ಶ್ರಾವಣ ಮಾಸವು ಹಬ್ಬಗಳ ಮಾಸವಾಗಿದ್ದು, ನಾಗರ ಪಂಚಮಿಯ ನಂತರ ಈಗ ವರಮಹಾಲಕ್ಷ್ಮಿ ವ್ರತದ ಸರದಿ. ಲಕ್ಷ್ಮಿ ದೇವಿಯನ್ನು ಸಂಪತ್ತು ಮತ್ತು ಸಮೃದ್ಧಿಯ ಅಧಿದೇವತೆ ಎಂದು ಪರಿಗಣಿಸಲಾಗುತ್ತದೆ. ಆಕೆಯ ಆಶೀರ್ವಾದ ಪಡೆದರೆ ಜೀವನದ ಕಷ್ಟಗಳು ದೂರವಾಗಿ, ಸಂಪತ್ತಿನ ಹರಿವು ಹೆಚ್ಚುತ್ತದೆ ಎಂಬ ನಂಬಿಕೆ ಇದೆ.ಲಕ್ಷ್ಮಿ ದೇವಿಯನ್ನು ಸಂಪತ್ತು ಮತ್ತು ಸಮೃದ್ಧಿಯ ಅಧಿದೇವತೆ ಎಂದು ಪರಿಗಣಿಸಲಾಗುತ್ತದೆ. ಆಕೆಯ ಆಶೀರ್ವಾದ ಪಡೆದರೆ ಜೀವನದ ಕಷ್ಟಗಳು ದೂರವಾಗಿ, ಸಂಪತ್ತಿನ ಹರಿವು ಹೆಚ್ಚುತ್ತದೆ ಎಂಬುದು ಭಕ್ತರ ನಂಬಿಕೆ.
ವರಮಹಾಲಕ್ಷ್ಮಿ ವ್ರತದ ಮಹತ್ವ
ವರಮಹಾಲಕ್ಷ್ಮಿ ಹಬ್ಬವು ಮಹಿಳಾ ಪ್ರಧಾನ ಹಬ್ಬವಾಗಿದ್ದು, ಮಹಿಳೆಯರು ತಮ್ಮ ಕುಟುಂಬದ ಸುಖ, ಸಮೃದ್ಧಿ ಮತ್ತು ಸಂಪತ್ತಿಗಾಗಿ ಲಕ್ಷ್ಮಿ ದೇವಿಯ ಆರಾಧನೆ ಮಾಡುತ್ತಾರೆ. ಲಕ್ಷ್ಮಿಯು ಮಹಾಲಕ್ಷ್ಮಿಯ ಅವತಾರವೆಂದು ನಂಬಲಾಗಿದೆ. ಹೀಗಾಗಿ, ಈ ವ್ರತವನ್ನು ಶ್ರದ್ಧೆಯಿಂದ ಆಚರಿಸಿದರೆ ದೇವಿ ಸಂತುಷ್ಟಳಾಗಿ ಮನೆಯಲ್ಲಿ ನೆಲೆಸುತ್ತಾಳೆ, ಭಕ್ತರಿಗೆ ಸುಖ, ಸಮೃದ್ಧಿ ಮತ್ತು ಸಂಪತ್ತನ್ನು ಕರುಣಿಸುತ್ತಾಳೆ ಎಂಬುದು ಭಕ್ತರ ನಂಬಿಕೆಯಾಗಿದೆ.ಕೆಲವರು ಈ ವ್ರತವನ್ನು ದೀಪಾವಳಿ ಸಮಯದಲ್ಲಿ “ಲಕ್ಷ್ಮಿ ಪೂಜೆ” ಎಂಬ ಹೆಸರಿನಲ್ಲಿ ಆಚರಿಸುವುದುಂಟು. ಆದರೆ, ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮಿಯ ಪೂಜೆ ಮಾಡುವುದರಿಂದ, ಆಕೆಯು ವರವನ್ನು ನೀಡುವ ಸಂಪತ್ತು ದೇವತೆಯಾಗಿ ನಾವು ಬೇಡಿದ್ದನ್ನು ಕರುಣಿಸುತ್ತಾಳೆ ಎಂದು ನಂಬಲಾಗಿದೆ.

ಲಕ್ಷ್ಮಿ ದೇವಿಯ ಕಳಶ ಅಲಂಕಾರ ಮಾಡುವ ವಿಧಾನ
1.ಕಳಶಕ್ಕೆ ಜಾಗವನ್ನು ಸಿದ್ಧಪಡಿಸುವುದು:
ಮೊದಲನೆಯದಾಗಿ, ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಲು ಸೂಕ್ತವಾದ ಜಾಗವನ್ನು ಆಯ್ದುಕೊಳ್ಳಿ. ದೇವರ ಕೋಣೆಯಲ್ಲಿ ಸಾಕಷ್ಟು ಸ್ಥಳವಿಲ್ಲದಿದ್ದರೆ, ನೀವು ಮನೆಯಲ್ಲಿ ಲಕ್ಷ್ಮಿ ಪೂಜೆಗೆ ಬಳಸುವ ಯಾವುದೇ ಜಾಗದಲ್ಲಿ ಒಂದು ಟೇಬಲ್ ಅಥವಾ ಮಣೆಯ ಮೇಲೆ ಇದನ್ನು ಸ್ಥಾಪಿಸಬಹುದು.
2.ಕಳಶದ ಸಿದ್ಧತೆ:
ಕಳಶದ ಆಯ್ಕೆ: ಪೂಜೆಗೆ ಬೆಳ್ಳಿ, ತಾಮ್ರ ಅಥವಾ ಹಿತ್ತಾಳೆ ಕಳಶವನ್ನು ಬಳಸಬಹುದು. ಕೆಲವರು ಮಣ್ಣಿನ ಕಲಶವನ್ನೂ ಉಪಯೋಗಿಸುತ್ತಾರೆ.
ಶುದ್ಧೀಕರಣ: ಕಳಶವನ್ನು ಶುದ್ಧವಾದ ನೀರಿನಿಂದ ತೊಳೆದು ಒರೆಸಿ. ನಂತರ ಕಳಶದ ಹೊರಭಾಗಕ್ಕೆ ಅರಿಶಿನ, ಕುಂಕುಮ ಮತ್ತು ಗಂಧದಿಂದ ಅಲಂಕಾರ ಮಾಡಿ.
ಕಳಶ ತುಂಬುವುದು: ಕಳಶದ ಒಳಗೆ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿ. ನಂತರ ಅದರಲ್ಲಿ ಒಂದೆರಡು ಕಾಯಿನ್, ಅರಿಶಿನ, ಕುಂಕುಮ, ಅಡಿಕೆ, ಒಂದು ಎಳೆ ಮಾವಿನ ಎಲೆ ಹಾಕಿ.

- ಕಳಶದ ಮೇಲಿನ ಅಲಂಕಾರ:
ತೆಂಗಿನಕಾಯಿ: ಕಳಶದ ಬಾಯಿಗೆ ಐದು ಅಥವಾ ಏಳು ಮಾವಿನ ಎಲೆಗಳನ್ನು ಸುತ್ತಲೂ ಇಟ್ಟು, ಅದರ ಮಧ್ಯದಲ್ಲಿ ತೆಂಗಿನಕಾಯಿಯನ್ನು ಇರಿಸಿ. ತೆಂಗಿನಕಾಯಿಗೆ ಮೊದಲೇ ಅರಿಶಿನ-ಕುಂಕುಮ ಹಚ್ಚಿ ಅಲಂಕರಿಸಿರಬೇಕು.
ಲಕ್ಷ್ಮಿಯ ಮುಖ: ಹಲವು ಕುಟುಂಬಗಳು ಬೆಳ್ಳಿಯಿಂದ ಮಾಡಿದ ಲಕ್ಷ್ಮಿ ದೇವಿಯ ಮುಖವನ್ನು ಬಳಸುತ್ತಾರೆ. ಈ ಮುಖವನ್ನು ತೆಂಗಿನಕಾಯಿಯ ಮೇಲೆ ಸರಿಯಾಗಿ ಇರಿಸಬೇಕು.
ಬಟ್ಟೆ ಮತ್ತು ಆಭರಣ: ಕಳಶಕ್ಕೆ ಹೊಸ ಸೀರೆ ಅಥವಾ ಬಟ್ಟೆಯನ್ನು ಹೊದಿಸಿ. ಲಕ್ಷ್ಮಿ ದೇವಿಯ ಮುಖಕ್ಕೆ ಚಿನ್ನಾಭರಣ, ಹೂವಿನ ಹಾರ ಮತ್ತು ಇತರ ಅಲಂಕಾರಗಳನ್ನು ಮಾಡಬಹುದು.
ಈ ಎಲ್ಲಾ ಸಿದ್ಧತೆಗಳನ್ನು ಹಬ್ಬದ ಹಿಂದಿನ ದಿನವೇ ಮಾಡಿಕೊಂಡು, ವ್ರತದ ದಿನ ಮುಹೂರ್ತದ ಸಮಯಕ್ಕೆ ಸರಿಯಾಗಿ ಪೂಜೆಯನ್ನು ಆರಂಭಿಸಬಹುದು.
ವರಮಹಾಲಕ್ಷ್ಮಿ ವ್ರತದ ಆಚರಣೆ
ಈ ಶುಭ ದಿನದಂದು ಮಹಿಳೆಯರು ಉಪವಾಸವನ್ನು ಆಚರಿಸಿ, ಲಕ್ಷ್ಮಿ ದೇವಿಯ ಮೂರ್ತಿಯನ್ನು ಪೂಜಿಸುತ್ತಾರೆ. ಅನೇಕ ಭಕ್ತರು ಮನೆಯಲ್ಲಿ ಪೂಜೆ ಸಲ್ಲಿಸಿದ ನಂತರ ದೇವಾಲಯಗಳಿಗೂ ಭೇಟಿ ನೀಡುತ್ತಾರೆ.
ಪೂಜೆಯ ವಿಧಿವಿಧಾನಗಳು
ಪೂಜೆಯ ಸಮಯದಲ್ಲಿ, ಲಕ್ಷ್ಮಿ ದೇವಿಗೆ ಈ ಕೆಳಗಿನ ವಸ್ತುಗಳನ್ನು ಅರ್ಪಿಸಲಾಗುತ್ತದೆ,ಅರಿಶಿನ, ಕುಂಕುಮ, ಹೂವುಗಳು ಮತ್ತು ಹಣ್ಣುಗಳು.ದೇವಿಗೆ ವಿಶೇಷ ನೈವೇದ್ಯಗಳು.ವಿಶೇಷವಾಗಿ ಒಂಬತ್ತು ಗಂಟುಗಳನ್ನು ಹೊಂದಿರುವ ಹಳದಿ ದಾರ (ತೋರಂ).ಈ ಹಳದಿ ದಾರವನ್ನು ಮೊದಲು ದೇವಿಗೆ ಅರ್ಪಿಸಿ, ನಂತರ ಮಹಿಳೆಯರು ಅದನ್ನು ತಮ್ಮ ಬಲಗೈಗೆ ಕಟ್ಟಿಕೊಳ್ಳುತ್ತಾರೆ. ಈ ರೀತಿಯ ಆಚರಣೆಗಳ ಮೂಲಕ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲಾಗುತ್ತದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


