ವಿಶ್ವ ಚಾಂಪಿಯನ್ಷಿಪ್ ಆಫ್ ಲೆಜೆಂಡ್ಸ್ (WCL) 2025ರಲ್ಲಿ ಭಾರತ ಮತ್ತು ಪಾಕಿಸ್ತಾನ ಚಾಂಪಿಯನ್ಸ್ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಗಿದ್ದು, ಇದು ಕ್ರಿಕೆಟ್ ಮತ್ತು ರಾಜಕೀಯಗಳ ನಡುವಿನ ವಿವಾದವನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಈ ಪಂದ್ಯವನ್ನು ಆಡಲು ಭಾರತೀಯ ತಂಡವು ನಿರಾಕರಿಸಿದ್ದಾರೆ. ಪಾಕಿಸ್ತಾನದ ತಂಡದಲ್ಲಿರುವ ಶಹೀದ್ ಅಫ್ರಿದಿ ಶಿಖರ್ ಧವನ್ ಮತ್ತು ಯುವರಾಜ್ ಸಿಂಗ್ ಸೇರಿದಂತೆ ಹಲವು ಭಾರತೀಯ ಆಟಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಪಹಲ್ಗಾಮ್ನ ಭಯೋತ್ಪಾದನಾ ದಾಳಿಯ ಬಗ್ಗೆ ಅಫ್ರಿದಿ ನೀಡಿದ್ದ ವಿವಾದಾತ್ಮಕ ಹೇಳಿಕೆಗಳು ಭಾರತೀಯ ಆಟಗಾರರ ಮನಸ್ಸನ್ನು ಬಹಳಷ್ಟು ಬಾಧಿಸಿದ್ದವು. ಈ ಸನ್ನಿವೇಶದಲ್ಲಿ ಶಹೀದ್ ಅಫ್ರಿದಿ ಕ್ರಿಕೆಟ್ ಮತ್ತು ರಾಜಕೀಯವನ್ನು ಪ್ರತ್ಯೇಕವಾಗಿರಬೇಕೆಂದು ಕರೆ ನೀಡಿದ್ದಾರೆ, ಆದರೆ ಇದು ವಿವಾದಕ್ಕೆ ಕಾರಣವಾಗಿದೆ. “ಕ್ರೀಡೆ ರಾಷ್ಟ್ರಗಳನ್ನು ಸಮೀಪಗೊಳ್ಳುವಂತೆ ಮಾಡುತ್ತದೆ. ಕ್ರೀಡೆಗೂ ರಾಜಕೀಯ ಬಂದರೆ ಸಂವಹನ ಕಷ್ಟ” ಎಂದು ಅಫ್ರಿದಿ ಹೇಳಿದ್ದಾರೆ.
ಅಲ್ಲದೇ ನಮ್ಮ ಜತೆ ಕ್ರಿಕೆಟ್ ಆಡುವುದಿಲ್ಲ ಎಂಬ ವಿಷಯವನ್ನು ಭಾರತೀಯ ಆಟಗಾರರು ಮುಂಚೆಯೇ ಹೇಳಬೇಕಿತ್ತು, ಪಂದ್ಯದ ದಿನ ಬೆಳಗ್ಗೆ ಹೇಳುವುದು ಎಷ್ಟು ಸರಿ ಎಂದು ಕಿಡಿಕಾರಿದ್ದಾರೆ.
ದಿನದಿಂದ ದಿನಕ್ಕೆ ಇಳಿಕೆಯಾದ ಅಮರನಾಥ ಯಾತ್ರಿಕರ ಸಂಖ್ಯೆ
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


