಪದಾರ್ಥಗಳು: 225 ಕ್ವಿಂಟಾಲ್ ಭತ್ತ, 75 ಕ್ವಿಂಟಾಲ್ ಅಕ್ಕಿ, 525 ಕೆ.ಜಿ. ಬೆಲ್ಲ, 28 ಕ್ವಿಂಟಾಲ್ ಕುಸುಬಲಕ್ಕಿ, 28 ಕ್ವಿಂಟಾಲ್ ಗೋಧಿ, 28 ಕ್ವಿಂಟಾಲ್ ಹೆಸರುಕಾಳು, 28 ಕ್ವಿಂಟಾಲ್ ಉದ್ದಿನಕಾಳು, 35 ಕ್ವಿಂಟಾಲ್ ಕಡಲೆಕಾಯಿ ಹಿಂಡಿ, 3 ಕ್ವಿಂಟಾಲ್ ಅವಲಕ್ಕಿ, 1 ಟನ್ ಈರುಳ್ಳಿ, 375 ಕೆ.ಜಿ. ಉಪ್ಪು, ಮತ್ತು 3250 ತೆಂಗಿನಕಾಯಿ.ಪ್ರಸ್ತುತ ಅಭಿಮನ್ಯು ನೇತೃತ್ವದ 9 ಆನೆಗಳು ಅರಮನೆಯಲ್ಲಿ ಇವೆ. ಇನ್ನೂ 5 ಆನೆಗಳು ಕಾಡಿನಿಂದ ಶೀಘ್ರದಲ್ಲೇ ಆಗಮಿಸಲಿವೆ.
ಗೂಗಲ್ ಸಿಇಒ ಸುಂದರ್ ಪಿಚೈ ಅವರ ಸಂಬಳ ಎಷ್ಟು ?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


