Monday, August 3, 2026
spot_img
More
    spot_img
    HomeEntertainmentಪ್ರೇಮ ಏನ್‌ ಅಹಂಕಾರ ನಿಂದು? ವಿಷ್ಣು ಸರ್‌ ಯಜಮಾನಕ್ಕೆ ನೀನು ಬೇಡ ಅಂದಿದ್ರು ಅದು ಗೊತ್ತಾ?;...

    ಪ್ರೇಮ ಏನ್‌ ಅಹಂಕಾರ ನಿಂದು? ವಿಷ್ಣು ಸರ್‌ ಯಜಮಾನಕ್ಕೆ ನೀನು ಬೇಡ ಅಂದಿದ್ರು ಅದು ಗೊತ್ತಾ?; ಕಿಡಿಕಾರಿದ ಯಜಮಾನ ನಿರ್ಮಾಪಕ!

    ಬೆಂಗಳೂರು: ಯಜಮಾನ 2000ನೇ ಇಸವಿಯಲ್ಲಿ ಬಿಡುಗಡೆಯಾದ ಈ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿತ್ತು. 2 ಕೋಟಿ ವೆಚ್ಚದ ಬಜೆಟ್‌ನಲ್ಲಿ ತಯಾರಾಗಿದ್ದ ಈ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ 20 ಕೋಟಿ ರೂಪಾಯಿ ಗ್ರಾಸ್‌ ಕಲೆಕ್ಷನ್‌ ಮಾಡಿ ಅಬ್ಬರಿಸಿ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ 20 ಕೋಟಿ ಗಳಿಸಿದ ಚಿತ್ರ ಎಂಬ ದಾಖಲೆ ನಿರ್ಮಿಸಿತ್ತು.

    Advertisement

    1998ರಲ್ಲಿ ಬಿಡುಗಡೆಯಾಗಿ 15 ಕೋಟಿ ಗಳಿಕೆ ಮಾಡಿದ್ದ ಉಪೇಂದ್ರ ನಿರ್ದೇಶನದ ʼಎʼ ಚಿತ್ರದ ದಾಖಲೆಯನ್ನು ಮುರಿದು ಚಂದನವನದ ಹೊಸ ಇಂಡಸ್ಟ್ರಿ ಹಿಟ್‌ ಎನಿಸಿಕೊಂಡಿತ್ತು. ಇಂತಹ ಮಹಾನ್‌ ಚಿತ್ರಕ್ಕೆ 25 ವರ್ಷಗಳು ಕಳೆದಿದ್ದು ಅದರ ನಿರ್ಮಾಪಕ ರಹಮಾನ್‌ 25 ವರ್ಷಗಳ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದರು.

    ಇನ್ನು ಚಿತ್ರದಲ್ಲಿ ನಟಿಸಿದ್ದ ಶಶಿಕುಮಾರ್‌, ರಮೇಶ್‌ ಭಟ್‌ ಸೇರಿ ಹಲವರು ಈ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದರು. ಆದರೆ ಚಿತ್ರದ ನಾಯಕಿ ನಟಿ ಪ್ರೇಮ ಗೈರಾಗಿದ್ದರು. ಈ ಕುರಿತು ವೇದಿಕೆಯಲ್ಲಿಯೇ ಕೆಂಡಾಮಂಡಲವಾದ ನಿರ್ಮಾಪಕ ರಹಮಾನ್‌ ʼಪ್ರೇಮಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಆದರೆ ಆಕೆ ಟಿವಿಯಲ್ಲಿ ಮಹಾನಟಿ ಎಂಬ ಕಾರ್ಯಕ್ರಮ ಮಾಡುತ್ತಿದ್ದು, ಅಲ್ಲಿಗೆ ಹೋಗಬೇಕು, ಬರುವುದಿಲ್ಲ ಎಂದಳು. ಬಿಡಮ್ಮ ನೀನು ದೊಡ್ಡ ಮಹಾನಟಿ ನೀನು ಬೇಡ ಎಂದೆ. ಅವರಿಗೆ ಈ ಚಿತ್ರಕ್ಕಿಂತ ಮಹಾನಟಿ ಎಂಬ ಕಾರ್ಯಕ್ರಮ ದೊಡ್ಡದಂತೆʼ ಎಂದರು.

    ಹೀಗೆ ಪ್ರೇಮ ವಿರುದ್ಧ ರಹಮಾನ್‌ ಮುಕ್ತವಾಗಿ ಟೀಕೆ ನಡೆಸಲು ಆರಂಭಿಸುತ್ತಿದ್ದಂತೆ ಅಕ್ಕಪಕ್ಕ ಇರುವವರು ರಹಮಾನ್‌ ಅವರನ್ನು ಮುಟ್ಟಿ ಬೇಡ ಎಂದು ಸನ್ನೆ ಮಾಡಿದರು. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ರಹಮಾನ್‌ ʼಏಯ್..‌ ನಾನು ಹೆದರಿಕೊಳ್ಳಲ್ಲ ಯಾರಿಗೂ ನೇರವಾಗಿಯೇ ಹೇಳುತ್ತೇನೆ. ಅವಳನ್ನು ನಟಿಯನ್ನಾಗಿ ಹಾಕಿಕೊಂಡದ್ದು ನಾನು. ನಾನೇಕೆ ಆಕೆಗೆ ಹೆದರಿಕೊಳ್ಳಲಿ? ವಿಷ್ಣು ಸರ್‌ ಬೇಡ ಎಂದರು. ಆಗ ವಿಷ್ಣು ಸರ್‌ನ ನಾನು ಕಷ್ಟಪಟ್ಟು ಒಪ್ಪಿಸಿದ್ದೇನೆ. ಅವಾಗ ಅಡ್ವಾನ್ಸ್‌ ತೆಗೆದುಕೊಂಡಾಗ ಗೊತ್ತಿತ್ತಾ ರಹಮಾನ್‌ ಯಾರು ಅಂತ? ಈಗ ಮಹಾನಟಿನಾ? ಏನು ಅಹಂಕಾರ ನಿಂದು? ಮಹಾನಟಿಯಂತೆ ಅಬ್ಬಬ್ಬಾ.. ಯಜಮಾನ ಮಾಡಿದಮೇಲೆ ಮಹಾನಟಿ ನೀನು, ಯಜಮಾನ ಮಾಡುವ ಮುಂಚೆ ಯಾವ ನಟಿ ನೀನು?ʼ ಎಂದು ನೇರವಾಗಿ ವಾಗ್ದಾಳಿ ನಡೆಸಿದರು.

    ಅಲ್ಲದೇ ಭಾರತಿ ಮೇಡಂ ಅವರಿಗೆ ಆರೋಗ್ಯ ಸರಿಯಿಲ್ಲ ಹಾಗಾಗಿ ಕರೆಯುವುದು ಬೇಡ ಎಂದುಕೊಂಡೆ, ಶಶಿಕುಮಾರ್‌ ಅವರಿಗೆ ಕರೆ ಮಾಡಿದ ಕೂಡಲೇ ಬಂದರು, ರಮೇಶ್‌ ಭಟ್‌ ವಿಷ್ಣು ಸರ್‌ ಸಮಕಾಲೀನರು ಅವರೇ ಬರುತ್ತೇನೆ ಎಂದರು ಎಂದು ಉದಾಹರಣೆ ಕೊಟ್ಟು ಪ್ರೇಮ ವಿರುದ್ಧ ಚಾಟಿ ಬೀಸಿದರು ನಿರ್ಮಾಪಕ ರಹಮಾನ್.

    ಮೂತ್ರಪಿಂಡಕ್ಕೆ ಡೈಪರ್ ಅಪಾಯ: ವೈರಲ್ ವೀಡಿಯೊ ಕೇವಲ ವದಂತಿ! ತಜ್ಞರ ಸ್ಪಷ್ಟನೆ: ನಿಜವಾದ ಕಂಟಕ ಕಳಪೆ ನೈರ್ಮಲ್ಯ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading