Friday, June 19, 2026
spot_img
More
    spot_img
    HomeStateDistrictಧರ್ಮಸ್ಥಳ: 6ನೇ ಪಾಯಿಂಟ್‌ನಲ್ಲಿ 2 ಮೂಳೆ ಮಾತ್ರವಲ್ಲ ಮತ್ತಷ್ಟು ಭಾಗ, ತಲೆಬುರುಡೆ ಪೀಸ್‌ ಪತ್ತೆ

    ಧರ್ಮಸ್ಥಳ: 6ನೇ ಪಾಯಿಂಟ್‌ನಲ್ಲಿ 2 ಮೂಳೆ ಮಾತ್ರವಲ್ಲ ಮತ್ತಷ್ಟು ಭಾಗ, ತಲೆಬುರುಡೆ ಪೀಸ್‌ ಪತ್ತೆ

    ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳು ನಡೆದಿವೆ ಎಂದು ಆರೋಪ ಮಾಡಿ ತಾನೇ ಆ ಶವಗಳನ್ನು ಹೂತುಹಾಕಿದ್ದಾಗಿ ದೂರು ನೀಡಿದ್ದ ಅನಾಮಿಕ ವ್ಯಕ್ತಿ ಆ ಶವಗಳನ್ನು ಹೂತ ಸ್ಥಳ ತೋರಿಸಿ ಅಗೆದು ತೋರಿಸುವುದಾಗಿ ಹೇಳಿಕೊಂಡಿದ್ದ.

    Advertisement

    ಆ ದೂರಿನ ಮೇರೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದು, ತನಿಖೆ ಭರದಿಂದ ನಡೆಯುತ್ತಿದೆ. ಮೊದಲೆರಡು ದಿನ 5 ಕಡೆ ಗುಂಡಿ ಅಗೆದ ಎಸ್‌ಐಟಿ ತಂಡಕ್ಕೆ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಆದರೆ ಇಂದು ( ಜುಲೈ 31 ) ಆರನೇ ಪಾಯಿಂಟ್‌ನಲ್ಲಿ ಅಗೆಯಲು ಮುಂದಾದಾಗ ಮೊದಲಿಗೆ 2 ಎಲುಬು ಮೂಳೆಗಳು ಪತ್ತೆಯಾಗಿದ್ದವು.

    ನಂತರ ಎಸ್‌ಐಟಿ ಅಧಿಕಾರಿಳು ಮತ್ತಷ್ಟು ಆಳಕ್ಕೆ ಅಗೆಸಿದ್ದು, ಕೈಕಾಲ ಮೂಳೆಗಳು ಹಾಗೂ ತಲೆ ಬುರುಡೆಯ ಒಂದು ಪೀಸ್‌ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

    ಈ ಎಲ್ಲ ಮೂಳೆಗಳನ್ನು ಸಂಗ್ರಹಿಸಿರುವ ಎಸ್‌ಐಟಿ ಅಧಿಕಾರಿಗಳು ಅವುಗಳನ್ನು ಎಫ್‌ಎಎಸ್‌ಎಲ್‌ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು, ಲ್ಯಾಬ್‌ಗೆ ಕೊಂಡೊಯ್ಯಲಿದ್ದಾರೆ.

    IBPS ಕ್ಲರ್ಕ್ ನೇಮಕಾತಿ 2025: ಅರ್ಜಿ ಪ್ರಕ್ರಿಯೆ ಆಗಸ್ಟ್ 1ರಿಂದ ಪ್ರಾರಂಭ!

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಕಾಕ್ರೋಚ್ ಜನತಾ ಪಾರ್ಟಿ: ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ವೈರಲ್ ಟ್ರೆಂಡ್!

    ಕಾಕ್ರೋಚ್ ಜನತಾ ಪಾರ್ಟಿ ಎಂಬ ಪದ ಸಾಮಾಜಿಕ ಜಾಲತಾಣದಲ್ಲಿ ಯಾವಾಗ, ಹೇಗೆ ವೈರಲ್ ಆಯಿತು? ಈ ಟ್ರೆಂಡ್ ಹಿಂದಿನ ಸಂಪೂರ್ಣ ಕಥೆ ಓದಿ.

    ಬೆಂಗಳೂರಿನಲ್ಲಿ ಮುಂಗಾರು ಆರ್ಭಟ: ಆಲಿಕಲ್ಲು ಮಳೆ, ಗುಡುಗು-ಸಿಡಿಲಿಗೆ ನಗರ ತತ್ತರ

    ಬೆಂಗಳೂರು: ಸಂಜೆ ಐಟಿ ರಾಜಧಾನಿ ಬೆಂಗಳೂರಿನ ಮೇಲೆ ಪ್ರಕೃತಿ ತನ್ನ ಕೋಪವನ್ನು ಸಂಪೂರ್ಣವಾಗಿ ತೋರಿಸಿತು. ಕಾರ್ಮೋಡ ಕವಿದ ಆಕಾಶದಿಂದ ಮೊದಲು ಗುಡುಗು-ಸಿಡಿಲಿನ ಆರ್ಭಟ, ಬಳಿಕ ಆಲಿಕಲ್ಲು ಮಳೆ ಮತ್ತು ಜೋರು ಗಾಳಿ ನಗರವನ್ನು...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading