Thursday, March 26, 2026
spot_img
More
    spot_img
    HomeLatest newsಇಂದಿರಾನಗರ ಫುಟ್‌ಪಾತ್ ಅಂದ್ರೆ ಸಾವಿನ ಬಲೆ! ವಿಡಿಯೊ ಶೇರ್ ಮಾಡಿದ ಕೆನಡಾ ವ್ಯಕ್ತಿ ಹೇಳಿದ್ದೇನು?

    ಇಂದಿರಾನಗರ ಫುಟ್‌ಪಾತ್ ಅಂದ್ರೆ ಸಾವಿನ ಬಲೆ! ವಿಡಿಯೊ ಶೇರ್ ಮಾಡಿದ ಕೆನಡಾ ವ್ಯಕ್ತಿ ಹೇಳಿದ್ದೇನು?

    ಬೆಂಗಳೂರು: ಉದ್ಯೋಗದ ಹಬ್, ಶಿಕ್ಷಣದ ಕಾಶಿ, ಹಚ್ಚ ಹಸಿರಿನ ಉದ್ಯಾನ ನಗರಿ.. ಹೀಗೆ ವಿದೇಶಿಯರನ್ನೂ ಸೆಳೆಯುವ ಬೆಂಗಳೂರಿನ ‘ಅಸಲಿ ಮುಖ’ ಈಗ ಜಗತ್ತಿನ ಮುಂದೆ ಅನಾವರಣಗೊಂಡಿದೆ. ನಗರದ ಅತ್ಯಂತ ದುಬಾರಿ ಮತ್ತು ಪ್ರತಿಷ್ಠಿತ ಬಡಾವಣೆ ಎನಿಸಿಕೊಂಡಿರುವ ಇಂದಿರಾನಗರದ ಪಾದಚಾರಿ ಮಾರ್ಗಗಳ (Footpath) ದುಸ್ಥಿತಿಯನ್ನು ಕೆನಡಾ ಮೂಲದ ವ್ಯಕ್ತಿಯೊಬ್ಬರು ವಿಡಿಯೋ ಮೂಲಕ ಬಿಚ್ಚಿಟ್ಟಿದ್ದು, ಸದ್ಯ ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಬೆಂಕಿಯಂತೆ ಹಬ್ಬಿದೆ.

    ಕೆನಡಾ ಮೂಲದ ಕೇಲೆಬ್ ಫ್ರೈಸೆನ್ (Caleb Friesen) ಎಂಬುವವರು ತಮ್ಮ ಪುಟ್ಟ ಮಗನೊಂದಿಗೆ ಇಂದಿರಾನಗರದ ಡಬಲ್ ರೋಡ್‌ನಲ್ಲಿ ಸಾಗುವಾಗ ಎದುರಿಸಿದ ಸಂಕಷ್ಟಗಳನ್ನು ವಿಡಿಯೋ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕಂಡುಬರುವ ದೃಶ್ಯಗಳು ಬೆಂಗಳೂರಿನ ಮೂಲಸೌಕರ್ಯಗಳ ದೈನೇಸಿ ಸ್ಥಿತಿಯನ್ನು ಅಣಕಿಸುವಂತಿವೆ.ಹೆಜ್ಜೆ ಇಟ್ಟರೆ ಎಲ್ಲಿ ಕಾಲು ಮುರಿಯುತ್ತದೋ ಎಂಬಂತೆ ಕಿತ್ತುಹೋಗಿರುವ ಚಪ್ಪಡಿಗಳು.ಪಾದಚಾರಿ ಮಾರ್ಗವನ್ನೇ ಆಕ್ರಮಿಸಿಕೊಂಡಿರುವ ಗಿಡದ ಕುಂಡಗಳು, ಮರಗಳು ಮತ್ತು ಸಾಲಾಗಿ ನಿಲ್ಲಿಸಿರುವ ವಾಹನಗಳು.ಫುಟ್‌ಪಾತ್ ಮೇಲೆ ನಡೆಯಲು ಜಾಗವಿಲ್ಲದೆ, ಮಗುವಿನ ಕೈ ಹಿಡಿದು ಜೀವ ಕೈಯಲ್ಲಿ ಹಿಡಿದು ಮುಖ್ಯ ರಸ್ತೆಯಲ್ಲೇ ಸಂಚರಿಸಬೇಕಾದ ಅನಿವಾರ್ಯತೆ.

    ತಮ್ಮ ಪೋಸ್ಟ್‌ನಲ್ಲಿ ಕೇಲೆಬ್ ಹೀಗೆ ಬರೆದುಕೊಂಡಿದ್ದಾರೆ: ಇಂದಿರಾನಗರದಂತಹ ಅತ್ಯಂತ ದುಬಾರಿ ಬಡಾವಣೆಯ ಪಾದಚಾರಿಗಳ ಸ್ಥಿತಿ ಹೀಗಿದೆ. ಇಲ್ಲಿ ನಡೆಯುವುದು ಅಸಾಧ್ಯವಾಗಿದೆ. ನಮ್ಮ ಮಕ್ಕಳಿಗೆ ಇಂದಿಗಿಂತ ಉತ್ತಮವಾದ ವ್ಯವಸ್ಥೆ ಸಿಗಬೇಕು ಎಂದು ನಾನು ಆಶಿಸುತ್ತೇನೆ. ಇದೇ ವೇಳೆ ಅವರು ಒಂದು ಸಕಾರಾತ್ಮಕ ಅಂಶವನ್ನೂ ಹೇಳಿದ್ದಾರೆ. ಇತರ ಭಾರತೀಯ ನಗರಗಳಿಗೆ ಹೋಲಿಸಿದರೆ ಅಟ್ಲೀಸ್ಟ್ ಇಂದಿರಾನಗರದಲ್ಲಿ ಪಾದಚಾರಿ ಮಾರ್ಗಗಳಾದರೂ ಇವೆ, ಇದು ಸಮಾಧಾನಕರ ವಿಷಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬೆಂಗಳೂರಿನ ನಿವಾಸಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ:

    ನಾನು ಪ್ರತಿದಿನ ಇಲ್ಲಿ ನಡೆಯುತ್ತೇನೆ, ಆದರೆ ಇಲ್ಲಿನ ಅವ್ಯವಸ್ಥೆಗೆ ಎಷ್ಟು ಹೊಂದಿಕೊಂಡಿದ್ದೇನೆ ಎಂದರೆ ಈಗ ಇದೇ ಸರಿ ಎನಿಸುತ್ತಿದೆ. ನನ್ನ ಕಣ್ಣು ತೆರೆಸಿದ್ದಕ್ಕೆ ಧನ್ಯವಾದಗಳು ಎಂದು ಓರ್ವರು ಪ್ರತಿಕ್ರಿಯಿಸಿದ್ದಾರೆ.
    ಟೆಕ್ ಸಿಟಿ ಬೆಂಗಳೂರಿನ ಅಸಲಿ ಮುಖ ಇದು. ನಾವು ಕಟ್ಟುವ ತೆರಿಗೆ ಹಣ ಎಲ್ಲಿ ಹೋಗುತ್ತಿದೆ ಎಂಬುದು ತಿಳಿಯುತ್ತಿಲ್ಲ” ಎಂದು ಇನ್ನೊಬ್ಬರು ಆಕ್ರೋಶ ಹೊರಹಾಕಿದ್ದಾರೆ.

    ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್;4 ಜಿಲ್ಲೆಗಳಲ್ಲಿ ಭ್ರಷ್ಟರ ಮನೆ ಬಾಗಿಲು ತಟ್ಟಿದ ಅಧಿಕಾರಿಗಳು


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್ರಾ! ಮನವಮಿ ಹಬ್ಬಕ್ಕೆ ಮಾರುಕಟ್ಟೆ ಬಂದ್ ಆಗುತ್ತಾ? ಹೂಡಿಕೆದಾರರಿಗೆ ಕ್ಲಿಯರ್ ಮಾಹಿತಿ!

    “ಸ್ಟಾಕ್ ಮಾರ್ಕೆಟ್ ಹಾಲಿಡೇ 2026” ಇದೀಗ ಹೂಡಿಕೆದಾರರಲ್ಲಿ ದೊಡ್ಡ ಗೊಂದಲ ಮೂಡಿಸಿದೆ. ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಅಥವಾ ಶುಕ್ರವಾರ ಷೇರು ಮಾರುಕಟ್ಟೆ ಬಂದ್ ಆಗುತ್ತದೆಯಾ? ಎಂಬ ಪ್ರಶ್ನೆ ಟ್ರೇಡರ್‌ಗಳ ನಡುವೆ ಭಾರೀ...

    ಬ್ರೇಕಿಂಗ್! ಮಾರುಕಟ್ಟೆ ರಾಕೆಟ್—ಸೆನ್ಸೆಕ್ಸ್ 1300 ಪಾಯಿಂಟ್ ಜಿಗಿತ! ರೂಪಾಯಿ ಕುಸಿತ, ಚಿನ್ನ ಏರಿಕೆ… ಏನಿದು ಮಿಶ್ರ ಸಿಗ್ನಲ್?

    “ಸ್ಟಾಕ್ ಮಾರ್ಕೆಟ್ 24 ಮಾರ್ಚ್ 2026” ಹೂಡಿಕೆದಾರರಿಗೆ ಒಂದೇ ದಿನದಲ್ಲಿ ರೋಲರ್ ಕೋಸ್ಟರ್ ಅನುಭವ ನೀಡಿದೆ! ಒಂದೆಡೆ ಷೇರು ಮಾರುಕಟ್ಟೆ ಭರ್ಜರಿ ಏರಿಕೆ ಕಂಡಿದ್ದರೆ, ಇನ್ನೊಂದೆಡೆ ರೂಪಾಯಿ ಕುಸಿತ ಮತ್ತು ಚಿನ್ನದ ಬೆಲೆ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading