ಇಂದು ( ನವೆಂಬರ್ 25 ) ಬೆಂಗಳೂರು ನಗರದಲ್ಲಿ ಮಾಂಸ ಮಾರಾಟ ನಿಷೇಧ ಮಾಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆದೇಶ ಹೊರಡಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಸಾಯಿಖಾನೆ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಿ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.
ಇಂದು ವಾಸವಾನಿ ಜಯಂತಿ ಇರುವ ಕಾರಣ ಅದರ ಆಚರಣೆಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾರತ ಕಂಡ ಶ್ರೇಷ್ಠ ಆಧ್ಯಾತ್ಮಿಕ ಗುರು ಹಾಗೂ ಕವಿಯೂ ಆಗಿದ್ದ ಸಾಧು ಥಾನ್ವರದಾಸ್ ಲೀಲಾರಾಮ್ ವಾಸವಾನಿ ಅವರು ತಮ್ಮ ಜೀವನವನ್ನು ಶಿಕ್ಷಣ, ಸಮಾಜ ಸೇವೆ ಹಾಗೂ ಮೂಕ ಪ್ರಾಣಿಗಳ ರಕ್ಷಣೆಗಾಗಿ ಮೀಸಲಿಟ್ಟಿದ್ದರು.
ಈ ಕಾರಣಕ್ಕಾಗಿ ಅವರ ಜನ್ಮದಿನದಂದು ಅವರ ಅನುಯಾಯಿಗಳು ಮಾಂಸಹಾರ ತ್ಯಜಿಸುವ ಮೂಲಕ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಾರೆ. ಇವರು 1879ರ ನವೆಂಬರ್ 25ರಂದು ಹೈದರಾಬಾದ್ ಪ್ರಾಂತ್ಯದಲ್ಲಿ ಜನಿಸಿದ್ದರು.
ಕೇವಲ ಬೆಂಗಳೂರು ಮಾತ್ರವಲ್ಲದೇ ಮೈಸೂರು ಮಹಾನಗರ ಪಾಲಿಕೆಗೆ ಸೇರಿದ ಕಸಾಯಿಖಾನೆಗಳು ಹಾಗೂ ಇತರೆ ಮಾಂಸದ ಅಂಗಡಿಗಳನ್ನು ಸಹ ಈ ದಿನದಂದು ಮುಚ್ಚಲಾಗುತ್ತಿದ್ದು, ಮೈಸೂರಿನಲ್ಲೂ ಇದೇ ನಿಯಮ ಅನುಸರಿಸಲಾಗುತ್ತಿದೆ.
ಕೊಡಗು: ಫುಟ್ಬಾಲ್ ಪಂದ್ಯದ ವೇಳೆ ಚೇರ್ನಲ್ಲಿ ಹೊಡೆದಾಡಿಕೊಂಡ ಅಭಿಮಾನಿಗಳು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


