ಲಕ್ನೋ: ಲಂಚಾಸುರರ ತಾಣವಾದ ಉತ್ತರಪ್ರದೇಶದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸ್ ಇನ್ಸ್ಪೆಕ್ಟರ್ ಒಬ್ಬ ಗ್ಯಾಂಗ್ರೇಪ್ ಪ್ರಕರಣದಲ್ಲಿ ಆರೋಪಿಯ ಹೆಸರನ್ನು ಕೈಬಿಡಲು 2 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ.
ಮಹಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಪೇಪರ್ ಮಿಲ್ ಕಾಲೋನಿ ಪೊಲೀಸ್ ಔಟ್ಪೋಸ್ಟ್ನ ಇನ್ಸ್ಪೆಕ್ಟರ್ ಧನಂಜಯ್ ಸಿಂಗ್ ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿದ್ದಾರೆ.
ಭ್ರಷ್ಟಾಚಾರ ನಿಗ್ರಹ ಆಯೋಗ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಧನಂಜಯ್ ಸಿಂಗ್ನ ಬಂಡವಾಳ ಬಯಲಾಗಿದ್ದು, ಈ ವೇಳೆ ಮಾಡಿಕೊಳ್ಳಲಾದ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪ್ರತೀಕ್ ಗುಪ್ತಾ ಎಂಬುವರ ಹೆಸರನ್ನು ಕೈಬಿಡಲು ಧನಂಜಯ್ ಸಿಂಗ್ 50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಮಾಹಿತಿಯನ್ನು ಸ್ವತಃ ಆರೋಪಿ ಪ್ರತೀಕ್ ಗುಪ್ತಾ ನೀಡಿದ್ದ ಆಧಾರದ ಮೇಲೆ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಈ ವೇಳೆ ಧನಂಜಯ್ ಸಿಂಗ್ 2 ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ್ದಾರೆ.
ಇನ್ನು ಬ್ರಿಟಿಷ್ ಸ್ಕೂಲ್ ಆಫ್ ಲಾಂಗ್ವೇಜ್ನ ನಿರ್ದೇಶಕನಾಗಿರುವ ಪ್ರತೀಕ್ ಗುಪ್ತಾ ಹಾಗೂ ಆತನ ಪಾಲುದಾರ ರಿಯಾಜ್ ತನ್ನನ್ನು ಕೆಲಸವಿದೆ ಎಂದು ಹೇಳಿ ಕರೆಸಿಕೊಂಡು ಪ್ರಜ್ಞಾಹೀನಳನ್ನಾಗಿ ಮಾಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ದೂರು ನೀಡಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


