Sunday, August 30, 2026
spot_img
More
    spot_img
    HomeLatest newsಜಾಗ್ವಾರ್‌ ಲ್ಯಾಂಡ್‌ ರೋವರ್‌ (ಜೆಎಲ್‌‍ಆರ್‌) ಸಂಸ್ಥೆಗೆ ಸಿಇಒ ಹುದ್ದೆಗೆ ಮೊದಲಬಾರಿ ಭಾರತದವರು ನೇಮಕ! ಯಾರವರು?

    ಜಾಗ್ವಾರ್‌ ಲ್ಯಾಂಡ್‌ ರೋವರ್‌ (ಜೆಎಲ್‌‍ಆರ್‌) ಸಂಸ್ಥೆಗೆ ಸಿಇಒ ಹುದ್ದೆಗೆ ಮೊದಲಬಾರಿ ಭಾರತದವರು ನೇಮಕ! ಯಾರವರು?

    ಜಾಗ್ವಾರ್‌ ಲ್ಯಾಂಡ್‌ ರೋವರ್‌ (ಜೆಎಲ್‌‍ಆರ್‌) ಸಂಸ್ಥೆಯ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಪಿ. ಬಿ ಬಾಲಾಜಿ ಅವರನ್ನು ನೇಮಕ ಮಾಡಲಾಗಿದೆ. ಬಾಲಾಜಿ ಅವರು ಬ್ರಿಟಿಷ್‌ ಕಾರು ತಯಾರಕ ಸಂಸ್ಥೆಯನ್ನು ಮುನ್ನಡೆಸುವ ಮೊದಲ ಭಾರತೀಯ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    Advertisement

    ಟಾಟಾ ಮೋಟಾರ್ಸ್‌ಗೆ ಸೇರುವ ಮೊದಲು, ಬಾಲಾಜಿ ಅವರಿಗೆ ಹಿಂದೂಸ್ತಾನ್ ಯೂನಿಲಿವರ್ ನಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ ಅನುಭವವಿತ್ತು. ಅವರು 2007 ರಲ್ಲಿ ಸಿಂಗಾಪುರದ ಯೂನಿಲಿವರ್‌ನ ಖಜಾನೆ ವಿಭಾಗದಲ್ಲಿ ಉಪಾಧ್ಯಕ್ಷರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

    ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಆಡ್ರಿಯನ್ ಮಾರ್ಡೆಲ್ ಅವರು 35 ವರ್ಷಗಳ ನಂತರ ಹುದ್ದೆಯಿಂದ ಕೆಳಗಿಳಿದ ನಂತರ, ಪಿಬಿ ಬಾಲಾಜಿ ಅವರನ್ನು ಕಂಪನಿಯ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ನೇಮಿಸಲಾಗಿದೆ. “ಆಡ್ರಿಯನ್ ಮಾರ್ಡೆಲ್ ಮೂರು ವರ್ಷಗಳ ಸಿಇಒ ಮತ್ತು 35 ವರ್ಷಗಳ ಕಂಪನಿಯಲ್ಲಿ ಸೇವೆ ಸಲ್ಲಿಸಿದ ನಂತರ ಜೆಎಲ್‌ಆರ್‌ನಿಂದ ನಿವೃತ್ತರಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ”.

    ಪಿಬಿ ಬಾಲಾಜಿ ಐಐಟಿ ಮದ್ರಾಸ್‌‍ನಿಂದ (1991) ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಬಿಟೆಕ್‌ ಪದವಿ ಮತ್ತು ಐಐಎಂ ಕಲ್ಕತ್ತಾದಿಂದ (1993) ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಬಾಲಾಜಿ 1995 ರಲ್ಲಿ ಯೂನಿಲಿವರ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ನವೆಂಬರ್‌ 2017 ರಲ್ಲಿ, ಬಾಲಾಜಿ ಅವರು ಟಾಟಾ ಮೋಟಾರ್ಸ್‌ನಲ್ಲಿ ಗ್ರೂಪ್‌ ಮುಖ್ಯ ಹಣಕಾಸು ಅಧಿಕಾರಿಯಾಗಿ ಸೇರಿದರು.

    ಟಾಟಾ ಮೋಟಾರ್ಸ್‌ಗೆ ಸೇರುವ ಮೊದಲು, ಬಾಲಾಜಿ ಅವರಿಗೆ ಹಿಂದೂಸ್ತಾನ್ ಯೂನಿಲಿವರ್‌ನಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ ಅನುಭವವಿತ್ತು. ಅವರು 2007 ರಲ್ಲಿ ಸಿಂಗಾಪುರದ ಯೂನಿಲಿವರ್‌ನ ಖಜಾನೆ ವಿಭಾಗದಲ್ಲಿ ಉಪಾಧ್ಯಕ್ಷರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

    ,ಡೆತ್‌ ನೋಟ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಜಾನಪದ ಗಾಯಕಿಯ ಮಗ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading