ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಕಾರ್ಯ ವೈಖರಿ ವಿರುದ್ಧ ಸ್ವತಃ ಪಕ್ಷದ ಶಾಸಕರೇ ಅಸಮಾಧಾನ ಹೊರಹಾಕಿರುವುದು ಸದ್ಯ ಭಾರೀ ವಿವಾದವನ್ನು ಎಬ್ಬಿಸಿದ್ದು, ಪಕ್ಷವನ್ನು ಸರಿ ಹಾದಿಗೆ ತರಲು ಇದೀಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ಬೆಂಗಳೂರಿಗೆ ಬಂದಿಳಿದಿದ್ದಾರೆ.
ಇನ್ನು ಪಕ್ಷದೊಳಗಿನ ಅಸಮಾಧಾನಕ್ಕೆ ಕಾರಣವೇನು, ಯಾರದ್ದು ತಪ್ಪು, ಸರಿಪಡಿಸಬೇಕಾದ ಅಂಶಗಳೇನು ಎಂಬುದನ್ನು ಮನಗಾಣಲು ರಣದೀಪ್ ಸಿಂಗ್ ಸುರ್ಜೇವಾಲ ಪಕ್ಷದ ಎಲ್ಲ ಶಾಸಕರನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದು, ಮೊದಲಿಗೆ ಪಕ್ಷದ ವಿರುದ್ಧ ತಿರುಗಿಬಿದ್ದ ಶಾಸಕರ ಜೊತೆ ಚರ್ಚೆ ನಡೆಸುತ್ತಿದ್ದಾರೆ.
ನಿನ್ನೆ ( ಜೂನ್ 30 ) ಬಿಆರ್ ಪಾಟೀಲ್ ಸುರ್ಜೇವಾಲ ಅವರನ್ನು ಭೇಟಿಯಾಗಿ ಚರ್ಚಿಸಿ ಬಂದಿದ್ದಾರೆ. ಇಂದು ಬಿಆರ್ ಪಾಟೀಲ್ ಅವರ ಭ್ರಷ್ಟಾಚಾರ ಆರೋಪವನ್ನು ನಿಜ ಎಂದಿದ್ದ ಮತ್ತೋರ್ವ ಶಾಸಕ ರಾಜು ಕಾಗೆ ಸುರ್ಜೇವಾಲ ಅವರನ್ನು ಭೇಟಿಯಾಗಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಚರ್ಚೆ ಆರಂಭವಾಗಿದ್ದು, ಇದಕ್ಕೂ ಮುನ್ನ ಮಾತನಾಡಿದ ರಾಜು ಕಾಗೆ ತಾನು ಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ, ಹೀಗಾಗಿ ನಾನು ಯಾರಿಗೂ ಹೆದರುವುದೂ ಇಲ್ಲ, ನನ್ನ ಕ್ಷೇತ್ರದ ಜನರ ಕಷ್ಟಗಳಿಗಾಗಿ ದನಿ ಎತ್ತಿದ್ದೇನೆಯೇ ಹೊರತು ನನ್ನ ವೈಯಕ್ತಿಕ ಕಾರಣಕ್ಕಾಗಿ ಅಲ್ಲ, ಹೀಗಾಗಿ ನಾನು ಸುರ್ಜೇವಾಲ ಬಳಿ ಏನಿದೆಯೋ ಎಲ್ಲವನ್ನೂ ಮುಕ್ತವಾಗಿ ಹೇಳುತ್ತೇನೆ ಎಂದು ನೇರ ಹೇಳಿಕೆ ನೀಡಿದ್ದಾರೆ.
ಸುರ್ಜೇವಾಲ ಮುಂದೆ ಕೋಲಾರ ಗುಂಪುಗಾರಿಕೆ ಹಾಗೂ ದ್ವೇಷ ರಾಜಕಾರಣದ ದೂರುಗಳ ಸುರಿಮಳೆ; ಭೈರತಿ ಸುರೇಶ್ ವಿರುದ್ಧ ದೂರು!
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


