ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಸಮಾಧಾನ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಎಲ್ಲ ಪಕ್ಷಗಳದ್ದೂ ಇದೇ ಕಥೆಯಾಗಿದ್ದು, ಅಧಿಕಾರದಲ್ಲಿರುವ ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಹೊರಬಿದ್ದಿದೆ.
ಆಳಂದ ಶಾಸಕ ಬಿಆರ್ ಪಾಟೀಲ್ ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸ್ಪೋಟಕ ಹೇಳಿಕೆ ನೀಡುವ ಮೂಲಕ ತಮ್ಮದೇ ಪಕ್ಷದ ವಿರುದ್ಧ ಮಾತನಾಡಿದ್ದರು. ಕಾಂಗ್ರೆಸ್ಗೆ ಈ ಹೇಳಿಕೆ ಭಾರೀ ಮುಜುಗರವನ್ನುಂಟುಮಾಡಿತ್ತು.
ಇದೇ ಶಾಸಕ ಇದೀಗ ಮತ್ತೊಂದು ವಿವಾದವನ್ನೆಬ್ಬಿಸಿದ್ದು, ಇವರದ್ದು ಎನ್ನಲಾದ ವಿಡಿಯೊವೊಂದು ವೈರಲ್ ಆಗಿದೆ. ಈ ವಿಡಿಯೊದಲ್ಲಿ ಬಿಆರ್ ಪಾಟೀಲ್ ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದಾರೆ. ಯಾರದ್ದೋ ಜೊತೆ ಮೊಬೈಲ್ ಕರೆಯಲ್ಲಿ ಮಾತನಾಡುತ್ತಿರುವ ಬಿಆರ್ ಪಾಟೀಲ್ ʼಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ ಮುಖ್ಯಮಂತ್ರಿಯಾದ. ಸಿದ್ದರಾಮಯ್ಯಗೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿಸಿದ್ದು ನಾನು. ಅವನ ಗ್ರಹಚಾರ ಚೆನ್ನಾಗಿತ್ತು ಅವನು ಆಗಿಬಿಟ್ಟ. ನಮಗೆ ಗಾಡು ಇಲ್ಲ, ಗಾಡ್ಫಾದರ್ ಇಲ್ಲʼ ಎಂದಿದ್ದಾರೆ.
ಅಲ್ಲದೇ ಇದೇ ವಿಡಿಯೊದಲ್ಲಿ ಸುರ್ಜೇವಾಲ ಅವರ ಜೊತೆ ಮಾತನಾಡಿದ್ದೇನೆ ಎಂದು ಹೇಳಲಾಗಿದ್ದು, ಇದು ನಿನ್ನೆಯ ( ಜುಲೈ 1 ) ಎನ್ನಲಾಗುತ್ತಿದೆ.
2025ರ ಮೊದಲ 6 ತಿಂಗಳಲ್ಲಿ ಕನ್ನಡ ಚಿತ್ರಗಳು ಮಾಡಿದ ಕಲೆಕ್ಷನ್; ಇಷ್ಟೇ ಸಾಕಾ?
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


