ಗುವಾಹಟಿ: ನಿನ್ನೆ ( ಮಾರ್ಚ್ 30 ) ಇಲ್ಲಿನ ಬರ್ಸಾಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 18ನೇ ಆವೃತ್ತಿಯ ಐಪಿಎಲ್ನ 11ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 6 ರನ್ಗಳ ಗೆಲುವನ್ನು ಕಂಡಿದೆ.
ಈ ಮೂಲಕ ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ ಖಾತೆ ತೆರೆದಿದ್ದು, ಟೂರ್ನಿಯಲ್ಲಿ ಶುಭಾರಂಭ ಮಾಡಿ ಆರ್ಸಿಬಿ ವಿರುದ್ಧ ಸೋತಿದ್ದ ಚೆನ್ನೈ ಇದೀಗ ಸತತ ಎರಡನೇ ಸೋಲನ್ನು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿ ಚೆನ್ನೈ ಸೂಪರ್ ಕಿಂಗ್ಸ್ಗೆ 183 ರನ್ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು.
ಇನ್ನು ಈ ಬಾರಿಯ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮೊದಲ ಮೂರು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಬದಲಾಗಿ ರಿಯಾನ್ ಪರಾಗ್ ನಾಯಕನಾಗಿ ಕಣಕ್ಕಿಳಿದಿದ್ದು, ತಂಡವನ್ನು ಮುನ್ನಡೆಸಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ರಾಜಸ್ಥಾನ್ ರಾಯಲ್ಸ್ ಚೆನ್ನೈ ತಂಡವನ್ನು ಮಣಿಸಿದ್ದು, ಪಂದ್ಯ ಗೆಲ್ಲುತ್ತಿದ್ದಂತೆ ರಿಯಾನ್ ಪರಾಗ್ ನಾಯಕನಾಗಿ ಚೊಚ್ಚಲ ಐಪಿಎಲ್ ಗೆಲುವನ್ನು ದೇವರಿಗೆ ಕೈ ಮುಗಿಯುತ್ತಾ ಸಂಭ್ರಮಿಸಿದರು.
ಇನ್ನು ಮೂಲತಃ ಗುವಾಹಟಿಯವರೇ ಆದ ರಿಯಾನ್ ಪರಾಗ್ ಅವರ ಜೊತೆ ಸ್ಟೇಡಿಯಂನ ಗ್ರೌಂಡ್ ಸ್ಟಾಫ್ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಯಿತು. ಸೆಲ್ಫಿ ನೀಡಿದ ರಿಯಾನ್ ಪರಾಗ್ ಅವರ ಕೈಗೆ ಕೊಡದೇ ಬಿಸಾಡಿ ಅಲ್ಲಿಂದ ಹೊರನಡೆದಿದ್ದಾರೆ. ಹೀಗೆ ನಡೆದುಕೊಂಡಿರುವ ರಿಯಾನ್ ಪರಾಗ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಗೆದ್ದ ಕೇವಲ ಒಂದೇ ಒಂದು ಪಂದ್ಯಕ್ಕೇ ಇಷ್ಟೆಲ್ಲ ದುರಹಂಕಾರ ಬೇಕಾ ಎಂದು ನೆಟ್ಟಿಗರು ರಿಯಾನ್ ಪರಾಗ್ ಅವರನ್ನು ಟ್ರೋಲ್ ಮಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


