Monday, August 3, 2026
spot_img
More
    spot_img
    HomeEntertainmentರೇಣುಕಾಸ್ವಾಮಿ ಕೊಲೆ ಕೇಸ್:‌ ದರ್ಶನ್‌ ವಿರುದ್ಧ ಇರೋದು ಒಂದಲ್ಲ ಎರಡಲ್ಲ 11 ಕೇಸ್;‌ ಶಿಕ್ಷೆ ಅಬ್ಬಬ್ಬಾ!

    ರೇಣುಕಾಸ್ವಾಮಿ ಕೊಲೆ ಕೇಸ್:‌ ದರ್ಶನ್‌ ವಿರುದ್ಧ ಇರೋದು ಒಂದಲ್ಲ ಎರಡಲ್ಲ 11 ಕೇಸ್;‌ ಶಿಕ್ಷೆ ಅಬ್ಬಬ್ಬಾ!

    ರೇಣುಕಾಸ್ವಾಮಿ ಅಪಹರಣ ಹಾಗೂ ಕೊಲೆ ಪ್ರಕರಣದಲ್ಲಿ ಒಟ್ಟು 17 ಮಂದಿ ಆರೋಪಿಗಳಾಗಿದ್ದು, ಮೊನ್ನೆ ( ನವೆಂಬರ್‌ 3 ) ಈ ಎಲ್ಲರ ವಿರುದ್ಧ ಬೆಂಗಳೂರಿನ 64ನೇ ಸಿಸಿಎಚ್‌ ನ್ಯಾಯಾಲಯದಲ್ಲಿ ದೋಷಾರೋಪವನ್ನು ನಿಗದಿಪಡಿಸಲಾಯಿತು.

    Advertisement

    ಎಲ್ಲ ಆರೋಪಿಗಳಿಗೂ ನ್ಯಾಯಾಧೀಶರು ಏನೇನು ಕೇಸ್‌ಗಳನ್ನು ಅವರ ವಿರುದ್ಧ ಹಾಕಲಾಗಿದೆ, ಅವರ ವಿರುದ್ಧ ಇರುವ ಆರೋಪಗಳೇನು ಎಂದು ಸಾರಾಂಶ ವಿವರಿಸಿದ್ದು, ಎಲ್ಲರೂ ತಮಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ, ಇದೆಲ್ಲ ಸುಳ್ಳು ಆರೋಪ ಎಂದು ತಿಳಿಸಿದ್ದಾರೆ. ಹೀಗಾಗಿ ನವೆಂಬರ್‌ 10ರಿಂದ ಈ ಪ್ರಕರಣದ ಟ್ರಯಲ್ಸ್‌ ಶುರುವಾಗಲಿದ್ದು, ಸರ್ಕಾರಿ ಪರ ವಕೀಲರು ಹಾಗೂ ಆರೋಪಿಗಳ ನಡುವೆ ವಾದ – ಪ್ರತಿವಾದ ಆರಂಭವಾಗಲಿದೆ.

    ಇನ್ನು ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್‌ ವಿರುದ್ಧ ಒಟ್ಟು 11 ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು, ಅವುಗಳ ಪಟ್ಟಿ ಹಾಗೂ ಆ ಪ್ರಕರಣಗಳು ಸಾಬೀತಾದರೆ ವಿಧಿಸಬಹುದಾದ ಶಿಕ್ಷೆಗಳ ಕುರಿತಾದ ಮಾಹಿತಿ ಕೆಳಕಂಡ ಪಟ್ಟಿಯಲ್ಲಿದೆ.

    ಐಪಿಸಿ ಸೆಕ್ಷನ್‌ 302 – ಕೊಲೆ – ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ
    ಐಪಿಸಿ ಸೆಕ್ಷನ್‌ 120ಬಿ – ಕೊಲೆಗೆ ಸಂಚು – ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ
    ಐಪಿಸಿ ಸೆಕ್ಷನ್‌ 364 – ಅಪಹರಣ – ಜೀವಾವಧಿ ಅಥವಾ 10 ವರ್ಷ ಜೈಲು
    ಐಪಿಸಿ ಸೆಕ್ಷನ್‌ 201 – ಸಾಕ್ಷ್ಯನಾಶ – 7 ವರ್ಷದವರೆಗೂ ಜೈಲು
    ಐಪಿಸಿ ಸೆಕ್ಷನ್‌ 384 – ಮೃತನಿಂದ ಸುಲಿಗೆ – 3 ವರ್ಷದವರೆಗೆ ಜೈಲು, ದಂಡ ಅಥವಾ ಎರಡೂ.
    ಐಪಿಸಿ ಸೆಕ್ಷನ್‌ 504 – ನಿಂದನೆ – ಎರಡು ವರ್ಷಗಳವರೆಗೆ ಜೈಲು, ದಂಡ ಅಥವಾ ಎರಡೂ.
    ಐಪಿಸಿ ಸೆಕ್ಷನ್‌ 149 – ಕಾನೂನುಬಾಹಿರ ಗುಂಪು ಸೇರುವುದು ಹಾಗೂ ಕೃತ್ಯ ಎಸಗುವುದು – ಗುಂಪಿನಲ್ಲಿ ಯಾರೇ ಕೃತ್ಯ ಎಸಗಿದ್ದರೂ ಎಲ್ಲರಿಗೂ ಸಮನಾದ ಶಿಕ್ಷೆ
    ಐಪಿಸಿ ಸೆಕ್ಷನ್‌ 143 – ಅಕ್ರಮಕೂಟ – 6 ತಿಂಗಳವರೆಗೆ ಜೈಲು
    ಐಪಿಸಿ ಸೆಕ್ಷನ್‌ 148 – ಮಾರಕಾಸ್ತ್ರಗಳಿಂದ ಗಲಭೆ – ಮೂರು ವರ್ಷಗಳವರೆಗೆ ಜೈಲು
    ಐಪಿಸಿ ಸೆಕ್ಷನ್‌ 342 – ವ್ಯಕ್ತಿಯನ್ನು ಅಕ್ರಮವಾಗಿ ಬಂಧನಕ್ಕೊಳಪಡಿಸುವುದು – ಒಂದು ವರ್ಷ ಜೈಲು

    ಪ್ರೇಮ ಏನ್‌ ಅಹಂಕಾರ ನಿಂದು? ವಿಷ್ಣು ಸರ್‌ ಯಜಮಾನಕ್ಕೆ ನೀನು ಬೇಡ ಅಂದಿದ್ರು ಅದು ಗೊತ್ತಾ?; ಕಿಡಿಕಾರಿದ ಯಜಮಾನ ನಿರ್ಮಾಪಕ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading