Saturday, September 19, 2026
spot_img
More
    spot_img
    HomeLatest newsಸಂಜೆಯ ತಿಂಡಿಗೆ ಹೆಲ್ತಿ ಆಯ್ಕೆ ಬೆಂಡೆಕಾಯಿ ಪಾಪ್‌ಕಾರ್ನ್ ಸ್ನಾಕ್ಸ್ ರೆಸಿಪಿ ಇಲ್ಲಿದೆ

    ಸಂಜೆಯ ತಿಂಡಿಗೆ ಹೆಲ್ತಿ ಆಯ್ಕೆ ಬೆಂಡೆಕಾಯಿ ಪಾಪ್‌ಕಾರ್ನ್ ಸ್ನಾಕ್ಸ್ ರೆಸಿಪಿ ಇಲ್ಲಿದೆ

    ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್ ಮತ್ತು ಪಾಸ್ಟ್ ಪುಢ್ ಸೇವನೆಯಿಂದ ಹೊಟ್ಟೆ ಹಾಳಾಗುತ್ತಿರುವುದು ಸಾಮಾನ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮನೆಯಲ್ಲೇ ಆರೋಗ್ಯಕರ ಮತ್ತು ಬಾಯಿ ಚಪ್ಪರಿಸುವಂತಹ ವಿಶೇಷ ಬೆಂಡೆಕಾಯಿ ಪಾಪ್‌ಕಾರ್ನ್ ತಯಾರಿಸಿ ಸವಿಯಿರಿ. ಬೆಂಡೆಕಾಯಿ ಆರೋಗ್ಯಕ್ಕೆ ಬಹುಮುಖ್ಯವಾದ ತರಕಾರಿ ಇದು ದೇಹದಲ್ಲಿರುವ ಕೆಟ್ಟ ಕೊಬ್ಬಿನಾಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಂಡೆಕಾಯಿಯಲ್ಲಿ ಇರುವ ಪೆಕ್ಟಿನ್ ಎಂಬ ಫೈಬರ್ ಅಂಶವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಅನೇಕರಿಗೆ ಸಂಜೆ ಸ್ನಾಕ್ಸ್ ತಿನ್ನುವುದು ಒಂದು ಅಭ್ಯಾಸವಾಗಿದ್ದು, ಇಂತಹ ಸಮಯದಲ್ಲಿ ಆರೋಗ್ಯಕರ ಮತ್ತು ರುಚಿಕರವಾದ ಉಪಹಾರಗಳು ಬೇಕಾಗುತ್ತವೆ. ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಿ, ಜನರು ಯೂಟ್ಯೂಬ್ ಮತ್ತು ಇತರ ವೇದಿಕೆಗಳಿಂದ ಹೊಸ ಪಾಕವಿಧಾನಗಳನ್ನು ಕಲಿತು, ಮನೆಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ, ಇಂದು ನಾವು ಈ ಪೋಷಕಾಂಶಯುತ ಹಾಗೂ ರುಚಿಕರವಾದ,ಆರೋಗ್ಯಕರ ಚಾಟ್ ಶೈಲಿಯ ಬೆಂಡೆಕಾಯಿ ಪಾಪ್‌ಕಾರ್ನ್‌ನ್ನು ಹೇಗೆ ತಯಾರಿಸಬಹುದು ಎಂಬುದನ್ನು ವಿವರಿಸುತ್ತೇವೆ. ಮನೆಯಲ್ಲೇ ಮಾಡಿ, ಸಂಜೆ ಸ್ನಾಕ್ಸ್ ಆಗಿ ಸವಿಯಿರಿ!

    Advertisement

    ಬೇಕಾಗುವ ಪದಾರ್ಥಗಳು.

    ಬೆಂಡೆಕಾಯಿ- 15-20

    ಅರಿಶಿಣದ ಪುಡಿ- ಅರ್ಧ ಚಮಚ

    ಅಚ್ಚ ಖಾರದಪುಡಿ- 2 ಚಮಚ

    ಆಮ್ಚೂರ್ ಪುಡಿ- 1 ಚಮಚ

    ಗರಂ ಮಸಾಲೆ ಪುಡಿ- ಅರ್ಧ ಚಮಚ

    ಉಪ್ಪು- ರುಚಿಗೆ ತಕ್ಕಷ್ಟು

    ಕಾರ್ನ್ ಫ್ಲೋರ್- 1 ಚಮಚ

    ಮೈದಾ ಹಿಟ್ಟು- 1 ಬಟ್ಟಲು

    ಬ್ರೆಡ್ ಕ್ರಂಬ್ಸ್- 1-2 ಬಟ್ಟಲು

    ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು

    ಬೆಂಡೆಕಾಯಿ ಪಾಪ್‌ಕಾರ್ನ್ ತಯಾರಿಸುವ ವಿಧಾನ:

    ಮೊದಲು ಬೆಂಡೆಕಾಯಿಗಳನ್ನು ಸುಮಾರು 1 ಇಂಚು ಉದ್ದಕ್ಕೆ ಕತ್ತರಿಸಿ. ನಂತರ ಅದು ಹಿಗೆಯಾಗದಂತೆ ಚೆನ್ನಾಗಿ ಒರೆಸಿಕೊಂಡು ಒಣಗಿಸಿಕೊಳ್ಳಿ.

    ಈ ಬೆಂಡೆಕಾಯಿಗೆ ಅರಿಶಿನ, 1 ಚಮಚ ಮೆಣಸಿನ ಪುಡಿ, ಸ್ವಲ್ಪ ಗರಂ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು ಮತ್ತು 2 ಚಮಚ ಕಾರ್ನ್ ಫ್ಲೋರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 15 ನಿಮಿಷ ಮಸಾಲೆ ಸೇರಿಕೊಳ್ಳುವಂತೆ ಬದಿಗಿಟ್ಟು ಬಿಡಿ.

    ಇನ್ನೊಂದು ಪಾತ್ರೆಯಲ್ಲಿ 1 ಕಪ್ ಮೈದಾ, ¾ ಕಪ್ ಕಾರ್ನ್ ಫ್ಲೋರ್, 1 ಚಮಚ ಖಾರದ ಪುಡಿ, ಉಪ್ಪು ಹಾಗೂ ನೀರು ಸೇರಿಸಿ ಉಂಡೆಗಳಿಲ್ಲದ ಮೃದುವಾದ ಹಿಟ್ಟನ್ನು ತಯಾರಿಸಿ.

    ಈಗ ಮಸಾಲೆ ಮಿಶ್ರಿತ ಬೆಂಡೆಕಾಯಿಗಳನ್ನು ತಯಾರಿಸಿದ ಹಿಟ್ಟಿನಲ್ಲಿ ಅದ್ದಿ ತೆಗೆದು, ಬ್ರೆಡ್ ಕ್ರಂಪ್ಸ್‌ನಲ್ಲಿ ಚೆನ್ನಾಗಿ ರೋಲ್ ಮಾಡಿ.ಈಗ ಈ ಬೆಂಡೆಕಾಯಿಗಳನ್ನು ಬಿಸಿಯ ಎಣ್ಣೆಯಲ್ಲಿ ಹಾಕಿ, ಚಿನ್ನದ ಬಣ್ಣ ಬರುತ್ತಿರುವವರೆಗೆ ಕರಿಯಿರಿ.

    ಕ್ರಿಸ್ಪಿಯಾಗಿ ಕರಿದು ಬಂದ ಮೇಲೆ, ಟಿಶ್ಯೂ ಪೇಪರ್‌ನಲ್ಲಿ ಎಣ್ಣೆ ಹಾಕಿ. ಬಿಸಿ ಬಿಸಿ, ಬಾಯಿಯಲ್ಲಿ ಕರಗುವ ಸ್ಪೆಷಲ್ ಬೆಂಡೆಕಾಯಿ ಪಾಪ್‌ಕಾರ್ನ್ ಸವಿಯಲು ಸಿದ್ಧ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading