Monday, August 31, 2026
spot_img
More
    spot_img
    HomeSportsCricketIPL 2025: ಅಂತೂ ಗೆದ್ದ ಚೆನ್ನೈ; ಕೆಕೆಆರ್ ಪ್ಲೇಆಫ್ ಕನಸು ಭಗ್ನ

    IPL 2025: ಅಂತೂ ಗೆದ್ದ ಚೆನ್ನೈ; ಕೆಕೆಆರ್ ಪ್ಲೇಆಫ್ ಕನಸು ಭಗ್ನ


    ಕೋಲ್ಕತ್ತ: 18ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ 57ನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಈಡನ್‌ ಗಾರ್ಡನ್‌ನಲ್ಲಿ ಗೆಲುವಿಗಾಗಿ ಸೆಣಸಾಡಿದವು.

    Advertisement

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಕೆಕೆಆರ್‌ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 179ರನ್‌ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆ 8 ವಿಕೆಟ್‌ ಕಳೆದುಕೊಂಡು 2 ಎಸೆತಗಳು ಬಾರಿ ಇರುವಂತೆ ಗೆಲುವಿನ ಡದ ಸೇರಿತು.

    ಸಿಎಸ್‌ಕೆ ವಿರುದ್ದ ಸೋಲು ಅನುಭವಿಸುವ ಮೂಲಕ ಕೆಕೆಆರ್‌
    ಪ್ಲೇಆಫ್‌ ಪ್ರವೇಶಿಸುವ ಕನಸಿಗೆ ತಣ್ಣಿರು ಎರಚಿದಂತಾಗಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಕೋಲ್ಕತ್ತ ನೈಟ್‌ ರೈಡರ್ಸ್‌ ಪರ ಉತ್ತಮ ಬ್ಯಾಟ್‌ ಮಾಡಿದ
    ನಾಯಕ ಅಜಿಂಕ್ಯ ರಹಾನೆ 48ರನ್‌ ಬಾರಿಸಿದರು.ಆಂಡ್ರ್ಯೆ ರಸೆಲ್‌ 38, ಮನಿಷ್‌ ಪಾಂಡೆ 36 ಮತ್ತು ಸುನಿಲ್‌ ನರೈನ್‌ 26ರನ್‌ ಬಾರಿಸಿದರು. ಅಂತಿಮವಾಗಿ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 179ರನ್‌ಗಳಿಸಿತು.
    ಸಿಎಸ್‌ಕೆ ಪರ ಉತ್ತಮ ಬೌಲಿಂಗ್‌ ಮಾಡಿದ ನೂರ್‌ ಅಹ್ಮದ್‌ 4 ವಿಕೆಟ್‌ ಕಬಳಿಸಿದರು. ರವೀಂದ್ರ ಜಡೇಜಾ ಮತ್ತು ಅಂಶೂಲ್‌ ಕಾಂಬೊಜ ತಲಾ ಒಂದು ವಿಕೆಟ್‌ ಪಡೆದುಕೊಂಡರು.

    ಈ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಆರಂಭಿಕ ಆಘಾತ ಎದುರಿಸಿದರು. ಆಯುಷ್‌ ಮಾತ್ರೆ ಮತ್ತು ಡಿವೊನ್‌ ಕಾನ್ವೆ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು. ನಂತರ ಕ್ರೀಸ್‌ಗಿಳಿದ ಉರ್ವಿ ಪಟೇಲ್‌ 31ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರೇ ಜಡೇಜಾ 19ರನ್‌ಗಳಿಸಿದರು. ಅಶ್ವಿನ್‌ 8 ‌ರನ್‌ಗಳಿಗೆ ಪೆವಿಲಿಯನ್‌ ಕಡೆಗೆ ನಡೆದರು. ಮೊದಲ ಐದು ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡ ಸಿಎಸ್‌ಕೆ ಸಂಕಷ್ಟಕ್ಕೆ ಸಿಲುಕಿತು. ನಂತರದಲ್ಲಿ ಡೆವಾಲ್ಡ್ ಬ್ರೆವಿಸ್‌ 52ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಶಿವಂ ದುಬೆ 45ರನ್‌ಗಳಿಸಿದರು. ನೂರ್‌ ಅಹ್ಮದ್‌ 2 ರನ್‌ ಬಾರಿಸಿದರು. ಎಂಎಸ್‌ ಧೋನಿ ಅಜೇಯ 17ರನ್‌ ಗಳಿಸಿದರು.

    ಕೆಕೆಆರ್‌ ಪರ ಉತ್ತಮ ಬೌಲಿಂಗ್‌ ಮಾಡಿದ
    ವೈಭವ್‌ ಅರೋರಾ 3 ವಿಕೆಟ್‌ ಕಬಳಿಸಿದರು.
    ಹರ್ಷಿತ್‌ ರಾಣಾ ಮತ್ತು ವರುಣ್‌ ಚಕ್ರವರ್ತಿ ತಲಾ ಎರಡು ವಿಕೆಟ್‌ ಪಡೆದುಕೊಂಡರು. ಮೊಯಿನ್‌ ಅಲಿ ಒಂದು ವಿಕೆಟ್‌ ಪಡೆದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading