Monday, August 10, 2026
spot_img
More
    spot_img
    HomeChampions Trophy 2025ಸೋಲುತ್ತೇವೆಂದು ಗೊತ್ತಿದ್ದರೂ ಇದೆಲ್ಲಾ ಬೇಕಿತ್ತಾ?; ವಿಚಿತ್ರ ಸೆಲೆಬ್ರೇಷನ್ ಮಾಡಿದ್ದ ಅಬ್ರಾರ್‌ ವಿರುದ್ಧ ವಾಸಿಮ್ ಅಕ್ರಂ ಕಿಡಿ

    ಸೋಲುತ್ತೇವೆಂದು ಗೊತ್ತಿದ್ದರೂ ಇದೆಲ್ಲಾ ಬೇಕಿತ್ತಾ?; ವಿಚಿತ್ರ ಸೆಲೆಬ್ರೇಷನ್ ಮಾಡಿದ್ದ ಅಬ್ರಾರ್‌ ವಿರುದ್ಧ ವಾಸಿಮ್ ಅಕ್ರಂ ಕಿಡಿ

    ಮೊನ್ನೆ ನಡೆದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತ 6 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ.

    Advertisement

    ಇನ್ನು ಈ ಪಂದ್ಯದಲ್ಲಿ ಸೋತ ಪಾಕಿಸ್ತಾನ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ಅವಕಾಶವನ್ನು ಕೈತಪ್ಪಿಸಿಕೊಂಡಿದೆ. ಟೂರ್ನಿಯ ಆತಿಥ್ಯ ವಹಿಸಿಕೊಂಡಿರುವ ಪಾಕಿಸ್ತಾನವೇ ಟೂರ್ನಿಯಿಂದ ಲೀಗ್ ಹಂತದಲ್ಲಿಯೇ ಹೊರಬಿದ್ದಿದೆ.

    ಹೌದು, ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಪಾಕಿಸ್ತಾನ ಮೊನ್ನೆ ಭಾರತದ ವಿರುದ್ಧವೂ ಸೋತ ಕಾರಣ ಟೂರ್ನಿಯಿಂದ ಹೊರಬಿದ್ದಿದೆ.

    ಇನ್ನು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕ್ ಆಟಗಾರರು ತೋರಿದ ಪ್ರದರ್ಶನದ ಕುರಿತು ಪಾಕ್ ಕ್ರಿಕೆಟ್ ಪ್ರೇಮಿಗಳು ಹಾಗೂ ಮಾಜಿ ಕ್ರಿಕೆಟಿಗರು ಬೇಸರ ಹೊರಹಾಕುತ್ತಿದ್ದಾರೆ.

    ಪಾಕ್ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಸಹ ಪಾಕ್ ಸೋಲಿನ ಕುರಿತು ಮಾತನಾಡಿದ್ದು, ಪಂದ್ಯದಲ್ಲಿ ಅನಗತ್ಯ ಸೆಲೆಬ್ರೇಷನ್ ಮಾಡಿದ ಅಬ್ರಾರ್ ವಿರುದ್ಧ ಕಿಡಿಕಾರಿದ್ದಾರೆ. ಹೌದು, ಪಂದ್ಯದ ವೇಳೆ ಗಿಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಅಬ್ರಾರ್ ಸ್ಥಳದಲ್ಲಿಯೇ ಕೈಕಟ್ಟಿ ಗಿಲ್‌ ಕಡೆ ವಿಚಿತ್ರ ಲುಕ್ ಕೊಟ್ಟಿದ್ದರು. ಪಾಕ್ ಪಂದ್ಯದ ಮೇಲೆ ಹಿಡಿತ ಕಳೆದುಕೊಂಡಿದ್ದ ಸಂದರ್ಭದಲ್ಲಿಯೂ ಈ ರೀತಿಯ ಸೆಲೆಬ್ರೇಷನ್ ಮಾಡಿದ ಅಬ್ರಾರ್ ಪಂದ್ಯ ಸೋತ ಬಳಿಕ ಹೀನಾಯವಾಗಿ ಟ್ರೋಲ್ ಆದರು.

    ಈ ಕುರಿತು ವಾಸಿಂ ಅಕ್ರಂ “ನನಗೆ ಆ ಎಸೆತ ಇಷ್ಟವಾಯಿತು, ಆದರೆ ಆ ಸೆಲೆಬ್ರೇಷನ್ ಇಷ್ಟವಾಗಲಿಲ್ಲ. ಅದಕ್ಕೆಂದೇ ಸಮಯ ಹಾಗೂ ಸ್ಥಳವಿರುತ್ತದೆ. ನೀವು ಗೆಲ್ಲುತ್ತಿದ್ದರೆ ಸಂಭ್ರಮಿಸಿ. ನಿನ್ನ ತಂಡ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ ಎಂದು ನಿನಗೆ ಗೊತ್ತು. ಆ ಸಂದರ್ಭದಲ್ಲಿ ವಿಕೆಟ್ ಪಡೆದುಕೊಂಡರೆ ಸೌಮ್ಯವಾಗಿರಬೇಕು. ಆದರೆ ಅದು ಆಗಲಿಲ್ಲ. ಅದನ್ನು ಅವನಿಗೆ ಹೇಳುವವರು ಯಾರೂ ಇಲ್ಲ” ಎಂದು ಕಿಡಿಕಾರಿದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading