Wednesday, September 2, 2026
spot_img
More
    spot_img
    HomeEntertainmentಸಮೀರ್‌ ಧರ್ಮಸ್ಥಳ ವಿಡಿಯೊ ವೈರಲ್ ಮಾಡಲು 300ರಿಂದ 400 ಟ್ರೋಲ್‌ ಪೇಜ್‌ ಬಳಕೆ:‌ ಯುಟ್ಯೂಬರ್‌ ಸುಮಂತ್‌...

    ಸಮೀರ್‌ ಧರ್ಮಸ್ಥಳ ವಿಡಿಯೊ ವೈರಲ್ ಮಾಡಲು 300ರಿಂದ 400 ಟ್ರೋಲ್‌ ಪೇಜ್‌ ಬಳಕೆ:‌ ಯುಟ್ಯೂಬರ್‌ ಸುಮಂತ್‌ ಗಂಭೀರ ಆರೋಪ

    ದೂತ ಸಮೀರ್‌ ಎಂಡಿ ಯಾರಿಗೆ ತಾನೇ ಗೊತ್ತಿಲ್ಲ. ಧರ್ಮಸ್ಥಳ ಹಾರರ್‌ ವಿಡಿಯೊಗಳನ್ನು ಮಾಡಿದ ಬಳಿಕ ಬಹುಬೇಗನೆ ವೈರಲ್‌ ಆದ ಈತನ ವಿರುದ್ಧ ಸದ್ಯ ಬೆಳ್ತಂಗಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಆತನ ಕ್ಯಾಮೆರಾ, ಮೊಬೈಲ್ ಹಾಗೂ ಡೆಸ್ಕ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

    Advertisement

    ಇನ್ನು ಇದೇ ವೇಳೆ ಗೋಲ್ಡನ್‌ ಕನ್ನಡಿಗ ಎಂಬ ಯುಟ್ಯೂಬರ್‌ ಸಮೀರ್‌ ವಿಡಿಯೊ ವೈರಲ್‌ ಆಗಲು ಕಾರಣವೇನೆಂಬುದನ್ನು ಯುನೈಟೆಡ್‌ ಮೀಡಿಯಾದ ಅಭಿ ಎಂಬಾತ ತನ್ನ ಬಳಿಯೇ ಹೇಳಿಕೊಂಡಿದ್ದ ಎಂದು ಸಹ ಹೇಳಿಕೊಂಡಿದ್ದಾನೆ,

    ಸುಮಂತ್‌ ಹೇಳುವ ಪ್ರಕಾರ ಆತನಿಗೆ ಯುಟ್ಯೂಬರ್‌ ಚಂದನ್‌ ಗೌಡ ಎಂಬಾತನ ಕಡೆಯಿಂದ ಯುನೈಟೆಡ್‌ ಮೀಡಿಯಾದ ಅಭಿ ಎಂಬಾತ ಪರಿಚಿತನಂತೆ. ಆತನ ಜೊತೆ ಎರಡು ವರ್ಷಗಳ ಸ್ನೇಹವಿದೆಯಂತೆ. ಧರ್ಮಸ್ಥಳದ ವಿರುದ್ಧ ವಿಡಿಯೊ ಮಾಡಿದರೆ ಹಣ ಹಾಗೂ ಉಳಿದುಕೊಳ್ಳಲು ಜಾಗ ಎಲ್ಲವನ್ನೂ ಕೊಡುವುದಾಗಿ ಸ್ವತಃ ಅಭಿ ಈತನ ಬಳಿ ಹೇಳಿದ್ದನಂತೆ.

    ಇಷ್ಟೆಲ್ಲ ಗಂಭೀರ ಆರೋಪಗಳನ್ನು ಮಾಡಿರುವ ಸುಮಂತ್‌ ಸಮೀರ್‌ ವಿಡಿಯೊ ವೈರಲ್‌ ಆಗಲು 300ರಿಂದ 400 ಟ್ರೋಲ್‌ ಪೇಜ್‌ಗಳು ಹಾಗೂ 50 ಕಂಟೆಂಟ್‌ ಕ್ರಿಯೇಟರ್‌ಗಳನ್ನು ಬಳಸಿಕೊಳ್ಳಲಾಗಿತ್ತು ಎಂದೂ ಸಹ ಅಭಿ ಹೇಳಿದ್ದ ಎಂದು ಬಾಂಬ್‌ ಸಿಡಿಸಿದ್ದಾನೆ.

    ಈ ವಿಷಯವನ್ನು ಯುಟ್ಯೂಬರ್‌ ಚಂದನ್‌ ಗೌಡ ಅವರ ಬಟ್ಟೆ ಅಂಗಡಿ ಉದ್ಘಾಟನೆಗೆ ತೆರಳಿದ್ದಾಗ ಸ್ವತಃ ಅಭಿಯೇ ತನ್ನ ಬಳಿ ಹೇಳಿದ್ದ ಎನ್ನುವ ಈ ಸುಮಂತ್‌ ಇಷ್ಟು ದಿನಗಳ ಕಾಲ ಯಾಕೆ ಈ ವಿಷಯವನ್ನು ಹೇಳಲಿಲ್ಲ ಎಂದು ಪ್ರಶ್ನೆ ಹಾಕಿದರೆ ಸ್ನೇಹಿತನಾಗಿದ್ದ ಕಾರಣ ಹೇಳಬಾರದು ಎಂದುಕೊಂಡಿದ್ದೆ, ಆದರೆ ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರಕ್ಕೆ ಧಕ್ಕೆಯಾಗುತ್ತಿರುವುದನ್ನು ನೋಡಿಕೊಂಡು ಸುಮ್ಮನೆ ಇರಲಾಗುತ್ತಿಲ್ಲ ಎಂದು ಹೇಳಿದ್ದಾನೆ.

    60% ಕಮಿಷನ್‌ ಕೇಳಿದ ಆರೋಪ; ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್‌ಗೆ ಕಾನೂನು ಸಂಕಷ್ಟ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading