ಬೆಂಗಳೂರು;ಭಾರತ ಸರ್ಕಾರದ ಪ್ರಕಾರ, ಇ-ಶ್ರಾಮ್ ಕಾರ್ಡ್ ಅನ್ನು ರಚಿಸಿದ ಪ್ರತಿಯೊಬ್ಬ ಕಾರ್ಮಿಕರ ಡೇಟಾಬೇಸ್ ಅನ್ನು ರಾಷ್ಟ್ರೀಯ ಕಾರ್ಮಿಕ ಪೋರ್ಟಲ್(Labour portal)ನಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ ಮತ್ತು ಪ್ರತಿ ಕಾರ್ಮಿಕನಿಗೆ ಮತ್ತು ಕಾಲಕಾಲಕ್ಕೆ ವಿಶಿಷ್ಟವಾದ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಇದು ಪ್ರಯೋಜನಕಾರಿಯಾಗಿದೆ. ಹಾಗೆ ಕಾರ್ಮಿಕರ ಕಾರ್ಡ್ ಇದ್ದವರಿಗೆ ಇಂದಿನ ದಿನ ಭರ್ಜರಿ ಸಿಹಿ ಸುದ್ದಿ ಎಂದು ಹೇಳಬಹುದು ,ಅಸಂಘಟಿತ(unorganized) ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರು(Labour) ಕಾಲಕಾಲಕ್ಕೆ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು E -Shram Card ಅನ್ನು ಸರ್ಕಾರ ಪರಿಚಯಿಸಿದೆ.ಪೋರ್ಟಲ್ ನ ಮೂಲಕ ಕಾರ್ಮಿಕರು ಸರ್ಕಾರ ಯೋಜನೆಯ ಲಾಭವನ್ನು ಸುಲಭವಾಗಿ ಪಡೆಯಬಹುದು.60 ವರ್ಷಗಳು ಪೂರ್ಣಗೊಂಡ ನಂತರ ಈ ಲೇಬರ್ ಕಾರ್ಡಿಗೆ ನೊಂದಾಯಿತರ ಖಾತೆಗೆ ಪ್ರತಿ ತಿಂಗಳು ಪಿಂಚಣಿ(Pension) ರೂಪದಲ್ಲಿ 3000 ಆರ್ಥಿಕ ನೆರವನ್ನು ನೀಡಲು ಸರ್ಕಾರವು ಮುಂದಾಗಿದೆ. ಇದರಿಂದ ಕಾರ್ಮಿಕರು(Labour) ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಸಹಾಯಕವಾಗುತ್ತದೆ.ಯಾವುದೇ ರೀತಿಯ ಮಾಹಿತಿಗಾಗಿ ಕಾರ್ಮಿಕರು ಟೋಲ್ ಫ್ರೀ ಸಂಖ್ಯೆಯ ಮೂಲಕ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಸಹಾಯಕ್ಕಾಗಿ ನೋಂದಣಿಯ ನಂತರ ಟೋಲ್ ಫ್ರೀ ಸಂಖ್ಯೆ 14434 ಅನ್ನು ಪ್ರಾರಂಭಿಸಲಾಗಿದೆ.
ಇ-ಶ್ರಮ್ ಕಾರ್ಡ್ ಯೋಜನೆಯ ಪ್ರಯೋಜನಗಳು
*ಅಕಾಲಿಕ ಮರಣ ಹೊಂದಿದರೆ ಈ ಕಾರ್ಡನ್ನು ಹೊಂದಿರುವಂತಹ ವ್ಯಕ್ತಿಯ ಕುಟುಂಬಕ್ಕೆ 2 ಲಕ್ಷ ರೂಪಾಯಿಗಳು
*ಕಾರ್ಮಿಕನಾದ ಒಬ್ಬ ವ್ಯಕ್ತಿಯು ಅಪಘಾತದಲ್ಲಿ ಅಂಗವಿಕಲನಾದರೆ ಆ ವ್ಯಕ್ತಿಗೆ ಒಂದು ಲಕ್ಷ ರೂಪಾಯಿಗಳನ್ನು ಅಡಿಯಲ್ಲಿ ನೀಡಲಾಗುತ್ತದೆ.
*ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯ(Pradhana manrtisuraksha yojane) ಅಡಿಯಲ್ಲಿ ಈ ಶ್ರಮ ಪೋರ್ಟಲ್ ಗೆ ಸೇರಿರುವ ಕೆಲಸಗಾರರು 2 ಲಕ್ಷ ರೂಪಾಯಿಗಳವರೆಗಿನ ವಿಮಾ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ
*ಕಾರ್ಮಿಕ ಕಾರ್ಡ್(labourcard) ಬಾಗಶಃ ನಿಷ್ಕ್ರಿಯಗೊಂಡಿದ್ದರೆ 1 ಲಕ್ಷ ರೂಪಾಯಿಗಳ ವಿಮೆಯನ್ನು ಸಹ ಅವರು ಪಡೆಯುತ್ತಾರೆ

ಲೇಬರ್ ಕಾರ್ಡ್ ಮಾಡಲು ಅಗತ್ಯ ದಾಖಲೆಗಳು:
*ಆಧಾರ್ ಕಾರ್ಡ್,
ಆಧಾರ್ ಕಾರ್ಡ್ ಗೆ ಲಿಂಕ್ ಮಾಡಲಾದ ಮೊಬೈಲ್ ನಂಬರ್,
IFSC ಕೋಡ್ನೊಂದಿಗೆ ಉಳಿತಾಯ ಬ್ಯಾಂಕ್ ಖಾತೆ ಸಂಖ್ಯೆ
ಲೇಬರ್ ಕಾರ್ಡ್(Labourcard) ಅನ್ನು ಪೋರ್ಟಲ್ ನಲ್ಲಿ ಈ ಕೆಳಗಿನ ಜನರು ತಮ್ಮನ್ನು ನೋಂದಾಯಿಸಿಕೊಳ್ಳಬಹುದು ಅವರೆಂದರೆ ,
*ಕಟ್ಟಡ ಕಾರ್ಮಿಕರು ವಲಸೆ ಕಾರ್ಮಿಕರು
*ಕೃಷಿ ಕಾರ್ಮಿಕರು ರಿಕ್ಷಾ ಚಾಲಕರು
*ಸ್ವಿಪರ್ಗಳು ಗಾರ್ಡ್ಗಳು ಬ್ಯೂಟಿ ಪಾರ್ಲರ್ ಕೆಲಸಗಾರರು
ನೋಂದಣಿ ಹೇಗೆ?:
ಇ-ಶ್ರಮ ಪೋರ್ಟಲ್ http://www.eshram.gov.in ನಲ್ಲಿ ಸ್ವಯಂ ನೋಂದಣಿ ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (CSC)ಗಳಿಗೆ ಬೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಬಹುದು.
ಇ-ಶ್ರಮ ಪೋರ್ಟಲ್ನಲ್ಲಿ ನೋಂದಣಿ ಉಚಿತವಾಗಿದೆ.
ಯಶಸ್ವಿ ನೋಂದಣಿಯ ನಂತರ ಫಲಾನುಭವಿಗಳು ಸ್ಥಳದಲ್ಲಿಯೆ ಗುರುತಿನ ಚೀಟಿಯನ್ನು (UAN) ಪಡೆಯಬಹುದು.
ಇದು ದೇಶದಾದ್ಯಂತ ಹಾಗೂ ಜೀವಿತಾವಧಿಯ ಮಾನ್ಯತೆ ಹೊಂದಿರುತ್ತದೆ. 16 ರಿಂದ 59 ವಯೋಮಾನದವರು.
ಆದಾಯ ತೆರಿಗೆ ಪಾವತಿಸದವರು, ಭವಿಷ್ಯನಿಧಿ ಹಾಗೂ ಇಎಸ್ಐ ಫಲಾನುಭವಿಯಾಗಿರದವರು ಇದಕ್ಕೆ ಅರ್ಹರಾಗಿರುತ್ತಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


