Tuesday, August 4, 2026
spot_img
More
    spot_img
    HomeEntertainmentಹರ್ಷದ ಕೂಳು ನಂಬಿಕೊಂಡು ವರ್ಷದ ಕೂಳು ಬಿಟ್ರು; ದರ್ಶನ್‌ ನಂಬಿ ಜೈಲು ಸೇರಿದ ಫ್ಯಾನ್ಸ್‌ಗೆ ಟಾಂಗ್‌...

    ಹರ್ಷದ ಕೂಳು ನಂಬಿಕೊಂಡು ವರ್ಷದ ಕೂಳು ಬಿಟ್ರು; ದರ್ಶನ್‌ ನಂಬಿ ಜೈಲು ಸೇರಿದ ಫ್ಯಾನ್ಸ್‌ಗೆ ಟಾಂಗ್‌ ಕೊಟ್ರಾ ಉಮಾಪತಿ?

    ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ನಡೆದ 2018 ಹಾಗೂ 2019ರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಲವು ಕಲಾವಿದರು ಭಾಗಿಯಾಗಿದ್ದರು. ಈ ವರ್ಷಗಳಲ್ಲಿ ತೆರೆಗೆ ಬಂದಿದ್ದ ಹಾಗೂ ಸೆನ್ಸಾರ್‌ ಆಗಿದ್ದ ಚಿತ್ರಗಳ ಪೈಕಿ ಉತ್ತಮ ಚಿತ್ರಗಳು ಹಾಗೂ ಕಲಾವಿದರನ್ನು ಗುರುತಿಸಿ ರಾಜ್ಯ ಸರ್ಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

    Advertisement

    ಡಿ. ಸತ್ಯ ಪ್ರಕಾಶ್‌ ನಿರ್ದೇಶಿಸಿದ್ದ ಒಂದಲ್ಲಾ ಎರಡಲ್ಲಾ ಚಿತ್ರಕ್ಕೂ ಸಹ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿತ್ತು. ಚಿತ್ರಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ತಮ್ಮ ಕುಟುಂಬ ಸಮೇತರಾಗಿ ಬಂದು ಪ್ರಶಸ್ತಿಯನ್ನು ಸ್ವೀಕರಿಸಿದರು.

    ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಉಮಾಪತಿ ಶ್ರೀನಿವಾಸ್‌ ಯಾರೋ ಒಬ್ಬರು ಸ್ಟಾರ್‌ಗಳಿಂದ ನಿರ್ಮಾಪಕರು ಎಂದಿದ್ದರು ಅವರಿಗೆ ಈಗಾಗಲೇ ನಾನು ಉತ್ತರ ಕೊಟ್ಟಿದ್ದೇನೆ, ನಿರ್ಮಾಪಕ ಹಾಗೂ ನಿರ್ದೇಶಕನಿಂದ ಸ್ಟಾರ್‌ ಹುಟ್ಟುತ್ತಾನೆ, ಬಳಿಕ ವೀಕ್ಷಕರು ಆತನನ್ನು ಸ್ಟಾರ್‌ ಮಾಡುತ್ತಾರೆ ಎಂದರು.

    ಇನ್ನು ನಿರ್ಮಾಪಕನೇ ಅನ್ನದಾತ ಎಂದು ಮತ್ತೊಮ್ಮೆ ಹೇಳಿದ ಉಮಾಪತಿ ಶ್ರೀನಿವಾಸ್‌ ಈಗ ಏನಾಗಿಬಿಟ್ಟಿದೆ ಅಂದರೆ ಸ್ಟಾರ್‌ ಆದ ಬಳಿಕ ಅನ್ನದಾತರು ಬೇಕಾದಷ್ಟು ಜನ ಆಗಿಬಿಡ್ತಾರೆ. ಈ ಫ್ಯಾನ್‌ಕ್ಲಬ್‌ಗಳನ್ನು ಕಟ್ಟಿಕೊಂಡು ಕ್ಯಾಂಪೇನ್‌ಗಳಿಗೆ ಕರೆದುಕೊಂಡು ಹೋಗಿ ಅನ್ನ ಹಾಕಿದರೆ ಅವರನ್ನು ಅನ್ನದಾತರು ಎಂದುಬಿಡ್ತಾರೆ. ಅದಲ್ಲ ಅನ್ನದಾತರು ಎಂದರೆ ಏಕೆಂದರೆ ಪ್ರತಿನಿತ್ಯ ಅನ್ನ ಕೊಡುವವರು ಅನ್ನದಾತರೇ ಹೊರತು ವರ್ಷಕ್ಕೊಂದು ಸರಿ ಅನ್ನ ಕೊಡುವವರು ಯಾವುದೇ ಕಾರಣಕ್ಕೂ ಅನ್ನದಾತರಾಗಲ್ಲ. ಅದಕ್ಕೆ ಹಿರಿಯರು ಹೇಳಿರುವುದು ವೇದ ಸುಳ್ಳಾದರೂ ಗಾದೆ ಸುಳ್ಳಾಗಲ್ಲ ಎಂದು. ಈ ಹರ್ಷದ ಕೂಳು ನಂಬಿಕೊಂಡು ವರ್ಷದ ಕೂಳು ಕಳೆದುಕೊಂಡರು ಅಂತ ನಿದರ್ಶನ ನಿಮ್ಮ ಮುಂದೆಯೇ ಇದೆ ಎಂದರು.

    ಹೀಗೆ ಉಮಾಪತಿ ಶ್ರೀನಿವಾಸ್‌ ನೀಡಿದ ಹೇಳಿಕೆ ದರ್ಶನ್‌ ಹಿಂದೆ ಬಿದ್ದು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಕೆಲ ದರ್ಶನ್‌ ಅಭಿಮಾನಿಗಳ ಕುರಿತು ಹೇಳಿದಂತಿದೆ. ಹರ್ಷದ ಕೂಳಿನ ಹಿಂದೆ ಬಿದ್ದು ಜೈಲು ಪಾಲಾಗಿ ಇದೀಗ ವರ್ಷದ ಕೂಳನ್ನು ಅವರೂ ಸಹ ಕಳೆದುಕೊಂಡಿದ್ದಾರೆ.

    ಪ್ರೇಮ ಏನ್‌ ಅಹಂಕಾರ ನಿಂದು? ವಿಷ್ಣು ಸರ್‌ ಯಜಮಾನಕ್ಕೆ ನೀನು ಬೇಡ ಅಂದಿದ್ರು ಅದು ಗೊತ್ತಾ?; ಕಿಡಿಕಾರಿದ ಯಜಮಾನ ನಿರ್ಮಾಪಕ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading