Tuesday, September 1, 2026
spot_img
More
    spot_img
    HomeLatest newsನವರಾತ್ರಿ ಎರಡನೇ ದಿನ: ಬ್ರಹ್ಮಚಾರಿಣಿ ಪೂಜೆ ಶುಭ ಮುಹೂರ್ತ, ಪೂಜಾ ವಿಧಿ ಮತ್ತು ಮಂತ್ರಗಳು

    ನವರಾತ್ರಿ ಎರಡನೇ ದಿನ: ಬ್ರಹ್ಮಚಾರಿಣಿ ಪೂಜೆ ಶುಭ ಮುಹೂರ್ತ, ಪೂಜಾ ವಿಧಿ ಮತ್ತು ಮಂತ್ರಗಳು

    ನವರಾತ್ರಿ ಹಬ್ಬದ ಎರಡನೇ ದಿನದಂದು ದುರ್ಗಾ ದೇವಿಯ ಎರಡನೇ ಅವತಾರವಾದ ಬ್ರಹ್ಮಚಾರಿಣಿ ರೂಪವನ್ನು ಪೂಜಿಸಲಾಗುತ್ತದೆ. ‘ಬ್ರಹ್ಮ’ ಎಂದರೆ ‘ತಪಸ್ಸು’ ಮತ್ತು ‘ಚಾರಿಣಿ’ ಎಂದರೆ ‘ನಡೆಸುವವಳು’ ಎಂಬ ಅರ್ಥವಿದೆ ತಾಯಿ ಬ್ರಹ್ಮಚಾರಿಣಿಯನ್ನು ತಪಸ್ಸಿನ ದೇವತೆ ಎಂದೇ ಪರಿಗಣಿಸಲಾಗಿದೆ. ಈಕೆಯು ಭಕ್ತರಿಗೆ ತಪಸ್ಸು, ತ್ಯಾಗ, ಸಂಯಮ ಮತ್ತು ಪುಣ್ಯವನ್ನು ಕರುಣಿಸುತ್ತಾಳೆ.

    Advertisement

    ಶಾರದೀಯ ನವರಾತ್ರಿ ಹಬ್ಬವು ಪ್ರಾರಂಭವಾಗಿದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ದುರ್ಗಾ ದೇವಿಯ 9 ಅವತಾರಗಳನ್ನು ಪೂಜಿಸಲಾಗುತ್ತದೆ. ಅದರಂತೆ, ನವರಾತ್ರಿಯ ಎರಡನೇ ದಿನದಂದು ದುರ್ಗಾ ದೇವಿಯ ಎರಡನೇ ಅವತಾರವಾದ ಬ್ರಹ್ಮಚಾರಿಣಿ ರೂಪವನ್ನು ಪೂಜಿಸಲಾಗುತ್ತದೆ.

    ಆಶ್ವಯುಜ ಮಾಸದ ಶುಕ್ಲ ಪಕ್ಷದ ದ್ವಿತೀಯ ತಿಥಿಯಂದು ಬ್ರಹ್ಮಚಾರಿಣಿ ದೇವಿಯನ್ನು ವಿಶೇಷವಾಗಿ ಆರಾಧಿಸಲಾಗುತ್ತದೆ. ಈಕೆಯ ಆರಾಧನೆಯಿಂದ ಭಕ್ತರಿಗೆ ಜ್ಞಾನ, ವೈರಾಗ್ಯ, ಮತ್ತು ತಪಸ್ಸಿನ ಶಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ.

    ಬ್ರಹ್ಮಚಾರಿಣಿ ದೇವಿಯ ಹಿನ್ನೆಲೆ

    ಪಾರ್ವತಿಯಾಗಿ ಹಿಮಾಲಯನ ಮಗಳಾಗಿ ಜನಿಸಿದ ದೇವಿಯು ಶಿವನನ್ನು ತನ್ನ ಪತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡಿದಳು. ಈ ತಪಸ್ಸಿನ ಸಮಯದಲ್ಲಿ ಆಕೆ ಕೇವಲ ಹೂವುಗಳು, ಹಣ್ಣುಗಳು ಮತ್ತು ಎಲೆಗಳನ್ನು ಮಾತ್ರ ಸೇವಿಸಿ ನಂತರ ಅದನ್ನೂ ತ್ಯಜಿಸಿದಳು.

    ಕೇವಲ ಗಾಳಿಯನ್ನು ಸೇವಿಸಿ ಬದುಕಿದ ಕಾರಣಕ್ಕೆ ಈಕೆಯನ್ನು ಅಪರ್ಣಾ ಎಂದೂ ಕರೆಯುತ್ತಾರೆ. ತಪಸ್ಸಿಗೆ ಮೆಚ್ಚಿದ ಶಿವನು ಪಾರ್ವತಿಯ ನಿಷ್ಠೆಯನ್ನು ಪರೀಕ್ಷಿಸಿ, ನಂತರ ಆಕೆಯನ್ನು ಒಪ್ಪಿಕೊಂಡು ಮದುವೆಯಾದನು. ಬ್ರಹ್ಮಚಾರಿಣಿ ದೇವಿಯು ಕುಶ್ಮಾಂಡ ಅವತಾರವನ್ನು ಪಡೆದ ಬಳಿಕ ದಕ್ಷ ಪ್ರಜಾಪತಿಯ ಮನೆಯಲ್ಲಿ ಪಾರ್ವತಿಯಾಗಿ ಜನಿಸಿದಳು ಎಂದು ಹೇಳಲಾಗುತ್ತದೆ.

    ಬ್ರಹ್ಮಚಾರಿಣಿ ಪೂಜೆ 2025 – ಶುಭ ಮುಹೂರ್ತಗಳು

    ಪೂಜೆ ದಿನಾಂಕ: ಸೆಪ್ಟೆಂಬರ್‌ 23, 2025, ಮಂಗಳವಾರ

    ಬ್ರಹ್ಮ ಮುಹೂರ್ತ: ಬೆಳಿಗ್ಗೆ 4:35 ರಿಂದ ಬೆಳಿಗ್ಗೆ 5:22 ರವರೆಗೆ

    ಅಭಿಜಿತ್ ಮುಹೂರ್ತ: ಬೆಳಿಗ್ಗೆ 11:49 ರಿಂದ ಮಧ್ಯಾಹ್ನ 12:37 ರವರೆಗೆ

    ವಿಜಯ ಮುಹೂರ್ತ: ಮಧ್ಯಾಹ್ನ 2:14 ರಿಂದ ಮಧ್ಯಾಹ್ನ 3:03 ರವರೆಗೆ

    ಗೋಧೂಳಿ ಮುಹೂರ್ತ: ಸಂಜೆ 6:16 ರಿಂದ ಸಂಜೆ 6:40 ರವರೆಗೆ

    ಅಮೃತ ಕಾಲ: ಬೆಳಿಗ್ಗೆ 7:06 ರಿಂದ ಬೆಳಿಗ್ಗೆ 8:51 ರವರೆಗೆ

    ಈ ಶುಭ ಸಮಯಗಳಲ್ಲಿ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿ ಆಕೆಯ ಆಶೀರ್ವಾದ ಪಡೆಯಬಹುದು.

    ಬ್ರಹ್ಮಚಾರಿಣಿ ಪೂಜಾ ವಿಧಿ ಮತ್ತು ಮಹತ್ವ

    ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವುದರಿಂದ ಭಕ್ತರ ಮಾನಸಿಕ ಕ್ಷೋಭೆ ನಿವಾರಣೆಯಾಗಿ ದುಃಖಗಳು ದೂರವಾಗುತ್ತವೆ. ಈಕೆ ಮಂಗಳ ಗ್ರಹದ ಅಧಿಪತಿಯಾಗಿದ್ದಾಳೆ, ಆದ್ದರಿಂದ ಜಾತಕದಲ್ಲಿ ಮಂಗಳ ದೋಷ ಇರುವವರು ಅಥವಾ ಮಂಗಳ ಗ್ರಹದ ಸ್ಥಾನ ಕೆಟ್ಟದ್ದಾಗಿದ್ದರೆ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವುದು ಉತ್ತಮ ಎಂದು ಹೇಳಲಾಗುತ್ತದೆ.

    ಪೂಜಾ ವಿಧಿ:

    ನವರಾತ್ರಿಯ ಎರಡನೇ ದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಬೇಕು.

    ತಾಯಿಗೆ ಪಂಚಾಮೃತ ಅಭಿಷೇಕ ಮಾಡಿ, ನಂತರ ಅಕ್ಷತೆ, ಚಂದನ ಮತ್ತು ಕುಂಕುಮವನ್ನು ಅರ್ಪಿಸಬೇಕು.

    ಬ್ರಹ್ಮಚಾರಿಣಿ ದೇವಿಗೆ ಕಮಲ ಮತ್ತು ದಾಸವಾಳದ ಹೂವುಗಳನ್ನು ಅರ್ಪಿಸುವುದು ವಿಶೇಷ.

    ಕಲಶ ಮತ್ತು ದೇವತೆಯನ್ನು ವಿಧಿ-ವಿಧಾನಗಳ ಪ್ರಕಾರ ಪೂಜಿಸಿದ ನಂತರ, ತುಪ್ಪ ಮತ್ತು ಕರ್ಪೂರದಿಂದ ಆರತಿಯನ್ನು ಮಾಡಬೇಕು.

    ಬ್ರಹ್ಮಚಾರಿಣಿಯನ್ನು ಪೂಜಿಸುವುದರಿಂದ ಎಲ್ಲಾ ರೀತಿಯ ಅದೃಷ್ಟಗಳು ಪ್ರಾಪ್ತಿಯಾಗಿ, ಭಕ್ತರ ಜೀವನದಲ್ಲಿ ನೆಮ್ಮದಿ ಮೂಡುತ್ತದೆ.

    ​ಬ್ರಹ್ಮಚಾರಿಣಿ ದೇವಿಯ ಶಕ್ತಿಯುತ ಮಂತ್ರ​

    ಯಾ ದೇವಿ ಸರ್ವ ಭೂತೇಷು ಬ್ರಹ್ಮಚಾರಿಣಿ ರೂಪೇಣ ಸಂಸ್ಥಿತ

    ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

    ಓಂ ದೇವಿ ಬ್ರಹ್ಮಚಾರಿಣ್ಯೈ ನಮಃ

    ದಧನಾಕರ ಪದ್ಮಭಯಂ ಅಕ್ಷಮಾಲಾ ಕಮಂಡಲಂ,

    ದೇವೀ ಪ್ರಸಾದಿತು ಮಯಿ ಬ್ರಹ್ಮಚಾರಿಣಿಯನುತ್ತಮ.

    ಶೈಲಪುತ್ರಿ ಪೂಜೆ 2025: ನವರಾತ್ರಿಯ ಮೊದಲ ದಿನದ ವಿಧಿ, ಮಹತ್ವ ಮತ್ತು ಸಂಪೂರ್ಣ ಮಾಹಿತಿ




    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading