ಬೆಂಗಳೂರು: ಕೇಂದ್ರ ಸರ್ಕಾರಕ್ಕೆ ಶಿಕ್ಷಣದ ಪರಿಜ್ಞಾನವಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ರಾಜ್ಯಗಳಿಗಿಂತ ಹೆಚ್ಚು ತೆರಿಗೆ ಸಂಗ್ರಹವಾಗುವ ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎಸ್ಎಸ್ಎ ಮೂಲಕ ಪ್ರತಿ ಮಕ್ಕಳಿಗೆ 6 ರಿಂದ 7 ಸಾವಿರ ರೂ. ಖರ್ಚಾಗಲಿದೆ. ಆದರೆ 2 ರಿಂದ 3 ಸಾವಿರ ರೂ.ನಷ್ಟು ಮಾತ್ರ ಖರ್ಚು ಮಾಡಲಾಗುತ್ತಿದೆ. ಉಳಿದ ಹಣಕ್ಕೆ ಏನು ಮಾಡಬೇಕು. ಎಲ್ಲರೂ ಸೇರಿ ಆಂದೋಲನ ಮಾಡಬೇಕಷ್ಟೆ ಎಂದರು.
ಜಿಎಸ್ಟಿ ವಿಚಾರದಲ್ಲೂ ತಾರತಮ್ಯ ಮಾಡಲಾಗುತ್ತದೆ. ಎಲ್ಲಾ ಹಣ ಉತ್ತರ ಪ್ರದೇಶಕ್ಕೆ ಹೋಗುತ್ತಿದೆ. ನಮ್ಮ ಪಾಲನ್ನು ನಮಗೆ ಕೊಡಲಿ ಎಂಬುದಷ್ಟೇ ನಮ ಬೇಡಿಕೆ. ಹೆಚ್ಚುಕಡಿಮೆ ಆಗಲಿ. ಆದರೆ ಹೆಚ್ಚು ತಾರತಮ್ಯವಾಗಬಾರದು ಎಂದ ಅವರು, ಕೇಂದ್ರ ಸಚಿವ ಕುಮಾರಸ್ವಾಮಿಯವರಿಂದಲೂ ನಿರೀಕ್ಷೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ ಸರ್ಕಾರದ ಗ್ಯಾರಂಟಿಯನ್ನು ಬಿಜೆಪಿಯವರು ಖಂಡಿಸಿದರು. ನಾವು ಅನ್ನಭಾಗ್ಯ ಯೋಜನೆಯಡಿ ಅಕ್ಕಿ, ಗೃಹಲಕ್ಷ್ಮಿ ಯೋಜನೆಯಡಿ ಹಣ ನೀಡುತ್ತಿದ್ದೇವೆ. ಹೊಸ ಬಸ್ಗಳನ್ನು ಕೂಡ ಖರೀದಿಸಲಾಗುತ್ತಿದೆ ಎಂದು ಸಮರ್ಥನೆ ಮಾಡಿಕೊಂಡರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


